ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

27 Dec 2011

ಭಾರತದ ರಾಷ್ಟ್ರಗೀತೆಗೆ ಶತಮಾನೋತ್ಸವದ ಸಂಭ್ರಮ ..!!

ಭಾರತದ ರಾಷ್ಟ್ರಗೀತೆಯಾದ 'ಜನಗಣ ಮನ ಅಧಿನಾಯಕ ಜಯಹೇ' ಗೀತೆಯನ್ನು "ಗೀತಾಂಜಲಿ" ಕೃತಿಗೆಗಾಗಿ ಪ್ರಥಮ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯ ಕವಿ ರವಿಂದ್ರನಾಥ್ ಟ್ಯಾಗೋರರವರು ಬಂಗಾಳಿ ಭಾಷೆಯಲ್ಲಿ ರಚಿಸಿದ್ದಾರೆ.ಈ ರಾಷ್ಟ್ರಗೀತೆಯನ್ನು 24 ಜನೆವರಿ 1950 ರಂದು ಭಾರತದ ಸಂವಿಧಾನದಲ್ಲಿ ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಯಿತು ಈ ಗೀತೆಯನ್ನು 27 ಡಿಸೆಂಬರ್ 1911 ರಂದು ಪ್ರಥಮ ಬಾರಿಗೆ ಕಲ್ಕತ್ತಾ ದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು.ಅದ್ದರಿಂದ ಅಂದಿನಿಂದ ಈ ರಾಷ್ಟ್ರ ಗೀತೆಯನ್ನು ಈಗ ಶಾಲೆ,ಕಾಲೇಜು,ಸರಕಾರಿ ಆಫೀಸ್ಗಳಲ್ಲಿ ಹಾಡಲಾಗುತ್ತಿದೆ.ಈ ಗೀತೆ ನಮ್ಮ ದೇಶದ ರಾಷ್ಟ್ರಭಿಮಾನವನ್ನು ಎತ್ತಿತೊರಿಸುವಲ್ಲಿ ಪ್ರೇರಣೆಯಾಗಿದೆ.ಇದರಲ್ಲಿ 5 ಪ್ಯಾರಗಳಿದ್ದು 52 ಸೆಕೆಂಡ್ ಗಳಲ್ಲಿ ಹಾಡಿ ಮುಗಿಸಲೇಬೇಕು.ಈ ಗೀತೆಯಲ್ಲಿ ಇಡೀ ಭಾರತದ ಸಂಸ್ಕೃತಿಯ ಪ್ರತಿಬಿಂಬವನ್ನು ಬಿಂಬಿಸಲಾಗಿದೆ. ಇಂದಿಗೆ ಈ ಗೀತೆಯು 100 ವರ್ಷ ಪೂರೈಸಿ ಶತಮಾನೋತ್ಸವದ ಹೊಸ್ತಿಲಿಗೆ ಕಾಲಿಟ್ಟಿದೆ.ಇನ್ನು ಹೆಚ್ಹು ಹೆಚ್ಚು ನಮ್ಮ ರಾಷ್ಟ್ರದ ಸ್ವಾಭಿಮಾನದ ಕೀರ್ತಿ ಪತಾಕೆ ಎಲ್ಲೆಡೆ ಹಾರಿ ಭಾರತೀಯ ದೆಶಾಭಿಮಾನಿಗಳಲ್ಲಿ ರಾಷ್ಟ್ರೀಯ ಭಾವನೆಯನ್ನು ತುಂಬಲು ರಾಷ್ಟ್ರಗೀತೆಯು ಉತ್ತಮವಾದ ಸಾಧನೆಗಳಲ್ಲೊಂದಾಗಿದೆ. ಹಾಗೆಯೇ ರಾಷ್ಟ್ರಾಭಿಮಾನದ ಸಂಭ್ರಮವನ್ನು ಹೆಚ್ಚಿಸಿ ಭಾರತವು ಶೈಕ್ಷಣಿಕವಾಗಿ,ಆರ್ಥಿಕವಾಗಿ ಸುಧಾರಣೆಯಾಗಿ ಅಭಿವೃದ್ದಿಯತ್ತ ಸಾಗಲಿ ಜೈ ಹಿಂದ ಭಾರತ ಮಾತಾಕಿ ಜೈ ...!!
ಭಾರತದ ರಾಷ್ಟ್ರಗೀತೆ
ಜನಗಣಮನ ಅಧಿನಾಯಕ ಜಯಹೇ !!
ಭಾರತ ಭಾಗ್ಯವಿದಾತ!!
ಪಂಜಾಬ ಸಿಂಧು ಗುಜರಾತ ಮರಾಠ !!
ದ್ರಾವಿಡ ಉತ್ಕಲ ವಂಗಾ !!
ವಿಂದ್ಯ ಹಿಮಾಚಲ ಯಮುನಾ ಗಂಗಾ !!
ಉಚ್ಛಲ ಜಲಧಿತ ರಂಗಾ !!
ತವಶುಭ ನಾಮೇ ಜಾಗೇ !!
ತವಶುಭ ಅಶಿಸ ಮಾಗೇ !!
ಗಾಹೇ ತವ ಜಯ ಗಾಥಾ !!
ಜನಗಣ ಮಂಗಳ ದಾಯಕ ಜಯಹೇ !!
ಭಾರತ ಭಾಗ್ಯವಿಧಾತಾ !!
ಜಯ ಹೇ, ಜಯ ಹೇ, ಜಯ ಹೇ !!
ಜಯ ಜಯ ಜಯ ಜಯಹೇ !!

26 Dec 2011

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರೆಪ್ಪನವರು ವಿಧಿವಶ...!!!

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರೆಪ್ಪನವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ನಿನ್ನೆ ರಾತ್ರಿ 12 .45 ಕ್ಕೆಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ
ಕೊನೆಯುಸಿರೆಳೆದರು.ಬಂಗಾರಪ್ಪನವರು ಇತ್ತಿಚೆಯಿಂದ ಮಧುಮೇಹರೋಗ ಹಾಗೂ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.ಕ್ರಿಯಾಶೀಲ ಚತುರ ರಾಜಕಾರಣಿ ಬಡವರ,ರೈತರ,ದಿನದಲಿತರ ನಾಯಕರಾಗಿ ಸೇವೆಸಲ್ಲಿಸಿದ ಪ್ರಾಮಾಣಿಕ ರಾಜಕಾರಣಿಯಾಗಿದ್ದರು.ಶಿವಮೊಗ್ಗ ಜಿಲ್ಲೆಯ ಸೊರಬ ತಾಲುಕಿನವರಾದ ಇವರು 1962 ರಲ್ಲಿ ರಾಜಕೀಯಕ್ಕೆ ಕಾಲಿಟ್ಟಿದ್ದರು ನಂತರ 1979 -80 ರಲ್ಲಿ ಕೆಪಿಸಿಸಿ ಅದ್ಯಕ್ಷ್ಯರಾಗಿ 19 91 -92 ರಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆಸಲ್ಲಿಸಿದ್ದರು. ಅಲ್ಲದೇ ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು.ಇತ್ತೀಚಿಗೆ ಕಾಂಗ್ರೆಸ ಪಕ್ಷ ಬಿಟ್ಟು ಜೆಡಿಎಸ್ ಪಕ್ಷವನ್ನು ಸೇರಿಕೊಂಡಿದ್ದರು ಇವರು ಪತ್ನಿ ಹಾಗೂ ಮೂವರು ಪುತ್ರಿಯರು ,ಇಬ್ಬರು ಪುತ್ರರನ್ನು ಅಗಲಿದ್ದಾರೆ.ಅಲ್ಲದೇ ಸುದ್ದಿ ತಿಳಿಯುತ್ತಿದ್ದಂತೆ ಅಳಿಯನಾದ ಚಿತ್ರನಟ ಶಿವರಾಜಕುಮಾರ,ಪಾರ್ವತಮ್ಮ ರಾಜಕುಮಾರ ಹಾಗೂ ಪ್ರತಿಷ್ಠಿತ ರಾಜಕಾರಣಿಗಳಾದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ,ವಿದೇಶಾಂಗ ಸಚಿವರಾದ ಎಸ್.ಎಂ .ಕೃಷ್ಣ ,ಎಚ್. ಡಿ ದೇವೇಗೌಡ,ಮಲ್ಲಿಕಾರ್ಜುನ್ ಕಾರ್ಗೆ,ಶೋಭಾ ಕರಂದ್ಲಾಂಜೆ,ಡಿ.ಕೆ.ಶಿವುಕುಮಾರ ಅಲ್ಲದೇ ಇನ್ನಿತರ ಗಣ್ಯನಾಯಕರು ರಾಜಕಾರಣಿಗಳು ಬೆಂಗಳುರಿನ ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಭೇಟಿನೀಡಿ ಕುಟುಂಬದವರಿಗೆ ಸಮಾಧಾನಹೇಳಿ ಸಂತಾಪ ಸೂಚಿಸಿ ಅಂತಿಮ ನಮನ ಸಲ್ಲಿಸಿದರು.ಅಲ್ಲದೇ ಅನೇಕ ಚಿತ್ರರಂಗದ ಹಿರಿಯ ಗಣ್ಯರು ಬಂದು ಕಂಬನಿ ಮಿಡಿದು ಅಂತಿಮ ದರ್ಶನ ಪಡೆದರು.ನಾಳೆ ಬಂಗರಪ್ಪನವರ್ ಹುಟ್ಟುರಾದ ಶಿವಮೊಗ್ಗದ ಸೊರಬನಲ್ಲಿ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ ಅಲ್ಲದೇ ಶಿವಮೊಗ್ಗ ಜಿಲ್ಲೆಯಾದ್ಯಂತ ಶಾಲೆ ,ಕಾಲೇಜುಗಳಿಗೆ ರಜೆ ಘೋಸಿಸಲಾಗಿದ್ದು ರಾಜ್ಯಾಯಾದ್ಯಂತ 3 ದಿನ ಶೋಕಾಚರಣೆ ಆಚರಿಸುವದಾಗಿ ಸಿಎಂ ಸದಾನಂದಗೌಡರು ಹೇಳಿದ್ದಾರೆ. ಯಶಸ್ವಿ,ಧಿಮಂತ ರಾಜಕಾರಣಿಯ ನಿಧನದಿಂದ ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದೆ.ಗ್ರಾಮೀಣ ಜನರ ಅಭಿವೃದ್ದಿಗಾಗಿ ಹಗಲಿರುಳು ಶ್ರಮಿಸಿದ ವರ್ಣರಂಜಿತ ರಾಜಕೀಯ ಮುತ್ಸದಿ,ಬಡವರಬಂಧುಗೆ ಆತ್ಮಕ್ಕೆಚಿರಶಾಂತಿ ದೊರೆಯಲಿ ಅವರ ನೆನಪು ಸದಾ ಅವಿಸ್ಮರಣೀಯ ಅಜರಾಮರ..!!!

23 Dec 2011

ಅಥ್ಲಿಟ್ ಅಶ್ವೀನಿ ಅಕ್ಕುಂಜಿಗೆ 1 ವರ್ಷ ನಿಷೇಧ..!!

ಕರ್ನಾಟಕದ ಉಡುಪಿಯವರಾದ ಖ್ಯಾತ ಮಹಿಳಾ ಅಥ್ಲಿಟ್ ಅಶ್ವೀನಿ ಅಕ್ಕುಂಜಿಯವರು ಕೆಲವು ದಿನಗಳ ಹಿಂದಯೇ ಉದ್ದೀಪನ ಸೇವನೆಯ ಪ್ರಕರಣವನ್ನು ಎದುರಿಸುತ್ತಿದ್ದರು ಈಗ ಉದ್ದೀಪನ ಸೇವನೆ ಮಾಡಿದ್ದೂ ಸಾಬಿತಾಗಿದ್ದು ನಾಡಾ-ರಾಷ್ಟ್ರೀಯ ಮದ್ದು ನಿಗ್ರಹ ಸಂಸ್ಥೆ ಅಸ್ವೀನಿ ಅಕ್ಕುಂಜಿ ಸೇರಿ ೬ ಅಥ್ಲಿಟ್ ಗಳಿಗೆ ಮನದೀಪ್ ಕೌರ,ಪನವರ,ಮೇರಿ ಥಾಮಸ್ ,ಸಿನಿ ಜೋಸ್,ಮರ್ಮಾ ಸೇರಿ 1 ವರ್ಷ ಪಂದ್ಯಗಳಲ್ಲಿ ಭಾಗವಹಿಸದಂತೆ ನಿಷೇಧ ಹೇರಿದೆ.ಅಲ್ಲದೇ ಯಾರೋ ಮಾಡಿದ ತಪ್ಪಿಗೆ ಅಸ್ವೀನಿ ಬಲಿಯಾಗಿದ್ದಾಳೆಂದು ಅಸ್ವೀನಿ ತಂದೆಯವರು ಬೇಸರವ್ಯಕ್ತಸಿದ್ದಾರೆ.ಹಾಗೆಯೇ 2012 ರ ಓಲಂಪಿಕ್ ಒಳಗೆ ನಿಷೇಧದ ಅವಧಿಯು ಪೂರ್ಣಗೊಂಡು ಒಲಂಪಿಕ್ ಗೆ ಭಾಗವಹಿಸುವ ಅವಕಾಶವೂ ಅಸ್ವೀನಿಗೆ ಲಭಿಸಬಹುದು.ಏನೆ ಅಗಲಿ ಭಾರತದ ಸ್ಥಾನವನ್ನು ಮೇಲೆತ್ತರಕ್ಕೆ ತರಲು ಶ್ರಮಿಸುತ್ತಿರುವ ಅಸ್ವೀನಿಗೆ ಹಿಗಾಗಿರುವದು ವಿಷಾದಕರ ಸಂಗತಿ ಮತ್ತೆ ಅವರಿಗೆ ಒಳ್ಳೆಯ ಅವಕಾಶಗಳು ಕೈ ಬಿಸಿ ಕರೆಯಲಿ ಅವರ ಒಲಂಪಿಕ್ ಕನಸು ನನಸಾಗಲಿ..!!

22 Dec 2011

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.ಸದಾನಂದಗೌಡರಿಗೆ 123 ಮತಗಳು ಕಾಂಗ್ರೆಸ್ ನ ಗಡ್ಡದೇವರ ಮಠ ಅವರಿಗೆ 69 ಮತಗಳು ಬಂದಿವೆ.225 ಶಾಸಕರರಲ್ಲಿ 119 ಮತದಾನ 7 ಮತಗಳು ಅಸಿಂಧುವಾಗಿದ್ದು ಚುನಾವಣೆ ನಂತರ ಸಿ ಎಂ ಸುದ್ದಿಗೊಸ್ಟಿಯೊಂದಿಗೆ ಮಾತನಾಡಿ ಶಾಸಕರು ವಿವೇಚನೆಯಿಂದ ಮತ ಚಲಾಯಿಸಬೇಕ್ಕಿತ್ತು ಎಂದು ಬೇಸರವ್ಯಕ್ತಪಡಿಸಿದರು ನಂತರ ಒಂದು ವಾರದೊಳಗೆ ಸಂಸದ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ದೆಹಲಿಗೆ ಭೇಟಿ ನೀಡಿ ವರಿಷ್ಠರೊಂದಿಗೆ ಮಾತನಾಡಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುವದಾಗಿ ಹೇಳದ್ದಾರೆ .ಅಲ್ಲದೇ ಶಾಸಕರು,ಸಂಸದರಿಗೆ ಅಭಿನಂದನೆ ಸಲ್ಲಿಸಿದ್ದಾರೆ ನಂತರ ನನ್ನ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತೆನೆಂದು ಹೇಳಿದರು. ಸದಾನಂದಗೌಡರು ಮೇಲ್ಮನೆ ಸದಸ್ಯತ್ವ ಪಡೆದ ಮೊದಲ ಸಿಎಂ ಇವರಾಗಿದ್ದಾರೆ.ನಂತರ ಎಲ್ಲ ಬಿಜೆಪಿ ಶಾಸಕರು ಅಭಿನಂದನೆ ಸಲ್ಲಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಏನೇ ಅಗಲಿ ಮೊದಲೇ ನಗು ಮುಖದವರಾದ ಸದಾನಂದಗೌಡರು ಮತ್ತಷ್ಟು ಹಸನ್ಮುಖರಾಗಿ ನಗೆ ಬಿರಿ ಸದಾ ಅರಳಲಿ ಎಂದು ಶುಭ ಹಾರೈಸೋಣ ...!!

14 Dec 2011

ಕಡಲೆಹಿಟ್ಟಿನ ನಿಪ್ಪಟ್ಟು..!


ಕಡಲೆಹಿಟ್ಟಿನ ನಿಪ್ಪಟ್ಟು ಮಾಡಲು ಬೇಕಾಗುವ ಪದಾರ್ಥಗಳು:
  • ಕಡಲೆಹಿಟ್ಟು
  • ಅಕ್ಕಿಹಿಟ್ಟು
  • ಅವಲಕ್ಕಿ
  • ಹುರಿದ ಕಡಲೆ ಬೀಜ(ಪುಟಾಣಿ )
  • ಬಿಳಿ ಎಳ್ಳು
  • ಈರುಳ್ಳಿ
  • ಜೀರಿಗೆ
  • ಸೋಡಾ
  • ರುಚಿಗೆ ಉಪ್ಪು
  • ಹಿಡಿ ಕೊತಂಬರಿ ಸೊಪ್ಪು
  • ಅಚ್ಚ ಖಾರದಪುಡಿ
ಬಿಸಿ ಬಿಸಿಯಾದ ನಿಪ್ಪಟ್ಟು ಮಾಡುವ ವಿಧಾನ:
.ಮೊದಲು ಒಣ ಅವಲಕ್ಕಿಯನ್ನು ಹಾಗೂ ಹುರಿದ ಪುಟಾಣಿಯನ್ನು ಮಿಕ್ಷಿಗೆ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಬೇಕು ನಂತರ ಪಾತ್ರೆಯಲ್ಲಿ ಅಕ್ಕಿಹಿಟ್ಟು,ಕಡಲೆಹಿಟ್ಟು,ಪುಡಿ ಮಾಡಿದ ಪುಟಾಣಿ,ಅವಲಕ್ಕಿ ಹಾಕಿ ನಂತರ ಕತ್ತರಿಸಿದ ಈರುಳ್ಳಿ,ಜೀರಿಗೆ,ಖಾರದ ಪುಡಿ ,ಉಪ್ಪು ಸೋಡಾ,ಹಿಡಿ ಕೊತಂಬರಿ ಸೊಪ್ಪು ಹಾಕಿ ಸ್ವಲ್ಪ ನಿರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸುವದು ೫ ನಿಮಿಷ ಬಿಟ್ಟು ೨ ಪ್ಲಾಸ್ಟಿಕ್ ಹಾಳೆ ತೆಗೆದುಕೊಂಡು ಹಿಟ್ಟಿನ ಉಂಡೆಯನ್ನುಅದರಲ್ಲಿ ಹಾಕಿ ಚಪಾತಿ ಮಣೆಯ ಮೇಲೆ ಲಟ್ಟಿಸಿ ಬೇಕಾದ ಆಕಾರಕ್ಕೆ ಮಾಡಿಕೊಂಡು ಎಣ್ಣೆಯಲ್ಲಿ ಕರಿಯುವದು ನಿಪ್ಪಟ್ಟು ತಿಂದರೆ ರುಚಿಯಾಗಿರತ್ತೆ ನಿಪ್ಪಟ್ಟನ್ನು ಸಂಜೆಯ ತಿಂಡಿಗೆ ಮಾಡಿದರೆ ಇನ್ನು ಚನ್ನಾಗಿರುತ್ತೆ,ಹಾಗೆ ರುಚಿ ರುಚಿಯಾದ ನಿಪ್ಪಟ್ಟು ಮಾಡಿ ಮನೆಯವರ ಮನಸನ್ನು ಅಹಲ್ಲಾದಕರವಾಗಿಸಿ.ರುಚಿಯಾದ ಆಹಾರ ಆರೋಗ್ಯಕ್ಕೆ ಉತ್ತಮವಾದುದು ,

9 Dec 2011

ಇಂದು 78 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ..

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆಯುತ್ತಿರುವ ೭೮ ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಶಾಸಕ ಪರಣ್ಣ ಮುನ್ನವಳ್ಳಿ ಯವರಿಂದ ಚಾಲನೆ ನೀಡಲಾಯಿತು.ಸಾಯಿಬಾಬ ಮಂದಿರದಿಂದ ಚಾಲನೆ ಮಾಡಿ ದ್ವಜಾರೋಹನವನ್ನು ಶಾಸಕ ಲಕ್ಷ್ಮನ್ ಸೌದಿಯವರು ನೆರವೇರಿಸಿದರು.ಹಾಗೇ ಕನ್ನಡ ದ್ವಜವನ್ನು ಸಾಹಿತಿ ನಲ್ಲೂರು ಪ್ರಸಾದರು ಹಾರಿಸಿದರು .ಸಮ್ಮೇಳನದಲ್ಲಿ ಎಲ್ಲೆಲ್ಲು ರಂಗೋಲಿ ರಾರಾಜಿಸುತ್ತಿದೆ.ಜನರು ಕೂಡ ಅದ್ದೂರಿ ಕನ್ನಡದ ಸಂಭ್ರಮದಲ್ಲಿದ್ದಾರೆ.ಸಮ್ಮೇಳನದ ಅದ್ಯಕ್ಷ್ಯರಾದ ಸಿ ಪಿ ಕೆ ಯವರನ್ನು ಮೆರವಣಿಗೆ ಮಾಡಲಾಯಿತು ಸಾವಿರಾರು ಕನ್ನಡಿಗರು ವಿವಿದೆಡೆಯಿಂದ ಬಂದು ಸಂಬ್ರಮದಲ್ಲಿ ಭಾಗವಹಿಸಿದ್ದಾರೆ.ಎಲ್ಲೆಲ್ಲು ಸಾಹಿತ್ಯದ ಕಂಪು ಹರಡಿದೆ.ಕನ್ನಡದ ಬಾವುಟಗಳು ರಾರಾಜಿಸುತ್ತಿವೆ.ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಕಲಾಮೇಳಗಳು ಆಗಮಿಸಿವೆ.ಕಾವ್ಯಗಾಯನ ಕಾರ್ಯಕ್ರಮವು ನಡೆಯಲಿದೆ ಇಂದಿನಿಂದ ೩ ದಿನಗಳವರೆಗೂ ಕನ್ನಡ ಸಮ್ಮೇಳನ ನಡೆಯಲಿದೆ.ಹಾಗೆಯೆ ಆಗಮಿಸುತ್ತಿರುವ ಲಕ್ಷಾಂತರ ಕನ್ನಡಿಗರಿಗಾಗಿ ಭರ್ಜರಿ ಭೋಜನವನ್ನು ಏರ್ಪಡಿಸಲಾಗಿದೆ.ರಾಜಸ್ತಾನದಿಂದ ವಿಶೇಷ ಅಡುಗೆಯವರು ಬಂದಿದ್ದಾರೆ. ರುಚಿ ರುಚಿಯಾದ ಉತ್ತರ ಕನ್ನಡದ ತಿಂಡಿಗಳು ಆಗಲೇ ತಯಾರಾಗಿವೆ.ಬನ್ನಿ ನಾವು ಕನ್ನಡ ಸಂಭ್ರಮದಲ್ಲಿ ಸೇರೋಣ ಕನ್ನಡದ ತೇರನ್ನು ಎಳೆಯೋಣ..ಜೈ ಕನ್ನಡಾಂಬೆ.

7 Dec 2011

ವಿರಾಟ್ ಕೊಹ್ಲಿಗೆ ಐಸಿಸಿ ಛೀಮಾರಿ..!

ಅಹಮದಾಬಾದನಲ್ಲಿ ಭಾರತ ಮತ್ತು ವೆಸ್ಟ್ ವಿಂಡೀಸ್ ನಡುವೆ ಸೋಮವಾರ ನಡೆದ ODI ಪಂದ್ಯದಲ್ಲಿ ವಿರಾಟ್ ಹಾಗೂ ರೋಹಿತ ಶರ್ಮಾ ಬ್ಯಾಟಿಂಗ್ ಮಾಡುವಾಗ lbw ಆಗಿದ್ದು ಅಂಪಾಯರ್ ಔಟ್ ಕೊಟ್ಟಾಗ ಕೊಹ್ಲಿ ಕೋಪದಿಂದ ಅಂಪಾಯರಗೆ ಬಯ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಕ್ರೋಶ ವ್ಯಕ್ತಪಡಿಸಿದ್ದನ್ನು ಖಂಡಿಸಿದ ಭಾರತದವರೇ ಆದ ಅಂಪಾಯರ ಸುದೀರ ಅಸನಾನಿ ಹಾಗೂ ಅವರ ಕುಟುಂಬದವರು, ಅವರ ಸ್ನೇಹಿತರಿಗೂ ಕೊಹಿಲಿಯ ಅಸಭ್ಯ ವರ್ತನೆಯಿಂದ ಮನನೊಂದು ಕೊಹಿಲಿ ಮಾಡಿದ್ದೂ ಸರಿಯಲ್ಲವೆಂದು ಬೇಸರವ್ಯಕ್ತಪ್ದಿಸಿದ್ದಾರೆ . ೨೩ ವರ್ಷದ ಕಿರಿಯ ಆಟಗಾರನಾದ ಕೊಹಿಲಿ ವರ್ತನೆ ಅಭಿಮಾನಿಗಳಿಗೂ ಬೇಸರ ತಂದಿದೆ.ಅಷ್ಟೇ ಅಲ್ಲ ಸಿಸಿ ಕ್ರಿಕೆಟ್ ಸಮಿತಿಯು ವಿರಾಟನನ್ನು ತರಾಟೆಗೆ ತೆಗೆದುಕೊಂಡಿದೆ 'ನೀನು ಮಾಡಿದ್ದು ಸರಿಯಲ್ಲವೆಂದು ಮತ್ತೆ ಇಂಥ ತಪ್ಪು ನಡೆಯಬಾರದೆಂದು ಎಚ್ಚರಿಕೆ ನೀಡಿದೆ.ವಿರಾಟ್ ತನ್ನ ತಪ್ಪಿನ ಅರಿವಾಗಿ ಸಿಸಿ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.ಅದರೂ ಉತ್ತಮ ಸ್ತಾನದಲ್ಲಿರುವ ಕ್ರಿಕೆಟಿಗ ಹೀಗೆ ಮಾಡಿದ್ದೂ ಸರಿಯೇ.. ಇಲ್ಲಿಯವರೆಗೂ ಭಾರತದ ಹಿರಿಯ ಆಟಗಾರರಾದ ಅನಿಲ್ ಕುಂಬ್ಳೆ ,ಧೋನಿ,ಸಚಿನ,ದ್ರಾವಿಡರಂತಹ ಪ್ರಭಾವಿ ಆಟಗಾರರು ಇಂಥಹ ಅಸಭ್ಯ ವರ್ತನೆಯನ್ನು ತೋರಿಸಿರಲಿಲ್ಲ ಏನೆ ಆಗಲಿ ವಿರಾಟ್ ಕೋಪ ಕಡಿಮೆ ಮಾಡಿಕೊಂಡರೆ ಒಳ್ಳೆಯ ಉತ್ತಮ ಆಟಗಾರ ಎಂದೆನಿಸಿಕೊಳ್ಳಬಹುದು.

4 Dec 2011

ದೇವ ಆನಂದ : ಹಿಂದಿ ಚಿತ್ರ ರಂಗದ ಅದ್ಬುತ ಶೈಲಿಯ ಚಿತ್ರ ನಟ.


Watch video inside

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಜಯಪುರ : ಭಾರತ ಕ್ರಿಕೆಟ್ ಕಂಡ ದಂತಕತೆ ದಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ. ನಾಲ್ಕು ಸೀಸನ್ ಇಪಿಎಲ್ ನಲ್ಲಿ ಆಸ್ತ್ರೆಲಿಯಾದ್ ಸ್ಪಿನ್ ಆಟಗಾರ ಶೇನ್ ವಾರ್ನ್ ನಾಯಕನಾಗಿದ್ದರು. ತದನಂತರ ವಾರ್ನ್ ಆಯಪಿಎಲ್ ಗೆ ವಿದಾಯ ಹೇಳಿದ ನಂತರ ನಾಯಕನ ಸ್ಥಾನ ಖಾಲಿಯಾಗಿತ್ತು . ೨೦೧೧ ರಲ್ಲಿ ರಾಜಸ್ತಾನ್ ತಂಡ ರಾಹುಲ್ ರನ್ನು ೫೦೦,೦೦೦ ಡಾಲರ್ ಗೆ ಕರಿದಿಸಿದ್ದರು ಇದಕಿಂತಲ್ಲು ಮುಂಚೆ ನಮ್ಮ ಬೆಂಗಳೂರು ತಂಡ ದಲ್ಲಿ ಆಡುತ್ತಿದ್ದರು . ದ್ರಾವಿಡ್ ಹೇಳಿಕೆ : "ನಮ್ಮ ತಂಡದಲ್ಲಿನ ಎಲ್ಲ ಆಟಗಾರರ ಸಾಮರ್ಥ್ಯ ನನಗೆ ಗೊತ್ತು ಎಲ್ಲರು ಅತ್ತ್ಯುತಮ ಆಟಗಾರರು ಆದ್ದರಿಂದ ನನ್ನ ತಂಡವನ್ನುಸಮರ್ಥ ರೀತಿಯಲ್ಲಿ ಮುನ್ನಡೆಸುತ್ತೆನೆಂಬ ಆತ್ಮ ವಿಶ್ವಾಸ,ನಂಬಿಕೆ ನನ್ನಲ್ಲಿದೆ ಉತ್ತಮ ಸ್ಥಾನ ಉಳಿಸಿಕೊಳ್ಳುವುದೇ ನನ್ನ ಗುರಿ" ಎಂದಿದ್ದಾರೆ. ಶೆನವಾರ್ನ್ ಹೇಳಿಕೆ : ರಾಹುಲ್ ವಿಶ್ವದ ಶ್ರೇಷ್ಟ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು ಅವರ ವ್ಯಕ್ತಿತ್ವ ಶ್ರೇಷ್ಟವಾದುದು ನಾಯಕರಾಗುವ ಅಹರ್ತೆ ಅವರಿಗಿದೆ ಎಂದಿದ್ದಾರೆ ಅಲ್ಲದೇ ಟಿಮ್ ನಲ್ಲಿ ಉತ್ತಮ ಆಟಗಾರರಿದ್ದಾರೆ ಅವರೆಂದರೆ ಸದ್ಯ ನ್ಯೂಜಿಲೆಂಡ್ ತಂಡದ ನಾಯಕನಾಗಿರುವ ರಾಸ್ ಟೇಲರ್,ಜೊನಾಥನ್ ಟ್ರೋಟ್ ಮತ್ತು ಪೌಲ್ ಕಾಲಿಂಗ್ ವುಡ್ದ್ ಮತ್ತೊಬ್ಬ ಆಸ್ಟ್ರೇಲಿಯಾದ ಆಲ್ ರೌಂಡರ ಶೇನ್ ವ್ಯಾಟ್ಸನ್ ಗಳೂ ನಾಯ್ಕ ರಾಗಲು ಸಮರ್ಥರು ಆದೆರೆ ರಾಹುಲ್ ರನ್ನೇ ಆಯ್ಕೆ ಮಾಡಲು ಸೂಚಿಸಿದ್ದರು ಆದ್ದರಿಂದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿ ಹೊರಹೊಮ್ಮಿದ್ದಾರೆ.ಕರ್ನಾಟಕದ ಹೆಮ್ಮೆಯ ಆಟಗಾರರಾಗಿ ಉತ್ತಮ ಮಟ್ಟಕ್ಕೆರಲಿ ಎನ್ನುವದೇ ನಮ್ಮೆಲ್ಲರ ಆಶಯ..ದೀ ವಾಲ್ ಬೆಸ್ಟ್ ಆಫ್ ಲಕ್ .

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.ಬಾರಿ ಅಬ್ಬರದ ಪ್ರಚಾರದಿಂದ ಆಡಳಿತದ ಚುಕ್ಕಾಣೆ ಹಿಡಿಯುವಲ್ಲಿ ಯಶಸ್ಹ್ವಿಯಗಿದ್ದಾರೆ.ಈ ಚುನಾವಣೆಯಲ್ಲಿ ಸೋತ ಬಿಜೆಪಿಗೆ ಮತ್ತು ಕಾಂಗ್ರೆಸ್ಸ್ ಗೆ ಬಾರಿ ಮುಖಭಂಗವಾಗಿದೆ.ಶ್ರೀರಾಮುಲುಗೆ ಬಂದ ಒಟ್ಟು ಮತಗಳು 74,527 ಬಿಜೆಪಿಗೆ 17366 ಕಾಂಗ್ರೆಸ್ಸ್ ಗೆ 27,737 ಮತಗಳು ಶ್ರೀರಾಮುಲು ಒಟ್ಟು 46790 ಮತಗಳ ಅಂತರದಿಂದ ಭರ್ಜರಿ ಜಯಭೇರಿ ಬಾರಿಸಿದ್ದಾರೆ ಹಾಗೆ ಬಿಜೆಪಿ ಅಭ್ಯರ್ತಿ ಕಡಿಮೇ ಮತದಿಂದಾಗಿ ಡಿಫ್ಯಾಜಿಟ್ಟನ್ನು ಕಳೆದುಕೊಂಡಿದ್ದಾರೆ.ಸಂಭ್ರಮದ ನಡುವೆ ಮಾದ್ಯಮದವರೊಂದಿಗೆ ಮಾತನಾಡಿದ ಶ್ರೀರಾಮುಲು "ಇದು ನನ್ನ ಗೆಲುವಲ್ಲ ನನ್ನ ಅಭಿಮಾನಿ ಜನರ ಗೆಲುವು " ಎಂದರು.ಒಟ್ಟಾರೆ ಗಡಿನಾಡಲ್ಲಿ ಸ್ವಾಭಿಮಾನಿ ಶ್ರೀರಮುಲೂ ಗೆಲುವಿನ ಸಂಭ್ರಮ ಮುಗಿಲು ಮುಟ್ಟಿದೆ.ಶ್ರೀರಮುಲೂಗೆ ಜಯವಾಗಲಿ..

2 Dec 2011

ಮಗಧಿರನ "ಮೆಗಾ'ಎಂಗೇಜ್ಮೆಂಟ್

ಹೈದ್ರಬಾದ:ನಿನ್ನೆಮುತ್ತಿನನಗರಿ ಹೈದ್ರಬಾದನಲ್ಲಿ ಮೆಗಾಸ್ಟಾರ್ ಚಿರಂಜೀವಿಯ ಪುತ್ರ ರಾಮಚರಣ್ ತೇಜಅವರಎಂಗೇಜ್ಮೆಂಟ್
ಬಹಳ ವಿಜೃಂಭಣೆಯಿಂದ ನೆರವೇರಿತು.ರಾಮಚರಣ್ ರ ಬಾಲ್ಯದ ಗೆಳತಿ ಉಪಾಸನಾಳೊಂದಿಗೆ ಗಾಂಧೀಪೆಟ್ ಬಳಿ ಇರುವ ಫ್ಹಾರ್ಮ್ ಹೌಸನಲ್ಲಿ ಅದ್ದೂರಿಎಂಗೇಜ್ಮೆಂಟ್ ಗುರು ಹಿರಿಯರ ಸಮ್ಮುಖದಲ್ಲಿ ಶಾಸ್ತ್ರೋತರವಾಗಿ ನೆರವೇರಿತು ಎಲ್ಲ ಕಡೆ ಮಂತ್ರಗೋಷಗಳು ಮೊಳಗಿದವು. ಕಾರ್ಯಕ್ರಮಕ್ಕೆ ಬಾಲಿವುಡ್, ಸ್ಯಾಂಡಲ್ ವುಡ್,ಟಾಲಿವುಡ್ ನ ನಟ-ನಟಿಯರು ಆಗಮಿಸಿದ್ದರು.ಅಲ್ಲದೆ ಮಗಧಿರ್ ಚಿತ್ರ ನಿರ್ದೇಶಕ ರಾಜಮೌಳಿ,ನಟಿ ಜಯಪ್ರದಾ ಹಾಗೂ ರಾಜಕೀಯದ ಎಲ್ಲ ಗಣ್ಯರು,ಆಂದ್ರಪ್ರದೇಶದ ಮುಖ್ಯಮಂತ್ರಿ ಕಿರಣಕುಮಾರ ರೆಡ್ಡಿ ಕೂಡ ಸಮಾರಂಭಕ್ಕೆ ಉಪಸ್ತಿತರಿದ್ದರು.ಸಮಾರಂಭಕ್ಕೆದೇಶ-ವಿದೇಶದ ಹೂಗಳನ್ನು ತಂದು ಸ್ಟೆಜನ್ನುಅಲಂಕರಿಸಲಾಗಿತ್ತು.ನಟ ನಾಗಾರ್ಜುನ ಹಾಗೂ ನಿರ್ದೇಶಕರು,ಜು,ಏನ್ ಟಿ ಆರ್ ಶ್ರೇಯಾ,ದ್ಯಾನರು ಆಗಮಿಸಿ ಶುಭಕೋರಿದರು ರಾಮಚರಣ್ ತೇಜ್1.5 ಲಕ್ಷದ ಶೇರ್ವಾನಿ ತೊಟ್ಟು ಕಂಗೋಗೋಳಿಸಿದರು.ಎಲ್ಲರ ಸಮ್ಮುಖದಲ್ಲಿ ಇಬ್ಬರು ಉಂಗುರ ಬದಲಾಯಿಸಿಕೊಂಡು ಗುರು ಹಿರಿಯರಿಂದ ಆಶಿರ್ವಾದ ಪಡೆದುಕೊಂಡರು ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನ್ರತ್ಯಪ್ರದರ್ಶನಗಳು ನೆರವೇರಿದವು.ಅಲ್ಲದೆ 200 ಬಗೆಯ ಸಸ್ಯಾಹಾರಿಯ ಹಾಗೂ ಮಾಂಸಾಹಾರಿಯಾ ತಿಂಡಿಗಳನ್ನೂ ಭೋಜನಕ್ಕೆ ತಯಾರಿಸಲಾಗಿತ್ತು ಬಂದಂತಹ ಗಣ್ಯರು ಉಡುಗೊರೆ ಕೊಟ್ಟುಶುಭಕೋರಿದರು.ಒಟ್ಟು ಕಾರ್ಯಕ್ರಮಕ್ಕೆ10 ಕೋಟಿ ವೆಚ್ಚ ಮಾಡಲಾಗಿದೆ. ಒಟ್ಟಿನಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿರುವ ಮಗಧಿರನಿಗೆ ಶುಭವಾಗಲಿ..

1 Dec 2011

ಕನಿಮೋಳಿಗೆ ಜಾಮೀನು ..!



ನವದೆಹಲಿ :ಇಲ್ಲಿಯವರೆಗೆ 193 ದಿನದ ನಂತರ ದೇಶದ ಅತೀ ದೊಡ್ಡ ಹಗರಣ 2 ಜಿ ಸ್ಪೆಕ್ಟ್ರಂ ದ ಆರೋಪಿ ಕನಿಮೋಳಿ ಜಾಮೀನು ಪಡೆದು ತಿಹಾರ ಜೈಲಿನಿಂದ ಬಹಳ ಶಾಂತ ರೀತಿಯಿಂದ ಹೊರಬಂದು ಮಾದ್ಯಮಗಳಿಗೆ ಮುಖ ತೋರಿಸಿದೆ ಮುಚ್ಚಿಕೊಂಡು ಮನೆಗೆ ಹೋಗಿದ್ದಾರೆ.ಕರುಣಾನಿಧಿಯ ಕಡೆಯ ಜನ ಕನಿಮೋಳಿಯ ಮನೆಯಲ್ಲಿ ಸ್ವಾಗತ ಕೋರಲು ಸಿದ್ದತೆ ಮಾಡಿಕೊಂಡು ಸ್ವಾಗತಕ್ಕಾಗಿ ತರಾತುರಿಯಲ್ಲಿದ್ದರು.ಡಿಎಂಕೆ ಸಂಸದೆ ಕನಿಮೋಳಿ ೨ಜಿ ಬಹುಕೋಟಿ ಹಗರಣದಿಂದ ಮೇ 20 ರಂದು ತಿಹಾರ ಜೈಲಿನಲ್ಲಿ ಬಂಧನಕ್ಕೊಳಗಾಗಿದ್ದರು.ಈಗ ದಿಲ್ಲಿಯ ಹೈಕೋರ್ಟ ಸೋಮವಾರದಂದು ಜಾಮೀನು ನೀಡಿತು ಕನಿಮೋಳಿಯೊಂದಿಗೆ ಈ ಹಗರಣದಲ್ಲಿ ಶಾಮೀಲಾಗಿದ್ದ ನಾಲ್ಕು ಜನರಿಗೂ ಜಾಮೀನು ಸಿಕ್ಕಿತು.ಅವರುಗಳೆಂದರೆ ಶರದ್ ಕುಮಾರ,ಆಸಿಪ ಬಲವಾ,ಕರಿಮ ಮೊರಾನಿ(ಬಾಲಿವುಡ್ ನಿರ್ಮಾಪಕ),ರಾಜೀವ್ ಅಗರವಾಲ ಇವರುಗಳಿಗೆ ೫ ಲಕ್ಷ ರೂ.ದಂಡದೊಂದಿಗೆ ದೇಶದಿಂದ ಹೊರ ಹೋಗದಂತೆ ಆದೇಶ ನೀಡಿ ಶರತ್ತುಬದ್ದ ಜಾಮೀನು ನೀಡಿದೆ.ಈಗ ಕನಿಮೋಳಿ ಜಾಮೀನು ಪಡೆದು ಮನೆಗೆ ತೆರಳಿದ್ದಾರೆ.

30 Nov 2011

ಅಂತು ಇಂತೂ ಶಾಂತವಾದ ಬಳ್ಳಾರಿ ...!!!


ಭಾರಿ ಕುತೂಹಲ ಕೆರಳಿಸಿರುವ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಬುಧವಾರ ಶಾಂತಿಯುತವಾಗಿ ಪ್ರಾರಂಭವಾಗಿದ್ದು, ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗಳತ್ತ ಧಾವಿಸಿ ಮತಚಲಾಯಿಸಿದರು.

ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಎಲ್ಲೇಡೆ ಭಾರಿ ಪ್ರಮಾಣದ ಭದ್ರತಾ ವ್ಯವಸ್ಥೆ ಕೈಗೊಂಡಿದರಿಂದ ಮತದಾನ ಶಾಂತಿಯುತವಾಗಿ  ಮತದಾನವಾಗಿದೆ. 
ಕಣದಲ್ಲಿರುವ  ಬಿಜೆಪಿ, ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿ ಬಿ.ಶ್ರೀರಾಮುಲು ಸೇರಿದಂತೆ ಎಂಟು ಅಭ್ಯರ್ಥಿಗಳ ಭವಿಷ್ಯವನ್ನು 1.72 ಲಕ್ಷ ಮತದಾರರು ನಿರ್ಧರಿಸದ್ದಾರೆ.
ಒಟ್ಟು 195 ಮತಗಟ್ಟೆಗಳ ಪೈಕಿ 133 ಅತಿ ಸೂಕ್ಷ್ಮ, 52 ಸೂಕ್ಷ್ಮ, 10 ಸಾಮಾನ್ಯ ಮತಗಟ್ಟೆಗಳಿವೆ. ಬಹುತೇಕ ಕಡೆಗಳಲ್ಲಿ ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸೂಕ್ಷ್ಮ ಮತಗಟ್ಟೆಗಳಿಗೂ ಅತಿ ಸೂಕ್ಷ್ಮ ಮತೆಗಟ್ಟೆಗಳಿಗೆ ಒದಗಿಸುವ ಭದ್ರತೆಯನ್ನೇ ಒದಗಿಸಲಾಗಿತ್ತು

ನಗರದಲ್ಲಿ ಒಟ್ಟು 76 ಮತಗಟ್ಟೆಗಳಲ್ಲಿ ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ನಗರ ಪ್ರದೇಶದಲ್ಲಿ 67 ಸಾವಿರ, ಗ್ರಾಮೀಣ ಪ್ರದೇಶದಲ್ಲಿ 1.5 ಲಕ್ಷ ಮತದಾರರಿದ್ದಾರೆ.

ಇದೇ ಮೊದಲ ಬಾರಿಗೆ ನಗರದ ಕೌಲ್‌ಬಝಾರ್‌ನ ಮೋರ್‌ಗಲ್ಲಿಯ ಸರ್ಕಾರಿ ಶಾಲೆ ಹಾಗೂ ಮತ್ತಿತರ ಕಡೆಗಳಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಗಳಲ್ಲಿ ಕಟಕಟೆ ನಿರ್ಮಿಸಲಾಗಿತ್ತು . ಪ್ರತಿ ಮತಗಟ್ಟೆಯಲ್ಲೂ ಶಸ್ತ್ರಸಜ್ಜಿತ ಸಿಬ್ಬಂದಿ ಕಟ್ಟೆಚ್ಚರದಿಂದ ಕಾವಲು ಕಾಯುತ್ತಿದ್ದಾರೆ.

28 Nov 2011

ಕಾರವಾರದ ನಾನ್ ವೆಜ್ ದೇವತೆ ..!



ಕಾರವಾರದ  ತಾಲೂಕಿನ ಮಾಚಾಳಿ ಗ್ರಾಮದಲ್ಲಿ   taaluki ಊರಿನಲ್ಲಿ ನಿನ್ನೆ ಮಾರಿಕಾಂಬಾ ದೇವಸ್ತಾನದಲ್ಲಿ ಜಾತ್ರೆ ಜಾತ್ರೆ ನೆರವೇರಿತು ಅನೇಕ ಭಕ್ತರು ಆಗಮಿಸಿದ್ದರು .ಅಲ್ಲಿಯ ಜನ ವಿಬಿನ್ನವಾದ ನೈವ್ಯದ್ಯವನ್ನು ದೇವಿಗೆ ಅರ್ಪಿಸುತ್ತಾರೆ.ಭಕ್ತಿಯಿಂದ ದೇವರಿಗೆ ಹರಕೆ ತಿರಿಸಲೆಂದು ಬಂದ ಭಕ್ತರು ಮೀನಿನ ಅಡಿಗೆ ಮಾಡಿ ಮತ್ತು ಮದ್ಯವನ್ನು ಭಕ್ತಿಯಿಂದ ದೇವಿ ವರ ಕೊಡುತ್ತಾಳೆಂದೂ ನೈವೇದ್ಯವನ್ನು ಅರ್ಪಿಸುತ್ತಾರಲ್ಲದೆ ಮೊದಲೇ ಮೀನು ಭಕ್ಷಕರಾದ ಜನರು ತಾವು ಕೂಡಾ ಎಲ್ಲ ಭಕ್ತರು ದೇವರ ಪ್ರಸಾದವೆಂದು ಭರ್ಜರಿಯಾಗಿ ಮಸ್ತ್ ಮೀನಿನ ಊಟ ಮಾಡಿ ನೀರಿನಂತೆ ಮದ್ಯವನ್ನು ಕುಡಿಯುತ್ತಾರೆ.ಅಲ್ಲಿಯ ಭಕ್ತರು ಮದ್ಯ ಕುಡಿಯುವದರಿಂದ ಜೋಶ ಬರುವದಲ್ಲದೆ ದೇವತೆ ಆಶಿರ್ವಾದ ಮಾಡಿ ವರ ಕೊಡುತ್ತಾಳೆ ಹಾಗು ಯಾವದೇ ತೊಂದರೆಗಳು ಬರುವದಿಲ್ಲ ಎಂದು ಹೇಳುತ್ತಾರೆ. ಮುಧನಂಬಿಕೆಯಿಂದ,ಭಾರತದಲ್ಲಿಯ ಪ್ರಾಚಿನ ಕಾಲದಿಂದಲೂ ನಡೆದು ಬಂದ ಸಂಸ್ಕೃತಿ ಸಂಪ್ರದಾಯ ಆಚಾರ ವಿಚಾರಗಳು ತಲೆಕೆಳಗಾಗುತ್ತಿವೆ. ಆದರೆ ಪ್ರತಿಯೊಂದು ಕಡೆಯಲ್ಲಾ ವಿಭಿನ್ನ ರೀತಿಯ ಹೂ,ಹಣ್ಣು ಕಾಯಿಯನ್ನು ನೀಡಿ ಉರುಳುಸೇವೆ ಮಾಡಿ ಹರಕೆ ತಿರಿಸಿ ಆಚರಣೆ ಮಾಡುತ್ತಾರೆ.ಆದರೆ ಇಲ್ಲಿ ದೇವತೆಗೆ ಅರ್ಪಿಸುತ್ತಿರುವದು ನಾನ್ ವೆಜ್ ನೈವೇದ್ಯ ಇದು ದೇವಿಯ ಇಷ್ಟಾರ್ಥವೋ ಜನರ ಇಷ್ಟಾರ್ಥವೋ...

27 Nov 2011

ಕ್ರಿಕೆಟಿಗ ಯುವರಾಜ ಸಿಂಗ್ ಗೆ ಕ್ಯಾನ್ಸೆರ್ ...!!!

ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ವಿಶ್ವಕಪ್ ನಲ್ಲಿ ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಯುವರಾಜ್ ಸಿಂಗ್ ಗೆ ಎಡಬದಿಯ ಎದೆಯಲ್ಲಿ ಕ್ಯಾನ್ಸೆರ್ (ಟ್ಯೂಮೆರ) ಇದೆ ಎಂದು ಯುವರಾಜನ ತಾಯಿಯೇ ಮಾದ್ಯಮಗಳ ಮುಂದೆ ಸ್ಪಸ್ಟಪಡಿಸಿದ್ದಾರೆ ಹಾಗೆಯೇ ಅಸ್ತಮಾ ಕೂಡ ಇದೆ ಎಂದು ಹೇಳಿದ್ದಾರೆ.ಅವರ ತಾಯಿ ಹೇಳುವ ಪ್ರಕಾರ ಅವನಿಗೆ ವಿಶ್ವಕಪಗಿಂತಲೂ ಮುಂಚೆಯೇ ಈ ತೊಂದರೆ ಇತ್ತು ಆದರೆ ಈ ವಿಷಯ ನಾವು ಯಾರಿಗೂ ತಿಳಿಸಿರಲಿಲ್ಲ ಅವನುತುಂಬಾ ದೈರ್ಯವಂತ,ಶಕ್ತಿವಂತ ಹಾಗಾಗಿ ವಿಶ್ವಕಪ್ ಸರಣಿ ಪೂರ್ತಿ ಆಡಿ ಸರಣಿಶ್ರೇಸ್ಟನಾಗಿ ಬಂದಿದ್ದ ಎಂದು ತಿಳಿಸಿದ್ದಾರೆ.ಆದರೆ ರೋಗ ಅಸ್ಟೊಂದು ಗಂಭಿರವಾಗಿ ಬೆಳೆದಿಲ್ಲಾ ಅವನಿಗೆ ಬೇಗನೆ ಚಿಕಿತ್ಸೆ ನೀಡಿದ್ದೇವೆ ಇಲ್ಲದಿದ್ದರೆ ಅದು ಬಹಳ ಗಂಭಿರವಾಗಿ ಹರಡುತಿತ್ತು ಮತ್ತು ಪ್ರಾಣಕ್ಕೆ ಅಪಾಯ ಕೂಡ ಇತ್ತು ಆದರೆ ಈಗೇನೂ ಭಯವೇನೂ ಇಲ್ಲ
ಮತ್ತು ಅವನು ವೆಸ್ಟ್ಇಂಡಿಸ್ ಏಕದಿನ ಸರಣಿಗೆ ವಿಶ್ರಾಂತಿ ತೆಗೆದುಕೊಳ್ಳಲು ಅವನ ತರೆಬೇತುದಾರ ತಿಳಿಸಿದ್ದಾರಂತೆ ಅವರ ತಾಯಿ ಮಾದ್ಯಮಗಳಿಗೆ ತಿಳಿಸಿದ್ದಾರೆ

ಯುವರಾಜ ಸಿಂಗ್ ಬೇಗ ಗುಣಮುಖರಾಗಿ ಮತ್ತೆ ಭಾರತ ಕ್ರಿಕೆಟ್ ತಂಡದಲ್ಲಿ ಆಡುವಂತಾಗಲಿ ಎಂದು ನಮ್ಮೆಲ್ಲರ ಆಶಯ ಹಾಗೆಯೇ ಯುವರಾಜಗೆ ಒಳ್ಳೆಯದಾಗಲಿ.

26 Nov 2011

ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ  ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..ನಾವು ಅತ್ತುತ್ತಮ ಸಾಹಿತ್ಯವನ್ನು ಬರೆದು 8 ಜ್ಞಾನಪೀಠ ಪ್ರಶಸ್ತಿ ಪಡೆದಿದ್ದೇವೆ.ವಿನಹ !ಗುಂಡಾಗಿರಿ ಮಾಡಿ ಪಡೆದಿಲ್ಲಾ..ಹಾ.. ನಾವು ಇಲ್ಲಿ ಮಾತಾಡ್ತಿರೋದು ಶಿವಸೇನಾ ಮುಖ್ಯಸ್ತ ಬಾಳಾಠಾಕ್ರೆ ಬಗ್ಗೆ ಇತ್ತೀಚಿಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಸಾಹಿತ್ಯದ ದಿಗ್ಗಜರಾದ ಚಂದ್ರಶೇಖರ ಕಂಬಾರರಿಗೆ ಪ್ರಶಸ್ತಿ ಪಡೆಯಲು ಅಹ್ರರಲ್ಲ ಅವರ ಪ್ರಶಶ್ತಿ ವಾಪಸ್ ತೆಗೆದುಕೊಳ್ಳಬೇಕೆಂದು ಸರಕಾರಕ್ಕೆ ಒತ್ತಾಯಿಸುತ್ತಾಯಿದ್ದು  ಕಟೋರ ಮಾತಿನಿಂದ ನಿಂದಿಸಿ ಅವಹೇಳನ ಮಾಡಿದ್ದು  ಸರಿಯೇ? ಇದು ಕನ್ನಡಿಗರಿಗೆ ಅವಮಾನ ...ಈ ಹಿನ್ನೆಲೆಯಲ್ಲಿ  ಬಾಳಾ ಠಾಕ್ರೆ ವಿರುದ್ಧ ಕರ್ನಾಟಕದಾದ್ಯಂತ ಭುಗಿಲೆದ್ದ ಆಕ್ರೋಶ. ಬಾಳಾ ಠಾಕ್ರೆ ಅಜ್ಜ ...ಯಾಕ್ ಸುಮ್ನೆ  'ಸಾಮ್ನಾ' ಪತ್ರಿಕೆಲಿ ಏನೇನೋ ಬರ್ದು ಉಗಿಸ್ಕೊತ್ತಿಯಾ...  ತಪ್ಪಲ್ವಾ ಇದೆಲ್ಲಾ. ಇನ್ಮುಂದೆ ಆದ್ರು ಒಳ್ಳೆಯವನಾಗು . ವಯಸ್ಸಾದ್ಮೇಲೆ ಇವೆಲ್ಲಾ ಸರಿಅಲ್ಲಾ...ಗೊತ್ತಾಯತಾ ಅಜ್ಜಾ.

24 Nov 2011

ಬಾಳೆಕಾಯಿ ಪ್ರೈಡ್ ರೈಸ್

ಬಾಳೆಕಾಯಿ ಪ್ರೈಡ್ ರೈಸ್ ಗೆ ಬೇಕಾಗುವ ಸಾಮಗ್ರಿಗಳು
  • ಅನ್ನ
  • ಎಣ್ಣೆ
  • ಸಾಸಿವೆ
  • ಜೀರಿಗೆ
  • ಗರಂಮಸಾಲೆ
  • ಉದ್ದ ಸಿಳಿದ ಕ್ಯಾಪ್ಸಿಕಂ
  • ಉದ್ದ ಸಿಳಿದ ಹಸಿಮೆಣಸಿನಕಾಯಿ
  • ಶುಂಟಿ,ಬೆಳ್ಳುಳ್ಳಿ ಪೇಸ್ಟ್
  • ಸೋಯಾಸಾಸ್
  • ರುಚಿಗೆ ಉಪ್ಪು
  • ಧನಿಯಾ
  • ಸಿಪ್ಪೆ ತೆಗೆದು ಗಾಲಿಯಾಗಿ ಕತ್ತರಿಸಿ ತುಪ್ಪದಲ್ಲಿ ಹುರಿದ ಬಾಳೆಕಾಯಿ 
  • ಕುದಿಸಿದ ಬಟಾಣಿ ಕಾಳು
  • ಉದ್ದಿನಬೇಳೆ
  • ಅರಸಿಣ ಪುಡಿ
  • ಕೊತ್ತಂಬರಿ ಸೊಪ್ಪು                               
 ಮಾಡುವ ವಿಧಾನ :ಮೊದಲು ಪಾತ್ರೆಯಲ್ಲಿ ಎಣ್ಣೆ ಹಾಕಿ ಕಾಯಿದ ನಂತರ ಜೀರಿಗೆ ,ಸಾಸಿವೆ ,ಬೆಳ್ಳುಳ್ಳಿ,ಶುಂಟಿ,ಗರಂಮಸಾಲೆ.ಉದ್ದೀನಬೆಳೆ ಮೆಣಸಿನಕಾಯಿ ,ಕ್ಯಾಪ್ಸಿಕಂ,ಹುರಿದುರೆಡಿ ಮಾಡಿದ ಬಾಳೆಕಾಯಿ,ಬೇಕಾಗುವಸ್ಟು ಅನ್ನ,ಉಪ್ಪು ಅರಸಿಣಪುಡಿ,ಬೆಂದ ಬಟಾಣಿ ಕಾಳುಮೇಲೆ ಸೋಯಾಸಾಸ್ ಕೊತಂಬರಿ ಸೊಪ್ಪ  ಹಾಕಿ ತಿಂದರೆ ರುಚಿಯಾಗಿರತ್ತೆ .ಬಾಳೆಕಾಯಿ ಆರೋಗ್ಯಕ್ಕೆ ಒಳ್ಳೆಯದು ತಿಂಗಲ್ಲಿ ಎರಡು ಬಾರಿ ತಿನ್ನುವದರಿಂದ ಹೊಟ್ಟೆಯಲ್ಲಿ ಜೀರ್ಣಕ್ರಿಯೆ ಸುಲಭವಾಗುತ್ತದೆ ಹೊಟ್ಟೆಯ ತೊಂದರೆಗಳು ಮಾಯವಾಗುತ್ತವೆ ಹಾಗಾದರೆ ಮಾಡಿ  ತಿಂದು ನೋಡಿ ತಡ ಏಕೆ ?ರುಚಿಯಾಗಿ ಮಾಡಿ ತಿನ್ನತಾಯಿರಿ ಯಾವಾಗಲೂ ಆರೋಗ್ಯವಾಗಿರಿ !!!  

22 Nov 2011

ಉತ್ತಮ ಆರೋಗ್ಯಕ್ಕೆ ಸೇಬುಹಣ್ಣು..

ಇಂದು ಅರೋಗ್ಯವಂತರಾಗಿರಲು ಹೆಚ್ಚಾಗಿ ತಾಜಾ ಹಣ್ಣು ಹಂಪಲುಗಳನ್ನೂ ತಿನ್ನಬೇಕೆಂದು ವೈದರು ಹೇಳುತ್ತಾರೆ ಅದರಲ್ಲೂ ಹಣ್ಣುಗಳ ಮಹಾರಾಣಿ ಎಂದೇ ಪ್ರಸಿದ್ದಿಯಾಗಿರುವ ತಾಜಾ ಸೇಬು ಹಣ್ಣು ಆರೋಗ್ಯಕ್ಕೆ ಅತ್ಯುತ್ತಮ ದಿವ್ಯೌಶದವಾಗಿದೆ.An Apple a day keep doctors away ಎಂಬ ಮಾತಿನಂತೆ ಸೇಬುಹಣ್ಣು ಪ್ರತಿದಿನ ತಿನ್ನುವದರಿಂದ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಡಬಹುದು ಇತ್ತೀಚಿನ ಹಾಂಕಾಂಗ್ ನ ಚೀನಿ ವಿಸ್ವವಿದ್ಯಾಲಯದ ಸಂಶೋಧಕರ ಪ್ರಕಾರ ಸೇಬುಹಣ್ಣನ್ನು ತಿನ್ನುವದರಿಂದ ವ್ಯಕ್ತಿಯ ಜೀವಿತಾವದಿ ಶೇ.10 ರಷ್ಟು ಹೆಚುತ್ತದೆ.ಸದಾ ಚಟುವಟಿಕೆಯಿಂದ ಇರಲೂ,ದೇಹದ ದೌರ್ಬಲ್ಯಗಳನ್ನು ಕಡಿಮೆ ಮಾಡುವದರೊಂದಿಗೆ ಆಯುಷ್ಯವನ್ನು ಹೆಚ್ಚಿಸುತ್ತದೆ .ಇದರಲ್ಲಿ ಆಂಟಿ ಆಕ್ಷಿಡೆಂಟ್ ಅಂಶ ಇರುವದರಿಂದ ಕಣ್ಣಿಗೆ ಉತ್ತಮವಲ್ಲದೆ ಹ್ರದ್ರೋಗ,ಕಾನ್ಸೆರ್,ಸಕ್ಕರೆ ಕಾಯಿಲೆಯಂತಹ ರೋಗಗಳು ಹತ್ತಿರ ಸುಳಿಯುವ ಸಾದ್ಯತೆ ಕಡಿಮೆ. ಮಾರುಕಟ್ಟೆಯಲ್ಲಿ ಇಂದು 3 ತರಹದ ಸೇಬು ಹಣ್ಣುಗಳು ಸಿಗುತ್ತವೆ

1.ಹಸಿರು ಸೇಬು : ಎಲುಬು ಮತ್ತು ಹಲ್ಲುಗಳಿಗೆ ಉತ್ತಮ ಹಾಗೂ ಕ್ಯಾನ್ಸರ್ ರೋಗವನ್ನು ನಿಯಂತ್ರಿಸುತ್ತದೆ
2.ಹಳದಿ ಸೇಬು :ಕಣ್ಣಿಗೆ,ಹೃದಯ ರೋಗಕ್ಕೆ ಉತ್ತಮವಾದುದು
3.ಕೆಂಪು ಸೇಬು : ಹೃದಯ,ಮೆದುಳಿನ ನೆನಪಿನಶಕ್ತಿಗೆ ಹಾಗು ಗರ್ಭಿಣಿಯಾರಿಗೆ,ಮಕ್ಕಳ ಆರೋಗ್ಯಕ್ಕೆಒಳ್ಳೆಯದು.

ಸೇಬು ಹಣ್ಣಿನ ಸೇವನೆಯಿಂದಾಗುವ ಉಪಯುಕ್ತತೆಗಳು

  • ಸೇಬು ತಿನ್ನುವದರಿಂದ ದೇಹದಲ್ಲಿನ ಕೊಬ್ಬಿನಂಶ ಕಡಿಮೆಮಾಡಬಹುದು.
  • ಹೆಚ್ಚು ವಿಟಮಿನ್,ಪೌಷ್ಟಿಕಾಂಶ ಇರುವದರಿಂದ ಕಿಡ್ನಿ,ಹಾಗೂ ಲಿವರನ ತೊಂದರೆ ನಿವಾರಣೆಯಾಗುವದು.
  • ದಿನನಿತ್ಯ ಸೇಬು ರಸವನ್ನು ಕುಡಿಯುವದರಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದು ಹಾಗೂ ಚರ್ಮದ ಕಾಂತಿಯು ಹೆಚ್ಚುವದು.
  • ಸಕ್ಕರೆ ಕಾಯಿಲೆ ಹಾಗೂ ರಕ್ತದ ಒತ್ತಡವನ್ನು ನಿಯಂತ್ರಿಸುವದು
  • ವಯಸ್ಸಾದವರಿಗೆ ರೋಗಿಗಳಿಗೆ ಸೇಬು ರಸ ಕೊಡುವದರಿಂದ ರೋಗವನ್ನು ನಿಯಂತ್ರಣದಲ್ಲಿಡಬಹುದು.
  • ಕ್ಯಾಲ್ಸಿಯಂಮ್ಯಗ್ನೆಷಿಯಂ,ಅಂಶ ಇರುವದರಿಂದ ಆರೋಗ್ಯಕ್ಕೆ ಉತ್ತಮವಾದುದು.

ಹೆಚ್ಚು ಹೆಚ್ಹು ಸೇಬು ಸೇವಿಸಿ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ.!!!

21 Nov 2011

ಮಗಧೀರ್ ಅದ್ದೂರಿ ಎಂಗೇಜ್ಮೆಂಟ್ .!!!!

ಟಾಲಿವುಡನ(ತೆಲಗು) ಮೆಗಾಸ್ಟಾರ್ ಚಿರಂಜೀವಿಯ ಪುತ್ರ ಮಗಧೀರ್ ಚಿತ್ರದ ನಟ ರಾಮಚರಣ ತೇಜ್ ಮೊದಲೇ ಪರಿಚಯವಿದ್ದ ಹುಡುಗಿ ಉಪಾಸನಾ ಅವಳೊಂದಿಗೆ ಡಿಸೆಂಬರ್ 1 ರಂದು ಅದ್ದೂರಿ ವೆಚ್ಚದ  ಎಂಗೇಜ್ಮೆಂಟ್ ನ್ನು ಐತಿಹಾಸಿಕ ಸ್ಥಳವಾದ ನಿಜಾಮಾಬಾದ್ ಜಿಲ್ಲೆಯ ದೊಮಕೊಂಡದ ಕೋಟೆಯಲ್ಲಿ ಮಾಡಿಕೊಳ್ಳಲಿದ್ದಾರೆ.ಈ ಕೋಟೆಯೂ ಹಿಂದಿನ ರಾಜ್ಯಮನೆತನದವರದಾಗ್ಗಿದ್ದು ಈಗ ಇದನ್ನು 4 ಕೋಟಿ ವೆಚ್ಚ ಮಾಡಿ ಸಂಪೂರ್ಣ ಹೊಸದಾಗಿ ನವಿಕರಿಸಲಾಗುತ್ತಿದೆ.ಇಲ್ಲಿಯೇ ಮಗಧಿರನ ಎಂಗೇಜ್ಮೆಂಟ್ ಸಮಾರಂಭ ಡಿಸೆಂಬರ್ 1 ರಂದು ನಡೆಯಲಿದೆ. ಉಪಾಸನ ಕೂಡ ಎಂಗೇಜ್ಮೆಂಟ್ ಗೆ ತಯಾರಿನಡೆಸುತ್ತಿದ್ದಾರೆ. ಮಗನ ಸಮಾರಂಭಕ್ಕೆ  ಚಿರಂಜೀವಿಯು  ಅಲ್ಲಿನ  ರಾಜ್ಯಪಾಲರಾದ ನರಸಿಂಹನ್ ರವರನ್ನು ಆಮಂತ್ರಿಸಿದ್ದಾರೆ ಅಲ್ಲದೇ ಸಮಾರಂಭದಲ್ಲಿ ಅನೆಕರೂ ಪಾಲ್ಗೊಳ್ಳುವ ನಿರೀಕ್ಷೆ ಇದೆ. ರಾಮಚರಣಗೆ ಮಾವ ಅದ್ದೂರಿ ಉಡುಗೊರೆಯೊಂದನ್ನುಅಂದ್ರೆ ಅತ್ಯಾದುನಿಕ ವಿನ್ಯಾಸದ 120 ಕೋಟಿ ವೆಚ್ಚದ ವಿಮಾನವೊಂದನ್ನು ಉಡುಗೊರೆಯಾಗಿ  ಕೊಡಲಿದ್ದಾರೆ ಈಗಾಗಲೇ ಇದನ್ನು ಜರ್ಮನಿ ಯಲ್ಲಿ ತಯಾರಿಸಲಾಗುತ್ತಿದೆ ಇದು 8 ಆಸನಗಳನ್ನು ಮಾತ್ರ ಹೊಂದಿದ್ದು ಐಶಾರಾಮಿಯ ಎಲ್ಲಾ ಸೌಲಭ್ಯಗಳು ಇದರಲ್ಲಿವೆ ಇದನ್ನು ರಾಮಚರನ್ ತಾವೇ ಹೇಳಿ ಬೇಕಾದ ಮಾಡೆಲ್ ಗೆ  ಮಾಡಿಸಿಕೊಳ್ಳುತಿದ್ದಾರೆ.ಒಟ್ಟಿನಲ್ಲಿ  ಭಾರಿ ವೆಚ್ಚದ ಎಂಗೇಜ್ಮೆಂಟ್ ಎನ್ನಬಹುದು. ಅಂತು ಈಗ ಮಗಧೀರ್ ಮಾವನಿಂದ ಭಾರಿ ಗಿಫ್ಟ್ ನ್ನೇ ಪಡೆಯತ್ತಿದ್ದಾರೆ  .ಗ್ರೇಟ್ ಅಳಿಯ ಮಗಧೀರ್..!!!! .    

19 Nov 2011

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ .

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು ಪಿಲ್ದಿಂಗ್ ಆಯ್ಕೆ ಮಾಡಿಕೊಂಡಿದ್ದು ಅನುಮಮಾನಕ್ಕೆ ಎಡೆಮಾಡಿಕೊಟ್ಟಿದೆ.ಟಾಸ್ ಗೆದ್ದರು ಯಾಕೆ ಬ್ಯಾಟಿಂಗ್ ತೆಗೆದುಕೊಳ್ಳಲಿಲ್ಲ ಎಂದು ವಿನೋದ್ ಬೇಸರ ವ್ಯಕ್ತಪಡಿಸಿದ್ದಾರೆ.ಆಗ ಪಂದ್ಯ ನಡೆಯುತಿದ್ದಾಗ ಪಟಪಟನೆ ವಿಕೆಟಗಳು ಉರಿಳಿದವು ಅದಕ್ಕೆ ಸೆಮಿಫೈನಲ್ ಮ್ಯಾಚ್ ಸೋಲಿಗೆ ಮ್ಯಾಚ್ ಪಿಕ್ಸಿಂಗ್ ಆಗಿದ್ದು ಕಾರಣವೆಂದಿದ್ದಾರೆ ಅಂದು ಸೋತಾಗ್ ವಿನೋದ್ ಡ್ರೆಸ್ಸಿಂಗ್ ರೂಮನಲ್ಲಿ ಆಟಗಾರರನ್ನು ಅಪ್ಪಿಕೊಂಡು ಕಣ್ಣಿರಿತ್ತಿದ್ದರು ಈಗ ಇದೇ ಈಡ್ದನ್ ಗಾರ್ಡನ್ ನಲ್ಲಿ ಟೆಸ್ಟ್ ಮ್ಯಾಚನಲ್ಲಿ ವೆಸ್ಟ್ ವಿಂಡಿಸ್ ವಿರುದ್ದ ಭಾರತ ಗೆದ್ದಿತು ಆಗ ವಿನೋದ್ 1996 ಸೆಮಿಪೈನಲ್ ನೆನಪಿಸಿಕೊಂಡು ಮತ್ತೆ ಕಣ್ಣಿರಿತ್ತರು .ಅಂದಿನ ಆಟ ಮೊಸದಾಟವಾಗಿತ್ತು ಅಂದು ಪಂದ್ಯದ ವೇಳೆ ಏನೇನು ನಡೆದಿತ್ತು ಅದಕ್ಕೆ ನಾನೆ ಪ್ರತ್ಯಕ್ಷ ಸಾಕ್ಷಿ ಎಂದು ಗಂಭಿರವಾಗಿ ಆರೋಪಿಸಿದ್ದಾರೆ ಅಲ್ಲದೆ ನಂತರ ನನ್ನನ್ನು ಪಂದ್ಯದಿಂದಲೇ ಕೈಬಿಡಲಾಯಿತು ಎಂದದಕ್ಕೆ ಇವರ ಮಾತಿಗೆ ಪ್ರತಿಕ್ರಿಯಿಸಿದ ಮಾಜಿ ನಾಯಕ ಅಜರುದ್ದೀನ್ 15 ವರ್ಷದ ನಂತರ ಈಗ ಈ ಬಗ್ಗೆ ಪ್ರಸ್ತಾಪಿಸುವ ಅಗತ್ಯವೇನಿದೆ. ಆಗ ಕಳಪೆ ಪ್ರದರ್ಶನದಿಂದಾಗಿ ಫಾರ್ಮ್ ನಲ್ಲಿ ಇರಲಿಲ್ಲ ಅದಕ್ಕಾಗಿ ವಿನೋದ್ ನನ್ನು ಕೈಬಿಡಲಾಗಿತ್ತು ಮ್ಯಾಚ್ ಪಿಕ್ಸಿಂಗ್ ಆಗಿರಲಿಲ್ಲ ಎಲ್ಲವು ತಂಡದ ನಿರ್ಧಾರ ದಿಂದಲೇ ನಡೆದಿತ್ತು ಎಂದು ತಿರುಗೇಟು ನೀಡಿದ್ದಾರೆ ಆದರೆ ಕಾಂಬಳೆ ಆಗಲೇ ಬಹಿರಂಗಪದಿಸಬಹುದಿತ್ತು ಈಗ ಬಾಯಿಮುಚ್ಚಿಕೊಂಡು ಸುಮ್ಮನಿರಲಿ ಎಂದು ಪ್ರತಿಕ್ರಿಯಿಸಿದ್ದಾರೆ ಜೊತೆ ಆಟಗಾರರೂ ಯಾವದೇ ರೀತಿಯ ಮ್ಯಾಚ್ ಪಿಕ್ಷಿಂಗ್ ನಡೆದಿಲ್ಲ ವಿನೋದ್ ಕಾಂಬಳೆ ಹೀಗೆ ಹೇಳುವದು ಸರಿಯಲ್ಲವೆಂದಿದ್ದಾರೆ.

16 Nov 2011

ಎಸ .ಎಲ್ .ಬೈರಪ್ಪ ನವರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ

ಇಂದು ಎಸ .ಎಲ್ .ಬೈರಪ್ಪ ನವರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ಸಮಾರಂಭ ನವದೆಹಲಿಯಲ್ಲಿ ಏರ್ಪಡಿಸಿ ಸನ್ಮಾನ್ಮ ಮಾಡಲಾಯಿತು  ಖ್ಯಾತ ಕಾದಂಬರಿಕಾರ,ಸಾಹಿತಿಯಾಗಿ ಕನ್ನಡದ ಸಾರಸ್ವತ ಲೋಕಕ್ಕೆ ಸಲ್ಲಿಸಿದ ಕೊಡುಗೆ ಸಾಧನೆಗಾಗಿ ಎಸ .ಎಲ್ ಬೈರಪ್ಪ ನವರಿಗೆ  2010 ರ ''ಸರಸ್ವತಿ ಸಮ್ಮಾನ್ ಪ್ರಶಸ್ತಿ ಲಭಿಸಿದ್ದು ಕನ್ನಡಿಗರಿಗೆ ಸಂತಸ ತಂದಿದೆ.ಇವರು ಕೆಲವು ದಿನಗಳ ಹಿಂದೆಯೇ ಪ್ರಶಸ್ತಿಗೆ ಆಯ್ಕೆಯಾಗಿದ್ದರು.ಇವರು ಮಾಡಿದ ಸಾದನೆ ಯಸಸ್ಸನ್ನು ಗುರ್ತಿಸಿ ಭಾರತ ಸರ್ಕಾರ ಇಂದು  ನವದೆಹಲಿಯಲ್ಲಿ ಅದ್ದೂರಿ ಪ್ರಶಸ್ತಿ ಸಮಾರಂಭವನ್ನುಏರ್ಪಡಿಸಿ ಸನ್ಮಾನ ಮಾಡಿದೆ.''ಸರಸ್ವತಿ ಸಮ್ಮಾನ್''ಪ್ರಸಸ್ತಿಯು ಕನ್ನಡಿಗರಿಗೆ ಸಿಕ್ಕದ್ದು  ಮೊದಲ ಬಾರಿಯಾಗಿದ್ದು ಅದನ್ನು ಪಡೆದ ಪ್ರಥಮ  ಕನ್ನಡಿಗರು ಬೈರಪ್ಪ ನವರು ಎಂದು ಹೇಳಲು ಹೆಮ್ಮೆಯೆನಿಸುತ್ತೆ  ಈ ಪ್ರಸಸ್ತಿಯು 7.5 ಲಕ್ಸ್ಯ ನಗದು,ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ .ಈ ಪ್ರಶಸ್ತಿಯನ್ನು ಈಗಾಗಲೇ 19 ಮಂದಿ ಪಡೆದಿದ್ದರೆ ಈಗ ಇವರಿಗೆ ''ಮಂದ''ಕಾದಂಬರಿಗೆ ಪ್ರಶಸ್ತಿ ಲಭಿಸಿದೆ ಅಷ್ಟೇ ಅಲ್ಲ ಇವರು ಸುಮಾರು 23 ಕ್ಕೂಹೆಚ್ಹು ಕೃತಿ ಗಳನ್ನೂ ಬರೆದಿದ್ದಾರೆ ಬೈರಪ್ಪನವರು ಹುಟ್ಟಿದ್ದು 26 -07 -1934 ರಂದು ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣದ ಸಂಕೇಶ್ವರ್ ಗ್ರಾಮದಲ್ಲಿ ಬಡತನದಲ್ಲಿ ಬೆಳೆದು ಮೇಲೆ ಬಂದವರು ಇದು ಇವರ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ.ಇಂದು ದೆಹಲಿಯಲ್ಲಿ ಪ್ರಶಸ್ತಿ ಸ್ವಿಕರಿಸಿ ತಾವು ನಡೆದು ಬಂದ ರೀತಿಯನ್ನು ವಿವರಿಸಿ ಮಾತನಾಡಿದರು.ಇವರಿಗೆ ಕನ್ನಡಿಗರ ಪರವಾಗಿ ಅಭಿನಂದನೆಗಳೂ.  

2011 ರ ನೊಬೆಲ್ ಶಾಂತಿ ಪ್ರಶಸ್ತಿ ಮೂವರು ಮಹಿಳೆಯರ ಪಾಲಿಗೆ..

 ಮಹಿಳೆಯರ ಪಾಲಿಗೆ  2011 ರ  ನೊಬೆಲ್ ಶಾಂತಿ  ಪ್ರಶಸ್ತಿಯನ್ನು ಸ್ತ್ರಿಯರ್ ಪರವಾಗಿ ಅಹಿಂಸಾತ್ಮಕವಾಗಿ ಹೋರಾಡಿದ ಮೂವರು ಮಹಿಳೆಯರಿಗೆ ನೀಡಲಾಗಿದೆ ಅವರುಗಳೆಂದರೆ ಲೈಬಿರಿಯಾದ ಅದ್ಯಕ್ಷ್ಯೇ ಎಲೆನ್ ಜಾನ್ಸನ್ ಸರಲಿಫ್,ಅದೇ ದೇಶದ ಇನ್ನೂರ್ವ ಮಹಿಳಾ ಹಕ್ಕು ಹೋರಾಟಗಾರ್ತಿ ಲೆಮಾ ಬೋವಿ ಮತ್ತು ಯೆಮೆನ್ ನ ಪ್ರಶಿದ್ದ  ಪತ್ರಕರ್ತೆ ತವಕ್ಕಲ್ ಕರ್ಮನ್  ಮಹಿಳೆಯರ ಹಕ್ಕು ರಕ್ಷಣೆಗಾಗಿ ಶ್ರಮಿಸಿದ್ದಕ್ಕಾಗಿ 1.5 ದಶಲಕ್ಷ ಡಾಲರ್ ಮೊತ್ತದ ಪ್ರಶ್ಶಸ್ತಿಯನ್ನು ಹಂಚಿಕೊಂಡಿದ್ದಾರೆ.ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅದ್ಯಯನ   ಮಾಡಿದ್ದಾರೆ. ನಂತರ 2005 ರಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿ ಆಫ್ರಿಕಾದ ಅದ್ಯಕ್ಷೆಯಾಗಿ ಶಾಂತಿ ಸ್ಥಾಪನೆಗೆ ಶ್ರಮಿಸಿ ಪ್ರಶಸ್ತಿಗೆ ಭಾಜನರಾದರು  ಅದಲ್ಲದೆ ಲೆಮಾ ಬೋವಿ ಲೈಬಿರಿಯದಲ್ಲಿ ಆಂತರಿಕ  ಯುದ್ದ  ನಡೆಯುತಿದ್ದಾಗ  ಕ್ರೈಸ್ತ ಹಾಗೂ ಮುಸ್ಲಿಂ ಮಹಿಳೆಯರನ್ನು ಸಂಘಟಿಸಿ ಹೋರಾಡಿದರು ಇನ್ನು ಯೆಮೆನ್ನವರಾದ ತವಕ್ಕಲ್ ಕರ್ಮಾನ್ ಪತ್ರಕರ್ತ ಮಾನವ ಹಕ್ಕು ರಕ್ಷಣೆಗಾಗಿ ಹೊರಟ ನಡೆಸಿದ್ದಾರೆ .ಈ ಪ್ರಶಸ್ತಿ ಪಡೆದ ಯೆಮೆನ್ ನ ಮೊದಲ ಮಹಿಳೆ ಅಲ್ಲಿನ ಅದ್ಯಕ್ಷ ನ ದುರಾಡಳಿತದ ವಿರುದ್ದ ಪ್ರತಿಭಟಿಸಿ ಈ ಪ್ರಶಸ್ತಿ ಪಡೆಯುವಲ್ಲಿ ಯಸಸ್ವಿಯಾಗಿದ್ದಾರೆ.ಒಟ್ಟಾರೆ ಈ ವರ್ಷದ ನೋಬೆಲ್  ಶಾಂತಿ ಪ್ರಶ್ಶಸ್ತಿ ಮಹಿಳೆಯರ ಪಾಲಿಗಿದು  ಸಂತಸ ತಂದಿದೆ.    

3 Nov 2011

ಇಂದು ಯೆಡಿಯುರಪ್ಪಗೆ ಮದ್ಯಂತರ ಜಾಮೀನು

ಭೂಕಬಳಿಕೆ ವಿವಾದದಲ್ಲಿ ಸಿಲುಕಿದ್ದ ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನವರಿಗೆ ಇಂದು ಲೋಕಾಯುಕ್ತ ಹೈಕೋರ್ಟ್ ಮದ್ಯಂತರ ಜಾಮಿನನನ್ನು ಮಂಜೂರು ಮಾಡಿದೆ ೧೮ ದಿನಗಳ ನಂತರ ಸೆರೆವಾಸದಿಂದ ಹೊರಬರಲಿದ್ದಾರೆ .ಯಡಿಯೂರಪ್ಪ ಸಿರಾಜುದ್ದೀನ್ ಭಾಷಾ ಬ್ರಷ್ಟಾಚಾರ ನಿಯಂತ್ರಣದಡಿಯಲ್ಲಿ ಸಲ್ಲಿಸಿದ್ದ ದೂರಿನಿಂದಾಗಿ ಬೆಂಗಳೊರಿನ ಪರಪ್ಪನ ಅಗ್ರಹಾರ್ ಜೈಲಿಗೆ ಸೇರಿದ್ದರು.ಇದರಿಂದ ಆರೋಗ್ಯದ ಮೇಲೆಯೂ ಪರಿಣಾಮ ಬೀರಿತ್ತು ವಿಚಾರಣಾ ಹಂತದಲ್ಲಿರುವಾಗ ಜೈಲಿಗೆ ಕಳಿಸುವದು ಸರಿಯಲ್ಲವೆಂದು ನ್ಯಾಯಮುರ್ತಿಯವರು ಸ್ಪಸ್ಟಪಡಿಸಿದರು ಒಟ್ಟು ೫ ಪ್ರಕರಣಗಳು ಇವರ ಮೇಲೆ ದಾಖಲಾಗಿದ್ದವು ೩ ಪ್ರಕರಣಗಳು ಪೂರ್ಣಗೊಂಡು ೪ ನೆ ಕೇಸನ ವಿಚಾರಣೆ ಹೈಕೋರ್ಟನಲ್ಲಿ ನಡೆಯಲಿದೆ ಸುದ್ದಿ ತಿಳಿಯುತಿದ್ದಂತೆ ಬಿಜೆಪಿ ಕಚೇರಿ ಎದುರು ಶಾಸಕರು ,ಕಾರ್ಯಕರ್ತರು ಪಟಾಕಿ ಹಾರಿಸಿ ಸಂಬ್ರಮಿಸಿದರು ಹೈಕೋರ್ಟ್ ಷರತ್ತುಬದ್ದ ಜಮೀನು ನಿಡಿದಲ್ಲದೆ ೫ ಲಕ್ಷ ರೂ.ಬಾಂಡ್ ಹಾಗು ೨ ಶುರಿಟಿ ಸಲ್ಲಿಸುವಂತೆ ಅದೇಶಿಸಿದೆ ಒಟ್ಟಿನಲ್ಲಿ ಇಂದು ಯಡಿಯೂರಪ್ಪಗೆ ಬಿಡುಗಡೆ ಆಗುವ ಸಾದ್ಯತೆ ಇದೆ ಇನ್ನು ೪ನೆ ಪ್ರಕರಣ ತೀರ್ಪು ಇತ್ಯರ್ತವಾಗಬೇಕು ನಂತರ ಯಡಿಯೂರಪ್ಪ ಹೊರಬರಬಹುದು.ಏನೆ ಅಗಲಿ ಯಾರೇ ತಪ್ಪು ಮಾಡಿದ್ರ ನ್ಯಾಯಾದೇವತೆ ಮುಂದೆ ತಲೆಬಾಗಲೇಬೇಕು ಅಲ್ಲದೇ ಯಡಿಯೂರಪ್ಪ ನಿರಿಕ್ಷ್ಸಣಾ ಜಾಮಿನನ್ನು ಕೋರಿ ಅರ್ಜಿ ಸಲ್ಲಿಸಿದರು ಅದರ ಅರ್ಜಿ ವಿಚಾರಣೆಯನ್ನು ನವೆಂಬರ .೮ ಕ್ಕೆ ಮುಂದುಡಲಾಗಿದೆ ಸುದ್ದಿ ತಿಳಿಯುತಿದ್ದಂತೆ ಕಾರ್ಯಕರ್ತರು ಶಾಸಕರು ಸೆಂಟ್ರಲ್ ಜೈಲಗೆ ಭೇಟಿ ನಿಡುತ್ತಿದ್ದಾರೆ.ಏನೆ ಆಗಲಿ ಪ್ರಕರಣ ದಿಂದ ಪೂರ್ಣ ಮುಕ್ತರಾಗಿಲ್ಲ ಎಂದೇ ಹೇಳಬಹುದು.

31 Oct 2011

ನಮ್ಮ ಕನ್ನಡ ರಾಜ್ಯೋತ್ಸವ


ಕರ್ನಾಟಕ ಒಂದುಗೂಡಿದರ ಸವಿ ನೆನಪಿಗಾಗಿ ಪ್ರತಿ ವರುಷ ನವೆಂಬರ್-೧ ರಂದು ಆಚರಿಸುವ ಹಬ್ಬ.೧೯೫೬ ರಲ್ಲಿ ಕನ್ನಡ ಪ್ರದೇಶಗಳು, "ಮೈಸೂರ ರಾಜ್ಯ" ಎನ್ನುವ ಹೆಸರಿನಲ್ಲಿ ಒಂದುಗೂಡಿದವು. ೧೯೭೩ ರಲ್ಲಿ "ಕರ್ನಾಟಕ ರಾಜ್ಯ" ಅಂತಾ ಮರು ಹೆಸರಿಸಲಾಯಿತು.ಹಾಗಾಗಿ ಭಾಷಾ ಆಧಾರದ ಮೇಲೆ ನವೆಂಬರ್ ೧,೧೯೭೩ ರಂದು ಕನ್ನಡ ನಾಡಿನ ಸವಿ ನೆನಪಿಗಾಗಿ ನಾಡ ಹಬ್ಬವಾಗಿ ಆಚರಿಸುತ್ತಾ ಬರುತಿದ್ದಾರೆ. ಅಂದಿನಿಂದ ಇಂದಿನವರೆಗೂ ಕನ್ನಡಿಗರು ಕನ್ನಡನಾಡಿನ ಸಂಸ್ಕೃತಿ ಸಂಪ್ರದಾಯಗಳ ಉಳಿವಿಗಾಗಿ ಶ್ರಮಿಸುತ್ತಾ ಬರುತಿದ್ದಾರೆ ಹಾಗೆಯೆ ನಾವು ಕನ್ನಡ ನಾಡುನುಡಿಗಾಗಿತ್ಯಾಗ,ತಾಳ್ಮೆ ,ಪ್ರೀತಿ,ಸಹನೆಯ ಮನೋಭಾವಗಳನ್ನೂ ಬೆಳೆಸಿ ಉಳಿಸಿಕೊಂಡೂ ಮುಂದಿನ ಪ್ರಜೆಗಳಿಗೆ ಮಾದರಿಯಾಗಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ ಬ್ರಿಟಿಷ ಆಡಳಿತದಲ್ಲಿ ೧೯ ಜಿಲ್ಲೆಗಳನ್ನೂಹೊಂದಿದ್ದ ಕರ್ನಾಟಕ, ನಂತರ ಸುಲಭ ಆಡಳಿತಕ್ಕಾಗಿ ಕರ್ನಾಟಕ ಹೊಸ ಜಿಲ್ಲೆಗಳನ್ನು ರಚಿಸಿಕೊಂಡಿತು ಬೆಂಗಳೂರು ನಗರ ಬೆಳೆದಂತೆ ೧೯೮೩ ರಲ್ಲಿ ನಗರ ಮತ್ತು ಗ್ರಾಮಾಂತರ ಜಿಲ್ಲೆ ಎಂದು ಪ್ರತ್ಯೆಕಿಸಲಾಯಿತು ಕರ್ನಾಟಕದ ಜನತೆಯ ಬೇಡಿಕೆಯಿಂದಾಗಿ ೧೯೯೭ ರಲ್ಲಿ ಜೆ.ಎಚ್. ಪಟೇಲರು ೭ ಹೊಸ ಜಿಲ್ಲೆಗಳನ್ನೂ ರಚಿಸಿದರು ದಾವಣಗೆರೆ,ಚಾಮರಾಜನಗರ,ಬಾಗಲಕೋಟೆ, ಹಾವೇರಿ ಉಡುಪಿ, ಕೊಪ್ಪಳ, ಗದಗ ಇವು ಆಗ ಅಸ್ತಿತ್ವಕ್ಕೆ ಬಂದ ಜಿಲ್ಲೆಗಳು ೨೦೦೭ರಲ್ಲಿ ಎಚ್.ಡಿ.ಕುಮಾರಸ್ವಾಮಿಯವರು ರಾಮನಗರವನ್ನು ಬೆಂಗಳುರ ಗ್ರಾಮಾಂತರ ಜಿಲ್ಲೆಯಿಂದ, ಚಿಕ್ಕ ಬಳ್ಳಾಪುರವನ್ನು ಕೋಲಾರದಿಂದ ಬೇರ್ಪಡಿಸಿ ಎರಡು ಹೊಸ ಜಿಲ್ಲೆಗಳನ್ನು ರಚಿಸಿದರು ಈಗ ಕರ್ನಾಟಕದಲ್ಲಿ ೩೦ ಜಿಲ್ಲೆಗಳು. ಅಷ್ಟೇ ಅಲ್ಲ ಕನ್ನಡ ನಾಡಿನ ಕಲೆ,ಸಂಸ್ಕೃತಿ ಉಡುಗೆ ತೊಡುಗೆಗೆ ವಿದೇಶಿಗರು ಮಾರು ಹೋಗಿದ್ದಾರೆ ಇಂತಹ ನಾಡಿನಲ್ಲಿ ಬಾಳುತ್ತಿರುವ ನಾವುಗಳೇ ದನ್ಯರು ಅಲ್ಲದೇ ಕರ್ನಾಟಕದಲ್ಲಿ ಅಪಾರವಾದ ಬೆಲೆಬಾಳುವ ಖನಿಜ ಸಂಪತ್ತು ಇದ್ದು ರಾಜಕೀಯದ ಪ್ರಭಾವಿ ಜನ ಹಾಳು ಮಾಡದಂತೆ ಕಾಪಾಡಬೇಕಿದೆ ಉಳಿಸಲು ಕರ್ನಾಟಕದ ಜನತೆ ಕೈ ಕಟ್ಟಿ ನಿಲ್ಲಬೇಕಿದೆ.ಹಾಗೆಯೆ ನಾವೆಲ್ಲ ಕನ್ನಡ ಮಾತೆಯ ಮಡಿಲಲ್ಲಿ ಕನ್ನಡಿಗರಾಗಿ ಬಾಳೋಣ
"ಜೈ ಕರ್ನಾಟಕ ಮಾತೇ ಎಲ್ಲೇ ಇರು ಹೇಗೆ ಇರು ಎಂದೆಂದಿಗೂ ನೀನು ಕನ್ನಡಿಗನಾಗಿರು "

28 Oct 2011

ಕೆಂಪು ದಾಳಿಂಬೆ ಹಣ್ಣಿನ ಮಹತ್ವ ನಿಮಗೆ ಗೊತ್ತೇ ?


ಕೆಂಪು ದಾಳಿಂಬೆ ಹಣ್ಣು  ಆರೋಗ್ಯಕ್ಕೆ ಉತ್ತಮ ದಿವ್ಶಔಷಧ ಈ  ಹಣ್ಣನ್ನು  ತಿನ್ನುವುದರಿಂದ ನಮ್ಮ ನೆನಪಿನ ಶಕ್ತಿಯು ಹೆಚ್ಚುವದು ಇದರಲ್ಲಿ ಸಿ ವಿಟಮಿನ್,ಫಾಸ್ಫೆರಸ್  ಇರುವದರಿಂದ ಮಹಿಳೆಯರಿಗೂ ಹಾಗೂ ಮಕ್ಕಳಿಗೂ ಹೆಚ್ಹು ಉಪಯುಕ್ತವಾದುದು .ಇತ್ತಿಚಿಗೆ  ಮಾರುಕಟ್ಟೆಯಲ್ಲಿ ಇದರ ಬೆಲೆಯೂ ಗಗನಕ್ಕೇರಿದೆ ಅದರೂ ಆರೋಗ್ಯವಂತರಗಿರಬೇಕಾದರೆ ದಾಳಿಂಬೆ ಹಣ್ಣನ್ನು  ತಿನ್ನುವದು ಉತ್ತಮ.ಬೇರೆ ಎಲ್ಲ ಹಣ್ಣಿಗಿಂತ ಹೆಚ್ಚು ಉಪಯುಕ್ತವದುದೆಂದು ಇತ್ತೀಚಿನ ಸಂಶ್ಯೋದನೆಯ ವರದಿಯಿಂದ ತಿಳಿದುಬಂದಿದೆ .ಅದಕ್ಕಾಗಿ ದಾಳಿಂಬೆಹಣ್ಣು  ತಿಂದು ಸದಾ ಅರೋಗ್ಯವಂತರಾಗಿರಿ.

    ದಾಳಿಂಬೆ ಹಣ್ಣಿನಿಂದಾಗುವ  ಪ್ರಯೋಜನಗಳು
  • ರಕ್ತದೊತ್ತಡ  ಕಡಿಮೆ ಆಗುವದು.
  • ದಾಳಿಂಬೆ ಎಲೆ ತಿನ್ನುವದರಿಂದ ಕೆಮ್ಮು ಕಡಿಮೆಯಾಗುವದು.
  • ಕೊಲೆಸ್ಟ್ರಾಲ್  ಕಡಿಮೆಯಾಗುವದು. 
  • ಮಹಿಳೆಯರು ದಾಳಿಂಬೆಹಣ್ಣಿನ  ರಸ ಕುಡಿಯುವದರಿಂದ ಮುಟ್ಟಿನ ತೊಂದರೆ ನಿವಾರಣೆಯಾಗುವದು.
  • ನಿಶ್ಯಕ್ತತೆ ಯನ್ನು ಕಡಿಮೆ ಮಾಡುವದು .
  • ದಾಳಿಂಬೆ ರಸ ಸೇವಿಸುವದರಿಂದ ಮುಖದ ಚರ್ಮವು  ಕಾಂತಿಯುತವಾಗುವದು.
  • ಲೈಂಗಿಕ  ತೊಂದರೆಯೂ ನಿವಾರಣೆಯಗುವದು
  • ಕ್ಯಾನ್ಸರ್ ರೋಗವನ್ನು ನಿಯಂತ್ರಿಸುವದು.
  • ದಾಳಂಬಿ ಬೀಜವನ್ನು  ತಿನ್ನುವದರಿಂದ ಹಲ್ಲುಗಳ ಹೊಳಪು  ಹೆಚ್ಹುವದು
  • ಮನಸ್ಸು ಉಲ್ಲಾಸದಿಂದ ಇರುವದು 
  • ಓದು,ಆಟ ಇತರೆ ಕೆಲಸದಲ್ಲಿ ಆಸಕ್ತಿ ಹೆಚಿಸುವದು.     
         ಅದಕ್ಕಾಗಿ ದಾಳಿಂಬೆ ತಿನ್ನುವದು ಅವಶ್ಯಕವಾದುದು ಇದರಿಂದ ಮಕ್ಕಳು ಮಹಿಳೆಯರಿಗೆ ನೆನಪಿನ ಶಕ್ತ್ತಿ ಹೆಚ್ಹಿ ಅರೋಗವಂತರಾಗಿರಲು ಸಹಾಯಕವಾಗಿದೆ.                     

26 Oct 2011

ಪಟಾಕಿಯ ಅನಾಹುತಕ್ಕೆ ಐದು ಪರಿಹಾರಗಳು

ದೀಪಾವಳಿ ಸಂಭ್ರಮ ಮೂರು ದಿನ ಮನೆಮನಗಳಲ್ಲಿ ತುಂಬಿರುತ್ತೆ. ಜೊತೆಗೆ ಎಲ್ಲೆಲ್ಲೂ ಪಟಾಕಿಗಳ ಅಬ್ಬರ ಜೋರಿರುತ್ತೆ. ಆದರೆ ಈ ಖುಷಿಯ ಹೊರತಾಗಿ ಆರೋಗ್ಯ ಸಮಸ್ಯೆಯತ್ತ ಯೋಚಿಸಿದರೆ ಪಟಾಕಿಯಿಂದ ಆರೋಗ್ಯದ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂಬ ಸಂಪೂರ್ಣ ಅರಿವಾಗುತ್ತದೆ.

ಉಸಿರಾಟದ ತೊಂದರೆ, ಹೃದ್ರೋಗಿಗಳು, ಹಸುಗೂಸು, ಪುಟ್ಟ ಮಕ್ಕಳು ಈ ಸಮಯದಲ್ಲಿ ಹೆಚ್ಚು ಜಾಗ್ರತೆಯಿಂದಿರಬೇಕು. ಇಲ್ಲದಿದ್ದರೆ ಈ 3 ದಿನಗಳ ಅವಧಿ ಉಂಟಾಗುವ ಪ್ರದೂಷಣೆ ಪರಿಣಾಮ ಜೀವನವಿಡೀ ಉಳಿದುಕೊಳ್ಳಬಹುದು.

ಪಟಾಕಿ ಹೊಗೆ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

1. ಪಟಾಕಿ ಹೊಗೆಯಿಂದ ಮಕ್ಕಳ ಮೂಗು ಮತ್ತು ಗಂಟಲಿನಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಸೂಕ್ಷ್ಮ ಆರೋಗ್ಯವುಳ್ಳ ಮಕ್ಕಳಲ್ಲಿ ಊತವೂ ಕಾಣಿಸಿಕೊಳ್ಳುತ್ತೆ. ಕೆಮ್ಮು ಆರಂಭವಾಗಿ ಎದೆ ಉರಿಯಾಗುತ್ತದೆ.

2. ಪಟಾಕಿ ಹೊಗೆಯಿಂದ ಕಣ್ಣಿನಲ್ಲಿ ಉರಿ ಉಂಟಾಗಿ ಕಣ್ಣು ಕೆಂಪಗಾಗುವಂತೆ ಮಾಡುತ್ತದೆ. ಎಲ್ಲಾ ವಯೋಮಾನದವರಲ್ಲೂ ಈ ಪರಿಣಾಮ ಗೋಚರಿಸುತ್ತದೆ. ಇದರ ಶಬ್ದ ಕಿವಿಯ ತಮಟೆಯ ಶಕ್ತಿಯನ್ನೂ ಕುಂದಿಸುತ್ತದೆ.

3. ಪಟಾಕಿಗಳನ್ನು ಸಿಡಿಸುವುದರಿಂದ ಬಿಪಿಯಿಂದ ಬಳಲುತ್ತಿದ್ದವರಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ. ತಲೆಸುತ್ತು, ತಲೆ ನೋವು ಮತ್ತು ತಲೆ ತಿರುಗುವುದು ಈ ಪರಿಣಾಮಗಳು ನಂತರ ಗೋಚರಿಸಲು ಪ್ರಾರಂಭವಾಗುತ್ತದೆ.

4. ಪಟಾಕಿ ಹೊಗೆಯಿಂದ ಶ್ವಾಸಕೋಶದ ತೊಂದರೆ ಉಂಟಾಗಿ ಕೆಮ್ಮು, ಸೀನು ಹೆಚ್ಚಾಗುತ್ತದೆ. ಅಲ್ಲದೆ ಅಸ್ತಮಾ ರೋಗಿಗಳು ಈ ಸಮಯದಲ್ಲಿ ಪಟಾಕಿ ವಾತಾವರಣದಿಂದ ದೂರವಿದ್ದರೆ ಉತ್ತಮ. ಇಲ್ಲದಿದ್ದರೆ ತೊಂದರೆ ಉಲ್ಬಣವಾಗುವ ಸಾಧ್ಯತೆಯೇ ಹೆಚ್ಚು.

5. ಈ ವಿಷಕಾರಿ ಅನಿಲವನ್ನು ಗರ್ಭಿಣಿಯರು ಸೇವಿಸಿದರೆ ತಾಯಿಗೆ ಮತ್ತು ಹುಟ್ಟಲಿರುವ ಮಗುವಿಗೆ, ಇಬ್ಬರಿಗೂ ತೊಂದರೆ, ಹುಟ್ಟುತ್ತಲೇ ಉಸಿರಾಟದ ತೊಂದರೆಗೆ ಮಗು ಒಳಗಾಗಬಹುದು. ಆದ್ದರಿಂದ ಈ ಸಮಯದಲ್ಲಿ ಗರ್ಭಿಣಿಯರು ಜಾಗ್ರತೆ ವಹಿಸಲೇಬೇಕು. ಮಾನಸಿಕವಾಗಿ ಮತ್ತು ದೈಹಿಕವಾಗಿ ಇದು ತೊಂದರೆಗೀಡುಮಾಡಬಹುದು.

20 Sept 2011

ಕನ್ನಡಕ್ಕೆ ಮತ್ತೊಂದು ಜ್ಞಾನಪೀಠ : ಸಾಹಿತ್ಯದ ಅಷ್ಟದಿಕ್ಪಾಲಕರು

ಬೆಂಗಳೂರು ಸೆ ೧೯: ಕಾದಂಬರಿಕಾರ, ನಾಟಕಕಾರ, ಸಂಶೋಧಕ ಹೀಗೆ ಬಹುಮುಖ ಪ್ರತಿಭೆಯಾದ ಕವಿ ಚಂದ್ರಶೇಖರ ಕಂಬಾರರಿಗೆ  ಜ್ಞಾನಪೀಠ ಪ್ರಶಸ್ತಿ ಒಲಿದು ಬಂದಿದೆ. ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುನ್ನತ ಗೌರವವಾದ ಜ್ಞಾನಪೀಠ ಪ್ರಶಸ್ತಿ ಎಂಟನೆ ಬಾರಿ ಪಡೆಯುವುದರೊಂದಿಗೆ ಕನ್ನಡ ಸಾಹಿತ್ಯವು ಅಷ್ಟದಿಕ್ಪಾಲಕರ ಪಡೆಯಾಗಿದೆ. ಕನ್ನಡಕ್ಕೆ ಒಟ್ಟು ಎಂಟು ಪ್ರಶಸ್ತಿ ಬಂದಿರುವುದು ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ತೋರಿಸುತ್ತದೆ. 

ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ಜನೆವರಿ 2, 1937 ರಲ್ಲಿ ಜನಿಸಿದ ಚಂದ್ರಶೇಖರ ಕಂಬಾರರಿಗೆ ಅವರ ತಾಯಿಯೇ ಕಾವ್ಯದ ಮೊದಲು ಗುರು. ಬಹುಮುಖ ಪ್ರತಿಬೆಯಾದ ಕಂಬಾರರಿಗೆ ಇನ್ನೊಂದು ಪ್ರೀತಿಯ ಕ್ಷೇತ್ರ ಸಿನಿಮಾ. ಅದರ ಫಲವಾಗಿಯೇ ಕಾಡುಕುದುರೆ, ಕರಿಮಾಯಿ ಹಾಗು ಸಂಗೀತಾ ರೂಪುಗೊಂಡವು.


15 Sept 2011

KFCC ರಾದಾಂತ ಸ್ವಲ್ಪ ಓದಿ

ಕೆಟ್ಟ ಮೇಲೆ ಬುದ್ಧಿ ಬಂತು....!

ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಹುಟ್ಟು ಹಬ್ಬ ಇಂದು


ಭಾರತ ಕಂಡ ಅತ್ಯದ್ಬುತ ಇಂಜಿನಿಯರ್ ಗಳಲ್ಲಿ ಒಬ್ಬರಾದ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರಿಗೆ ನಮ್ಮ ಗೌರವ ಪೂರ್ವಕ ನಮನಗಳು.ಈ ಮಹಾನ್ ವ್ಯಕ್ತಿಯ ಉದ್ಯಮ ಶೀಲತೆ ಕರ್ನಾಟಕದ ಸ್ವಾವಲಂಬನೆಗೆ ಅತೀವ ಕಾಣಿಕೆ ಎಂದರೆ ತಪ್ಪಾಗಲಾರದು.

12 Sept 2011

ಕ್ರಿಕೆಟ್ : ಭಾರತಕ್ಕೆ ಸರಣಿ ಸೋಲು

ಲಂಡನ್, ಸೆ.11: ಸತತವಾಗಿ ಏಕದಿನ ಪಂದ್ಯಗಳಲ್ಲಿ ಸೋತು ಸುಣ್ಣವಾಗಿರುವ ಭಾರತಕ್ಕೆ ಮತ್ತೊಂದು ಆಘಾತ. ನಿನ್ನೆ ನಡೆದ 4ನೇ ಟೆಸ್ಟ್ ಕ್ರಿಕೆಟ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ. ಮೊದಲು ಬ್ಯಾಟ್ ಮಾಡಿದ ಭಾರತ 50 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 280 ಗಳಿಸಿತ್ತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ 48.5 ಓವರಗಳಲ್ಲಿ 6 ವಿಕೆಟ್ ನಷ್ಟಕ್ಕೆ 270 ರನ್ ಗಳಿಸಿದ್ದಾಗ ಮಳೆಯಿಂದ ಪಂದ್ಯ ರದ್ಡಾಯಿತು. ಡಕ್-ವರ್ತ ನಿಯಮದ ಪ್ರಕಾರ ಇಂಗ್ಲೆಂಡ್ ಅಷ್ಟೇ ಓವರಗಳಲ್ಲಿ 270 ರನ ಗಳಿಸಿದ್ದರಿಂದ ಪಂದ್ಯ ಟೈ ಎಂದು ಘೋಷಿಸಲಾಯಿತು. ಇದಕ್ಕಿಂತ ಮೊದಲು ಮೂರು ಸಲ ಮಳೆಯಿಂದ ಆಟ ನಿಂತಿತ್ತು. ಇದರಿಂದ ಭಾರತ ಸರಣಿ ಸೋಲು ಅನುಭವಿಸಿದೆ. ಪಂದ್ಯಪುರುಷೋತ್ತಮ ಪ್ರಶಸ್ತಿಯನ್ನು ಜಂಟಿಯಾಗಿ ಸುರೇಶ ರೈನಾ ಹಾಗೂ ರವಿ ಬೋಪಾರಾಗೆ ನೀಡಲಾಯಿತು. ಮಳೆ ಬಂದು ಎಲ್ಲಾ ಹಾಳು ಮಾಡುಬಿಟ್ಟಿತು ಎಂದು ನಾಯಕ ಧೋನಿ ಹೇಳಿದ್ದಾರೆ.

ನಿರ್ಮಾಪಕರ ಸಂಘದ ಕ್ರಮ : ಎತ್ತಿಗೆ ಜ್ವರ ಎಮ್ಮೆಗೇ ಬರೆ

ಬೆಂಗಳೂರು ಸೆ 11: ನಟಿ ನಿಖಿತಾರವರನ್ನು ಕನ್ನಡ ಚಲನಚಿತ್ರ ರಂಗದಿಂದ ಮೂರು ವರ್ಷಗಳ ಕಾಲ ನಿಷೇಧಿಸಿರುವ ಕ್ರಮ ಕ್ರಮ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೈತಿಕ ದಿವಾಳಿತನವನ್ನು ಎತ್ತಿ ತೋರಿಸಿದೆ.ತಮ್ಮ ಪತ್ನಿಯೊಂದಿಗೆ ಅತ್ಯಂತ ಹೀನಾಯವಾಗಿ ವರ್ತಿಸಿರುವ ನಟನನ್ನು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ನಿಷೇಧಿಸುವ ದಿಟ್ಟತನವನ್ನು ತೋರಿಸಬೇಕಾಗಿತ್ತು. ಅದು ಬಿಟ್ಟು ಎತ್ತಿಗೆ ಜ್ವರ ಎಮ್ಮೆಗೇ ಬರೆ ಹಾಕಿದಂತಾಗಿದೆ ನಿರ್ಮಾಪಕರ ಸಂಘದ ಈ ಕ್ರಮ.
ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ಸಂಬಂಧ ಕೆಲ ತಿಂಗಳಿಂದ ಹಳಸಿತ್ತು ಎನ್ನಲಾಗಿದೆ. ಇದಕ್ಕೆ ಕಾರಣಗಳು ಬಹಿರಂಗವಾಗಿಲ್ಲ. ನಿಖಿತಾ ಜತೆಗೆ ದರ್ಶನ್ ಸ್ನೇಹ ಮುಂದುವರಿಸಿದ್ದೇ ದಂಪತಿ ನಡುವಣ ವೈಮನಸ್ಯಕ್ಕೆ ಕಾರಣವಾಯಿತು ಎನ್ನುತ್ತವೆ ಚಿತ್ರರಂಗದ ಮೂಲಗಳು. ನಿಖಿತಾ ಪ್ರೇಮಪಾಶದಲ್ಲಿ ಸಿಲುಕಿದ ದರ್ಶನ್, ಧರ್ಮಪತ್ನಿ ವಿಜಯಲಕ್ಷ್ಮಿ ಜತೆಗಿನ ಸಂಬಂಧವನ್ನು ಕಡೆಗಣಿಸುತ್ತಾ ಬಂದಿದ್ದರು. ಇಬ್ಬರ ನಡುವೆ ಕಲಹವೂ ನಡೆಯುತ್ತಿತ್ತು.

11 Sept 2011

ಸುಂದರ ಸಂಸಾರಕ್ಕೆ ಹುಳಿಹಿಂಡಿದಳಾ ಸೇಕ್ಸಿ ಕ್ವೀನ್ ನಿಕೀತಾ?


ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್ ಮತ್ತು ಮೀನ ತೂಗುದೀಪ ದಂಪತಿಗಳ ಹಿರಿಯ ಮಗನಾಗಿ, ಪೆಭ್ರವರಿ ೧೬ ೧೯೭೭ರಂದು ದರ್ಶನ್ ಹುಟ್ಟಿದರು.
ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟದ್ದು ವಬ್ಬ ಛಾಯಾಗ್ರಾಹಕನ ಕೈಕೆಳಗೆ ಕೆಲಸ ಮಾಡುತ್ತ ದರ್ಶನಗೆ ದಿಡಿರ್ ಅಂತಾ ಒಂದು ದಿನ
ಕಿರುತೆರೆಯಲ್ಲಿ ನಟಿಸಲು ಅವಕಾಶವದಗಿ ಬಂತು ಅದೆರಿತಿ ಅವರು ವಂದೆರಡು ಕಿರುತೆರೆಯ ದಾರವಾಹಿಗಳಲ್ಲಿ ನಟಿಸಿ ಜನಮೆಚ್ಚುಗೆಗೆ ಪಾತ್ರರಾದರು
ಆಮೇಲೆ ೨೦೦೨ರಲ್ಲಿ ಪಿ ಎನ್ ಸತ್ಯಾ ನಿರ್ದೇಶನದ "ಮೆಜೆಸ್ಟಿಕ್" ಚಿತ್ರದಲ್ಲಿ ನಟಿಸಿದರು ಆಮೇಲೆ ಧ್ರುವ,ನಿನಗೋಸ್ಕರ,ಕಿಟ್ಟಿ,ಹೀಗೆ ಹಲವು ಚಿತ್ರ ಗಳಲ್ಲಿ ನಟಿಸಿದರು ಆದಾರೆ ಅವರಿಗೆ
ಬ್ರೆಕ್ ಕೋಟ್ಟ ಚಿತ್ರ ೨೦೦೩ರಲ್ಲಿ ಪ್ರೇಮ್ ನಿರ್ದೇಶನದ "ಕರಿಯ" ಆಮೇಲೆ ಜನ ಅವರನ್ನ ಮೆಚ್ಚಿದ್ದು ಹೊಡಿ ಬಡಿ ಚಿತ್ರಗಳಲ್ಲಿ
ಹಾಗೆಯೆ ಕನ್ನಡ ಚಿತ್ರರಂಗದಲ್ಲಿ ಅತಿಕಡಿಮೆ ಅವದಿಯಲ್ಲಿ ಹೆಸರುಮಾಡಿ ಛಾಲೆಂಜಿಂಗ್ ಸ್ಟಾರ್ ಅಂತಾ ಕರೆಸಿಕೊಂಡು ಕನ್ನಡದ ಒಬ್ಬ
ದೊಡ್ಡ ಬೇಡಿಕೇಯ ನಟರಾಗಿ ಬೆಳೆದುನಿಂತರು
ಆಮೇಲೆ ನಿಜಜೀವನದ ಪ್ರೀತಿ ಶುರುವಾಗಿದ್ದು ವಿಜಯಲಕ್ಷ್ಮಿಯ ಜೋತೆ ವಿಜಯಲಕ್ಷ್ಮಿಯು ವಬ್ಬ ಕಾಸಗಿ ಟಿವ್ಹಿಯ ನಿರುಪಕಿಯಾಗಿ ಕೆಲಸ ಮಾಡುತ್ತಿದಳು
ಇವರಿಬ್ಬರದು ಲವ್ ಕಮ್ ಅರೇಂಜ್ ಮ್ಯಾರೇಜ್ ಆದರು ಆಮೇಲೆ ಏಳು ವರ್ಷವಾಯಿತ್ತು. ಆಮೆಲೆ ನಿಮಗೆಲ್ಲ ಗೋತ್ತೆಯಿದೆ
ದರ್ಶನ್ ಅವರಿಂದ ನಡೆಯುತ್ತಿದ್ದ ಕೌಟುಂಬಿಕ ಹಿಂಸೆ, ಅವಮಾನ ಇಂದು ನಿನ್ನೆಯದಲ್ಲ. ಮದುವೆಯಾಗಿ ಏಳು ವರ್ಷವಾಗಿತ್ತು. ಮೂರು ವರ್ಷದ ಒಂದು ಗಂಡು ಮಗುನೂ ಇದೆ. ಆದರೆ, ಕಳೆದ ಒಂದು ವರ್ಷದಿಂದ ಅವರ ವರ್ತನೆ ಸರಿಯಿಲ್ಲ ಎನ್ನುವುದು ಪತ್ನಿ ಮತ್ತು ಅತ್ತೆ ಮಾಡುವ ದೋಷಾರೋಪಣೆ. ಇದಕ್ಕೆಲ್ಲಾ ಕಾರಣ ವೇನು ಗೋತ್ತೆ ಅದೇ ಮುಂಬಯ ಮೂಲದ ನಟಿ ನಿಕೀತಾ ಅಂತಾ ಎನ್ನುತ್ತವೆ ಚಿತ್ರರಂಗದ ಮೂಲಗಳು.ಆದರೆ ನಿಕೀತಾ ಇದನ್ನ ತಳ್ಳಿ ಹಾಕಿದ್ದಾರೆ.
ನಿಖಿತಾ ಪ್ರೇಮಪಾಶದಲ್ಲಿ ಸಿಲುಕಿದ ದರ್ಶನ್, ಧರ್ಮಪತ್ನಿ ವಿಜಯಲಕ್ಷ್ಮಿ ಜತೆಗಿನ ಸಂಬಂಧವನ್ನು ಕಡೆಗಣಿಸುತ್ತಾ ಬಂದಿದ್ದರು. ಇಬ್ಬರ ನಡುವೆ ಕಲಹವೂ ನಡೆಯುತ್ತಿತ್ತು. ಚಿತ್ರೋದ್ಯಮದ ಅನೇಕ ಗಣ್ಯರು ಇಬ್ಬರ ನಡುವೆ ಸಂಧಾನಕ್ಕೆ ಯತ್ನಿಸಿದ್ದರು.
ಆದರೆ ಎನೆಇರಲಿ ನಮ್ಮಕನ್ನಡದ ಜನ ಹೇಳೋದಿಸ್ಟೆ ಸ್ವಾಮೀ ... ಅಮ್ಮಾ ನಿಕೀತಮ್ಮಾ ನಮ್ಮ ಹುಡುಗನ ಹಾಳುಮಾಡಬೇಡಾ ಬಿಟ್ಟಬಿಡು.

10 Sept 2011

ನಿಮ್ಮ ಬಾಯಿ ದುರ್ವಾಸನೆಗೆ ಸುಲಭ ಮನೆ ಮದ್ದು


ಬಾಯಿ ದುರ್ನಾತ, ದುರ್ವಾಸನೆ ಒಂದಲ್ಲ ಒಂದು ಬಾರಿ ಎಲ್ಲರನ್ನು ಕಾಡುವ ಸಾಮಾನ್ಯ ಸಮಸ್ಯೆ. ಧೂಮಪಾನಿಗಳು ಮದ್ಯ, ಮಾಂಸ ಸೇವಿಸುವವರ ಬಾಯಿ ಮಾತ್ರ ಮೋರಿ ವಾಸನೆಯಂತೆ ದುರ್ನಾತ ಬೀರುತ್ತದೆ ಎಂದು ಮೂಗು ಮುಚ್ಚಿಕೊಳ್ಳುವವರು ಸ್ವಲ್ಪ ತಮ್ಮ ಬಾಯೆಂಬ ಬ್ರಹ್ಮಾಂಡವನ್ನು ನೋಡಿಕೊಳ್ಳುವುದೊಳಿತು. ಬಾಯಿ ದುರ್ನಾತಕ್ಕೆ ಅನೇಕ ಪರಿಹಾರ ಉಪಾಯಗಳಿದ್ದು, ಸರಳ ಹಾಗೂ ಸುಲಭ ವಿಧಾನಗಳಿಂದ ಸಮಸ್ಯೆ ಬಗೆ ಹರಿಸಿಕೊಳ್ಳಬಹುದಾಗಿದೆ. ಬಾಯಿ ದುರ್ವಾಸನೆ ಬಾರದಂತೆ ತಡೆಗಟ್ಟುವುದು ಕೂಡಾ ಅತಿ ಮುಖ್ಯ.

ಬಾಯಿ ದುರ್ನಾತ ತಡೆಯಲು, ನಿವಾರಿಸಲು ಸರಳ ವಿಧಾನಗಳು:
* ದಿನ ಬೆಳಗೆದ್ದು ನೀನು ಬಾಯಿ ಬಿಟ್ಟು ಆಕಳಿಸಿದರೆ ಸಾಕು, ಮನೆಯಲ್ಲಿರುವ ಕ್ರಿಮಿ ಕೀಟಗಳೆಲ್ಲಾ ಫಿನಿಷ್ ಎಂದು ರೂಮ್ ಮೇಟ್ ಗಳು ರೇಗಿಸುವುದು ಮಾಮೂಲಿಯಾಗಿತ್ತು. ಇದನ್ನು ತಪ್ಪಿಸಲು ಬಳಸಿದ ಮೊದಲ ವಿಧಾನ ಹಲ್ಲುಜ್ಜುವುದು. ದಿನನಿತ್ಯ ಎರಡು ಬಾರಿ ಬ್ರಷ್ (ಸಾಧ್ಯವಾದಷ್ಟು ಸಾಫ್ಟ್ ಅಥವಾ ಸೆಮಿ ಸಾಫ್ಟ್ ಬ್ರಷ್ ಬಳಸಿ) ಮಾಡಿ, ಬಾಯಿ ಮುಕ್ಕಳಿಸಬೇಕು. ಆಹಾರ ಸೇವನೆ ನಂತರ, ರಾತ್ರಿ ಮಲಗುವ ಮುನ್ನ ಬಾಯಿ ಮುಕ್ಕಳಿಸುವುದನ್ನು ಮರೆಯಬೇಡಿ. ಅದರಲ್ಲೂ ಹಲ್ಲು ಹುಳುಕು ಇದ್ದವರಿಗೆ ಬಾಯಿ ಮುಕ್ಕಳಿಸುವುದು ಕಡ್ಡಾಯ.

* ಶುದ್ಧ ನೀರಿನಿಂದ ಬಾಯಿ ಮುಕ್ಕಳಿಸುವುದನ್ನು ರೂಢಿ ಮಾಡಿಕೊಳ್ಳಿ. ಉಗುರು ಬೆಚ್ಚಗಿನ ನೀರಿನ ಜೊತೆ ಸ್ವಲ್ಪ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವುದು ಹಲ್ಲು, ಬಾಯಿ ಹಾಗೂ ಗಂಟಲು ಸ್ವಚ್ಛತೆಗೆ ಅನುಕೂಲ. ಇಲ್ಲದಿದ್ದರೆ ಮೆಡಿಕಲ್ ಸ್ಟೋರ್ ಗಳಲ್ಲಿ ಸಿಗುವ ರೆಡಿಮೇಡ್ ಮೌಥ್ ವಾಷ್ ಗಳನ್ನು ಬಳಸಬಹುದು. ಆದರೆ, ಹೆಚ್ಚು ಕೆಮಿಕಲ್ ಹಾಗೂ ಆಲ್ಕೋಹಾಲ್ ಯುಕ್ತ ಮೌಥ್ ವಾಷ್ ಬಳಸಬೇಡಿ.

* ಸೂರ್ಯಕಾಂತಿ ಬೀಜಗಳು ಬಾಯಿ ದುರ್ನಾತ ತೊಳಗಿಸಲು ತುಂಬಾ ಉಪಯುಕ್ತವಾಗಲಿದೆ. ಅದರಲ್ಲೂ ನಾನ್ ವೆಜ್ ತಿನ್ನುವವರು ಸ್ವಲ್ಪ ಸೂರ್ಯಕಾಂತಿ ಬೀಜಗಳನ್ನು ಬಾಯಿಗೆ ಹಾಕಿಕೊಂಡು ಅಗೆದು, ನೀರು ಕುಡಿದರೆ ಸಾಕು. ದುರ್ಗಂಧ ದೂರವಾಗುತ್ತದೆ.

* ದಿನಕ್ಕೊಂದು ಸೇಬು ಬಳಸಿದರೆ ವೈದ್ಯರನ್ನು ದೂರವಿಡಬಹುದು ಎಂದು ಮಾತು ನಿಜ. ಸೇಬು ಹಣ್ಣು ತಿನ್ನುವುದರಿಂದ ಬಾಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗಿ ಬಾಯಿ ಸ್ವಚ್ಛವಾಗುತ್ತದೆ.

* ನಿಂಬೆ ಹಣ್ಣು ತುಂಬಾ ಪರಿಣಾಮಕಾರಿಯಾಗಬಲ್ಲುದು. ನಿಂಬೆ ರಸವನ್ನು ಬಿಸಿ ನೀರಿನೊಂದಿಗೆ ಸೇವಿಸಿ ಬಾಯಿ ಗಳಗಳ ಮಾಡುತ್ತಾ ಬಂದರೆ, ಬಾಯಿ ದುರ್ವಾಸನೆ ನಾಶವಾಗಿ ಹೊಸ ಆಹ್ಲಾದ ಮೂಡುತ್ತದೆ. ಇದಕ್ಕಿಂತ ಉತ್ತಮ ಮನೆಮದ್ದು ಇಲ್ಲ ಎನ್ನಬಹುದು.

* ಬಾಯಿ ದುರ್ನಾತ ತೊಲಗಿಸಿ, ಸುವಾಸನೆ ಬೀರುವಂತೆ ಮಾಡಲು ಒಂದೆರಡು ಏಲಕ್ಕಿ ಎಸಳುಗಳನ್ನು ಬಾಯಿಗೆ ಹಾಕಿಕೊಂಡು ಅಗಿಯುತ್ತಾ ಇರಿ. ಏಲಕ್ಕಿ ಅಗಿಯುವುದರಿಂದ ಮೈ ಕೂಡಾ ಬೆಚ್ಚಗಾಗುತ್ತದೆ. ಅಲ್ಲದೆ, ಮಾರುಕಟ್ಟೆಯಲ್ಲಿ ಸಿಗುವ ಮೌಥ್ ರಿಫ್ರೆಷ್ ನರ್ ಗಿಂತ ನೈಸರ್ಗಿಕವಾದ ಏಲಕ್ಕಿ ಸೇವನೆ ಉತ್ತಮ.

ಇದಲ್ಲದೆ, ಮಿಂಟ್, ಪುದೀನ ಬರಿತ ಕ್ಯಾಂಡಿಗಳು, ಈರುಳ್ಳಿ, ಕರಿಬೇವು ಮುಂತಾದವುಗಳನ್ನು ಸೇವಿಸಿ ಧೂಮಪಾನಿಗಳು ತಮ್ಮ ಚಟದಿಂದ ಇತರರಿಗೆ ಉಂಟಾಗುವ ಮುಜುಗರ, ತೊಂದರೆಗಳನ್ನು ತಪ್ಪಿಸಲು ಹೆಣಗುತ್ತಾರೆ.

ಬಾಯಿ ದುರ್ನಾತ ತಡೆಗಟ್ಟುವುದು ಹೇಗೆ?:

* ಅತ್ಯಂತ ಸರಳ ವಿಧಾನವೆಂದರೆ ಸಾಕಷ್ಟು ನೀರು ಕುಡಿಯುವುದು. ಬಾಯಿ ದುರ್ವಾಸನೆಗೆ ಮುಖ್ಯ ಕಾರಣವಾದ ಬ್ಯಾಕ್ಟೀರಿಯಾವನ್ನು ಕೊಲ್ಲಲು ನೀರಿಗಿಂತ ಪ್ರಬಲ ಅಸ್ತ್ರ ಮತ್ತೊಂದಿಲ್ಲ. ಬಿಸಿ ನೀರು ಸೇವನೆ ಕೂಡಾ ಒಳ್ಳೆಯದು.

* ಬಾಯಿ ಸ್ವಚ್ಛತೆಯಲ್ಲಿ ಪ್ರಮುಖವಾಗಿ ದಿನಕ್ಕೆರಡು ಬಾರಿ ಹಲ್ಲುಜ್ಜುವುದು ಎಷ್ಟು ಮುಖ್ಯವೋ, ನಾಲಗೆ ಸ್ವಚ್ಛತೆಯೂ ಮುಖ್ಯ. ನಾಲಗೆ ಸ್ವಚ್ಛಗೊಳಿಸಲು ಕೆಲವು ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಅವುಗಳ ಬಳಕೆ ಭಾರತೀಯರಲ್ಲಿ ತುಂಬಾನೇ ಕಮ್ಮಿ. ಆದರೂ, ಕೈ ಬೆರಳುಗಳ ಸಹಾಯದಿಂದ ನಾಲಗೆ ಒಂದೆರಡು ಬಾರಿ ತಿಕ್ಕಿ, ನೀರು ಹಾಕಿಕೊಂಡು ಬಾಯಿ ಮುಕ್ಕಳಿಸುವುದು ಸರಳ ವಿಧಾನ. ಹಲ್ಲುಜ್ಜಿದ ನಂತರ ತೋರು ಬೆರಳನ್ನು ಬ್ರಷ್ ನಂತೆ ಬಳಸಿ ಒಸಡುಗಳನ್ನು ಉಜ್ಜುವುದರಿಂದ ಒಸಡುಗಳಲ್ಲಿ ರಕ್ತ ಸಂಚಾರ ಹೆಚ್ಚಿ, ಹಲ್ಲುಗಳನ್ನು ಇನ್ನಷ್ಟು ಬಿಗಿಯಾಗಿ ಹಿಡಿದುಕೊಳ್ಳುತ್ತವೆ.

* ದುಶ್ಚಟಗಳ ಸಹವಾಸವಿಲ್ಲದವರೂ ಕೂಡಾ ಬಾಯಿ ದುರ್ನಾತಕ್ಕೆ ಒಳಗಾಗುವ ಸಾಧ್ಯತೆಯಿರುತ್ತದೆ. ಹುಳುಕು ಹಲ್ಲು ಇದ್ದರೆ ಮೊದಲು ಸರಿಪಡಿಸಿಕೊಳ್ಳಿ. ಕಾಫಿ ಸೇವನೆ ಚಟವುಳ್ಳವರು ಕಾಫಿಗಿಂತ ಟೀ ಸೇವಿಸುವುದು ಒಳ್ಳೆಯದು. ಬಾಯಿ ದುರ್ನಾತ ತಡೆಗೆ ಚಹಾ ಸಹಕಾರಿ ಎಂದು ತಜ್ಞರು ಹೇಳುತ್ತಾರೆ. ಆದರೆ, ಚಹಾ ಪುಡಿ ಕಲಬೆರಕೆ ವ್ಯಾಪಕವಾಗಿರುವ ಕಾರಣ, ಕಾಫಿ ಇರಲಿ, ಟೀ ಇರಲಿ ಕುಡಿದ ನಂತರ ಬಾಯಿ ಮುಕ್ಕಳಿಸುವುದು ಒಳ್ಳೆಯದು.

* ಆಗಾಗ ಸಕ್ಕರೆ ಅಂಶ ಕಮ್ಮಿಯಿರುವ ಚ್ಯೂಯಿಂಗ್ ಗಮ್ ತಿನ್ನಬಹುದು. ಬಾಯಿಯನ್ನು ಎಂಜಲು ಪ್ರಮಾಣ ಹೆಚ್ಚಿಸಿ, ಬಾಯಿ ದುರ್ವಾಸನೆ ಹೊಗಲಾಡಿಸಲು ಇದು ಸಹಾಯಕಾರಿ. ಆದರೆ, ಬಬ್ಬಲ್ ಗಮ್, ಚ್ಯೂಯಿಂಗ್ ಗಮ್ ಅಗಿಯುವುದನ್ನೇ ಚಟ ಮಾಡಿಕೊಳ್ಳಬೇಡಿ. ಇನ್ನೂ ಹಲ್ಲು ಹುಳುಕು ಇದ್ದವರು ಚಾಕಲೋಟ್, ಸಿಹಿ ಪದಾರ್ಥ ಸೇವಿಸಬಾರದು ಎಂದರೆ ಕ್ಲೀಷೆಯಾದೀತು.

* ಈ ಎಲ್ಲಾ ಉಪಾಯಗಳು ವಿಫಲವಾದರೆ, ಕೂಡಲೇ ವೈದ್ಯರನ್ನು ಕಾಣುವುದು ಉತ್ತಮ ಅದರಲ್ಲೂ ಪಾನ್ ಬೀಡಾ ಹಾಕುವ ಚಟ ಉಳ್ಳವರು, ಧೂಮಪಾನಿಗಳು, ಮದ್ಯಪಾನಿಗಳು ಅಗ್ಗಿಂದಾಗ್ಗೆ ವೈದ್ಯರನ್ನು ಕಾಣಲೇಬೇಕು.

ಇಷ್ಟಲ್ಲದೆ, ಇನ್ನೂ ಅನೇಕಾನೇಕ ವಿಧಾನಗಳನ್ನು ಜನ ಬಳಸುತ್ತಿರಬಹುದು. ಅದರ ಅರಿವು ನಿಮಗಿದ್ದರೆ, ನಮಗೂ ಒಂದಿಷ್ಟು ತಿಳಿಸಿ, ನಿಮ್ಮ ಸ್ನೇಹಿತರಿಗೆ ಬಾಯಿ ದುರ್ವಾಸನೆ ಇದ್ದರೆ ಮೂಗು ಮುಚ್ಚಿಕೊಳ್ಳಬೇಡಿ. ಮೇಲಿನ ಸಲಹೆ ತಿಳಿಸಿ.

9 Sept 2011

ಚಿತ್ರ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಬಂಧನ


ಕೌಟುಂಬಿಕ ಕಲಹದಿಂದಾಗಿ ಪತ್ನಿ ವಿಜಯಲಕ್ಷ್ಮಿ ಮತ್ತು ಅವರ ಮೂರು ವರ್ಷದ ಪುತ್ರನ ಮೇಲೆ ನಡು ರಾತ್ರಿ 12 ಗಂಟೆ ವೇಳೆ ವಿಜಯನಗರದ ತನ್ನ ಗೆಳತಿಯಮನೆಯಲ್ಲಿದ್ದ ವಿಜಯಲಕ್ಷ್ಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಚಿತ್ರ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರನ್ನು ವಿಜಯನಗರ ಪೊಲೀಸರು ಶುಕ್ರವಾರ ಬೆಳಗ್ಗೆ ಬಂಧಿಸಿದ್ದಾರೆ.
ಕನ್ನಡದ ಖ್ಯಾತ ನಟ, ದಿವಂಗತ ತೂಗುದೀಪ ಶ್ರೀನಿವಾಸ್ ಅವರ ಪುತ್ರ ದರ್ಶನ್ ಅವರು ತಮ್ಮ ಪತ್ನಿಗೆ ರಿವಾಲ್ವರ್ ತೋರಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ತೀವ್ರ ವಾಗಿ ಗಾಯಗೊಂಡಿರುವ ವಿಜಯಲಕ್ಷ್ಮಿ ಮತ್ತು ಪುತ್ರನನ್ನು ವಿಜಯನಗರದ ಗಾಯತ್ರಿ ನರ್ಸಿಂಗ್ ಹೋಂಗೆ ದಾಖಲಿಸಲಾಗಿದೆ.
ಈ ಮಧ್ಯೆ, ಸಕಲೇಶಪುರದಲ್ಲಿ ನಡೆಯುತ್ತಿದ್ದ ದರ್ಶನ್ ತಾರಾಗಣದ 'ಚಿಂಗಾರಿ' ಸಿನಿಮಾ ಚಿತ್ರೀಕರಣವನ್ನು ರದ್ದುಪಡಿಸಲಾಗಿದೆ.
ದಂಪತಿ ಮಧ್ಯೆ ಇತ್ತೀಚೆಗೆ ವಿರಸ ನೆಲೆಸಿತ್ತು. ರಾಜರಾಜೇಶ್ವರಿ ನಗರದಲ್ಲಿರುವ ಗಂಡನ ಮನೆಯಿಂದ ವಿಜಯನಗರದಲ್ಲಿರುವ ಸ್ನೇಹಿತೆ ವಿದ್ಯಾ ಮನೆಗೆ ವಿಜಯಲಕ್ಷ್ಮಿ ಬಂದಿದ್ದರು. ಆದರೆ ಅಲ್ಲಿಗೇ ತೆರಳಿದ ದರ್ಶನ್, ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಐಪಿಸಿ ಸೆಕ್ಷನ್ 301, 498 ಎ, ಶಸ್ತ್ರಾಸ್ತ್ರ ಕಾಯಿದೆ ಉಲ್ಲಂಘನೆಯಡಿ ನಟ ದರ್ಶನ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ತಕ್ಷಣ ಅವರನ್ನು ಕೋರ್ಟಿಗೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ

7 Sept 2011

ಜನಾರ್ದನ ರೆಡ್ಡಿ ಅರ್ಜಿ ವಿಚಾರಣೆ ಗುರುವಾರಕ್ಕೆ

ಹೈದರಾಬಾದ್ ಸೆ.7:ಅಕ್ರಮ ಗಣಿಗಾರಿಕೆ ಹಾಗೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಹಾಗೂ ಶ್ರೀನಿವಾಸ ರೆಡ್ಡಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗಿದೆ.ಸಿಬಿಐ ವಿಚಾರಣೆಗಾಗಿ ಆರೋಪಿಗಳನ್ನು ತಮ್ಮ ವಶಕ್ಕೆ ವಹಿಸಬೇಕು ಎಂದು ಮನವಿ ಸಲ್ಲಿಸಿದರೆ ರೆಡ್ಡಿಗಳಿಗೆ ಜಾಮೀನು ಸಿಗುವುದು ಕಷ್ಟ.ಕ್ರಿಮಿನಲ್ ಸಂಚು ಆರೋಪವೊಂದನ್ನು ಬಿಟ್ಟರೆ ಉಳಿದೆಲ್ಲ ಆರೋಪಗಳಿಗೂ ಜಾಮೀನು ಮಂಜೂರು ಮಾಡುವ ಅವಕಾಶವಿರುತ್ತದೆ.ವಿಚಾರಾಧೀನ ಖೈದಿಗಳಿಗೆ ನಿಯಮದ ಪ್ರಕಾರ ಆಹಾರ ನೀಡಲಾಗುತ್ತಿದೆ.ಜನಾರ್ದನ ರೆಡ್ಡಿ ಅವರು ಜೈಲಿನಲ್ಲಿ ವಿಶೇಷ ಸೌಲಭ್ಯಗಳಿಗೆ ಮನವಿ ಸಲ್ಲಿಸಿಲ್ಲ.

6 Sept 2011

ವಜ್ರಖಚಿತ ಕಿರೀಟ ವಾಪಸಗೆ ಆಗ್ರಹ

ತಿರುಮಲ ಸೆ.6: ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ಜನಾರ್ದನ ರೆಡ್ಡಿ ಹಾಗೂ ಸೋದರರು ತಿರುಪತಿ ತಿಮ್ಮಪ್ಪನಿಗೆ ನೀಡಿದ ವಜ್ರಖಚಿತ ಕಿರೀಟವನ್ನು ದೇವರಿಗೆ ತೊಡಿಸಬಾರದು ಎಂದು ಭಕ್ತರು ಆಗ್ರಹಿಸಿದ್ದಾರೆ. ರೆಡ್ಡಿ ಬಂಧನವಾಗಿ ಚಂಚಲಗುಡ ಜೈಲಿಗೆ ಸೇರಿದ ಮೇಲೆ ಈ ರೀತಿ ಆಗ್ರಹಿಸಿದ್ದಾರೆ. ಜನಾರ್ದನ ರೆಡ್ದಿ ಅವರು ನೀಡಿದ 30 ಕೆ.ಜಿ ತೂಗುವ 45 ಕೋಟಿ ರುಪಾಯಿ ಮೌಲ್ಯದ ವಜ್ರ ಖಚಿತ ಕಿರೀಟವನ್ನು ತಿರುಪತಿ ತಿಮ್ಮಪ್ಪನಿಗೆ 2009ರ ಜೂನ್ 11ರಂದು ವಜ್ರ ಖಚಿತ ಕಿರೀಟವನ್ನು ಅರ್ಪಿಸಿದ್ದರು.

5 Sept 2011

ಜನಾರ್ದನ ರೆಡ್ಡಿ ಬಂಧನ: ಪ್ರತಿಭಟನೆ

ಬೆಳಿಗ್ಗೆ ಸಿಬಿಐ ಅಧಿಕಾರಿಗಳಿಂದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ನಿವಾಸದ ಮೇಲೆ ದಾಳಿ ಮಾಡಿ 30 ಕೆ.ಜಿ. ಚಿನ್ನ ಹಾಗೂ 4.50 ಕೋಟಿ ನಗದು ವಶಪಡಿಸಿ ಕೊಂಡಿದ್ದಾರೆ. ಅವರನ್ನು ಬಂಧಿಸಿ ಹೈದರಾಬಾದ ಸಿಬಿಐ ಕಛೇರಿಗೆ ಕರೆದುಕೊಂಡು ಹೋಗಿದ್ದಾರೆ. ಸಂಜೆ 4 ಕ್ಕೆ ಕೋಟ್೯ಗೆ ಹಾಜರುಪಡಿಸುವ ಸಾಧ್ಯತೆ ಇದೆ. ಬಳ್ಳಾರಿಯಲ್ಲಿ ಬಂಧನ ಖಂಡಿಸಿ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ.

4 Sept 2011

ಮೊದಲ ಏಕದಿನ ಪಂದ್ಯ ಮಳೆಯಿಂದ ರದ್ದು

ಕ್ರಿಕೆಟ್:ನಿನ್ನೆ ನಡೆದ ಇಂಗ್ಲೆ೦ಡ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 275 ರನ್ನಗಳ ಗುರಿ ನೀಡಿತ್ತು. ನಂತರ ಬ್ಯಾಂಟಿಂಗ್ ಆರಂಭಿಸಿದ ಇಂಗ್ಲೆ೦ಡ್ 2 ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿದ್ದಾಗ ಮಳೆಯಿಂದ ಪ೦ಧ್ಯ ರದ್ದಾಯಿತು. 5 ರನ್ ಗಳಿಂದ ಪಾಥೀ೯ವ ಪಟೇಲ ಶತಕ ವಂಚಿತರಾದರು. ಅವರು 107 ಬಾಲ್ ಗಳಿಂದ 95 ರನ್ ಗಳಿಸಿ ಔಟಾದರು.ಎರಡನೇ ಎಕದಿನ ಸೆ. 6 ರಂದು ನಡೆಯಲಿದೆ.

ಸ್ವಾಭಿಮಾನಕ್ಕೆ ದಕ್ಕೆ : ಬಿ. ಶ್ರೀರಾಮುಲು ರಾಜೀನಾಮೆ

ಬೆಂಗಳೂರು ಸೆ.04: ತಮ್ಮ ಸ್ವಾಭಿಮಾನಕ್ಕೆ ದಕ್ಕೆಯಾಗಿರುವ ಕಾರಣ ಮಾಜಿ ಸಚಿವ ಬಿ. ಶ್ರೀರಾಮುಲು ಇಂದು ಮಡಿಕೇರಿಗೆ ತೆರಳಿ ಸ್ಪೀಕರ್ ಬೋಪ್ಪಯ್ಯ ಅವರಿಗೆ ಪತ್ರ ನೀಡುವುದಾಗಿ ಘೋಷಿಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ಅವರು ಮಡಿಕೇರಿ ತೆರಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ. ಲೋಕಾಯುಕ್ತರ ಬಗ್ಗೆ ನನಗೆ ಅಪಾರ ಗೌರವವಿದೆ. 20 ವರ್ಷಗಳಿಂದ ರಾಜಕೀಯ ಸೇವೆ ಮಾಡಿಕೊಂಡು ಬಂದಿರುವ ನಾನು ಪ್ರಾಮಾಣಿಕ, ಯಾವುದೇ ಕಳಂಕ ಇಲ್ಲದವನು. ಅಕ್ರಮ ಗಣಿಗಾರಿಕೆಯಲ್ಲಿ ಖಂಡಿತ ಭಾಗಿಯಾಗಿಲ್ಲ. ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳು ನನಗೆ ಸಾಕಷ್ಟು ನೋವನ್ನು ತಂದಿದೆ. ಕಾರಣ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದರು. ನನ್ನ ಜತೆ ಬಳ್ಳಾರಿ ಅನೇಕ ಶಾಸಕರು ನನ್ನೊಂದಿಗೆ ಇದ್ದಾರೆ. ಆದರೆ ನಾನೊಬ್ಬ ಮಾತ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ಹೇಳಿದರು.

31 Aug 2011

ರಾಜೀವ ಹಂತಕರಿಗೆ ಗಲ್ಲು 8 ವಾರ ತಡೆ:

1991 ಮೇ 21 ರಂದು ಹತ್ಯೆಯಾದ ಮಾಜಿ ಪ್ರಧಾನಿ ರಾಜೀವ ಗಾ0ಧಿ ಹಂತಕರ ಗಲ್ಲು ಶಿಕ್ಷೆಗೆ ಮದ್ರಾಸ ಹೈಕೋಟ್೯ 8 ವಾರಗಳ ತಡೆ ನೀಡಿದೆ. ಗಲ್ಲು ಶಿಕ್ಷೆ ನೀಡಲು 11 ವಷ೯ಗಳ ವಿಳಂಬಕ್ಕೆ ವಿವರಣೆ ನೀಡಲು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಕೋಟ್೯ ಆದೇಶಿಸಿದೆ. ಇದರಿಂದ ಹಂತಕರು 8 ವಾರಗಳ ಜೀವದಾನ ಪಡೆದಂತಾಗಿದೆ. 2000ರಲ್ಲಿ ಮೂವರಿಗೆ ಗಲ್ಲು ಶಿಕ್ಷೆ ಕಾಯಂಗೊಳಿಸಿದ್ದ ಸುಪ್ರೀಂ ಕೋಟ್೯, 2011 ಆಗಷ್ಟ ೧೧ರಂದು ರಾಷ್ಟ್ರಪತಿಗಳು ಕ್ಷಮಾದಾನ ನಿರಾಕರಿಸಿದ್ದರು.

30 Aug 2011

ವಿವಾಹಿತ ಮಹಿಳೆ ಕೊಲೆ :


ಬನಹಟ್ಟಿ: ಇಲ್ಲಿನ ಸದಾಸಿವನಗರದ ಪ್ರಶಾಂತ ಭಸ್ಮೆ ಅವರ ಹೆಂಡತಿಯಾದ ಮಯೂರಿ, ಅಕ್ರಮ ಸಂಬಂಧಕ್ಕಾಗಿ ಪೀಡಿಸುತ್ತಿದ್ದ ಮೈದುನ ರಾಘವೇಂದ್ರನಿಂದ ಶನಿವಾರ ಮಧ್ಯಾಹ್ನ ಕೊಲೆಗೀಡಾಗಿದ್ದಾಳೆ. ದೈಹಿಕ ಸಂಪರ್ಕಕ್ಕೆ ಒಪ್ಪದ ಎರಡು ಮಕ್ಕಳ ತಾಯಿಯಾದ ಮಯೂರಿಯನ್ನು ಶನಿವಾರ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಬಲಾತ್ಕಾರಕ್ಕೆ ಯತ್ನಿಸಿದ್ದಾನೆ. ಆಕೆ ಒಪ್ಪದಿದ್ದಾಗ ವಿಕಾರವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಯಡಿಯೂರಪ್ಪಗೆ ಜಾಮೀನು ನಿರಾಕರಣೆ:

ಭೂಹಗರಣದ ಸುಳಿಯಲ್ಲಿ ಸಿಲುಕಿರುವ ಮಾಜಿ ಮು. ಮಂತ್ರಿ ಬಿ. ಎಸ್. ಯಡಿಯೂರಪ್ಪ ಸೋಮವಾರ ನ್ಯಾಯಲಯಕ್ಕೆ ಹಾಜರಾದರು.ಅರ್ಜಿದಾರರು ಪ್ರಭಾವಿ ವ್ಯಕ್ತಿಯಾಗಿರುವ ಕಾರಣ ಸಾಕ್ಷಿ ನಾಶದ ಸಾಧ್ಯತೆ ಇರುವುದರಿಂದ ನ್ಯಾಯಾಧಿಶರು ಜಾಮೀನು ನೀಡಲು ನಿರಾಕರಿಸಿದರು.ಪ್ರಕರಣದ ವಿಚಾರಣೆಯನ್ನು ಸೆ. ೭ಕ್ಕೆ ಮುಂದೂಡಿದರು.

21 Aug 2011

ಅಣ್ಣ ಉಪವಾಸ ಅಂತ್ಯ:

ಕೇ0ದ್ರ ಸರಕಾರ ಮೂರೂ ಬೇಡಿಕೆಗಳನ್ನು ಒಪ್ಪಿದ್ದರಿ೦ದ ಅಣ್ಣಾ ಹಜಾರೆ ರವಿವಾರ ಬೆಳಿಗ್ಗೆ ೧೦:೦೦ ಗಂಟೆಗೆ ಉಪವಾಸ ಅ೦ತ್ಯಗೊಳಿಸಿದ್ದಾರೆ.

ಯಡಿಯೂರಪ್ಪ ಇಂದು ಕಟಕಟೆಗೆ:

ಭೂಹಗರಣದ ಸುಳಿಯಲ್ಲಿ ಸಿಲುಕಿರುವ ಮಾಜಿ ಮು. ಮಂತ್ರಿ ಬಿ. ಎಸ್. ಯಡಿಯೂರಪ್ಪ ಇಂದು ನ್ಯಾಯಲಯಕ್ಕೆ ಹಾಜರಾದರು. ಜೊತೆಗೆ ಪುತ್ರರು ಹಾಗು ಅಳಿಯ ಇದ್ದರು. ನ್ಯಾಯಾಧಿಶರು ಪ್ರಕರಣದ ವಿಚಾರಣೆಯನ್ನು ಸೆ. ೩ರ ಬದಲಾಗಿ ಸೆ. ೭ಕ್ಕೆ ಮುಂದೂಡಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದರು.ನಂತರ ಯಡಿಯೂರಪ್ಪ ನ್ಯಾಯಲಯದಿಂದ ನಿರ್ಗಮಿಸಿದರು.

16 Aug 2011

ತೆeರದಾಳದಲ್ಲಿ ಶ್ರೀ ಪ್ರಭು ದೇವರ ಜಾತ್ರೆ

ಪ್ರತಿ ವರ್ಷದಂತೆ ಈ ವರ್ಷವು ಶ್ರೀ ಅಲ್ಲಮ ಪ್ರಭುಬುದೇವರ ಜಾತ್ರೆಯು ತೆರದಾಳದಲ್ಲಿ ದಿ : ೨೯-೦೮-೨೦೧೧ ರಂದು ಜರುಗಲಿದೆ. ಜಾತ್ರೆಯ ನಿಮಿತ್ಯ ದೇವಸ್ಥಾನದಲ್ಲಿ ಅನ್ನ ಪ್ರಸಾದವಿದ್ದು, ಭಕ್ತರು ಪ್ರಸಾದ ಸ್ವಿeಕರಿಸಿ ದೇವರ ದರ್ಶನ ಪಡೆಯುತ್ತಾರೆ. ಹಾಗು ೩೦-೦೮-೨೦೧೧ರಂದು ಮಧ್ಯಾನ ೦೩:೦೦ ಗಂಟೆಗೆ ಕುಸ್ತಿ ಪಂದ್ಯಾವಳಿ ಜರುಗಲಿದೆ. ಪ್ರಶಸ್ತಿಗಾಗಿ ಪೈಪೋಟಿ ನಡೆಯಲಿದೆ. ಪಂದ್ಯಾವಳಿ ನೋಡಲು ಸಾವಿರಾರು ಕುಸ್ತಿ ಪ್ರೇಮಿಗಳು ಪಾಲ್ಗೊಳ್ಳುತ್ತಾರೆ.
ಪ್ರಭುವಿನ ಜೀವನ ಚರಿತ್ರೆ: ಅಲ್ಲಮನ ಜೀವನ ಚರಿತ್ರೆಯನ್ನು ನಿಖರವಾಗಿ ನಿರೂಪಿಸಲು ಸಾಧ್ಯವಾಗಲಾರದೊಷ್ಟು ಐತಿಹ್ಯಗಳು ಆ ವ್ಯಕ್ತಿತ್ವವನ್ನು ಸುತ್ತುವರಿದಿವೆ. ೧೨ನೆಯ ಶತಮಾನದ ಶಿವಶರಣರಲ್ಲಿ ಅಲ್ಲಮಪ್ರಭು ಉಚ್ಚಸ್ಥಾನದಲ್ಲಿದ್ದಾನೆ. ಈತನು ಅರಸು ಮನೆತನದಲ್ಲಿಯೆ ಹುಟ್ಟಿ ಬೆಳೆದವನಾದರೂ, ಮನೆ ಬಿಟ್ಟು ತೆರಳಿ ಅಧ್ಯಾತ್ಮಸಾಧಕನಾದನೆಂದು ಹೇಳಲಾಗುತ್ತಿದೆ. ಬಸವಣ್ಣನ ಕಲ್ಯಾಣಕ್ಕೆ ಬಂದ ಅಲ್ಲಮಪ್ರಭು ಅಲ್ಲಿ ಅನುಭವಮಂಟಪದ ಶೂನ್ಯಸಿಂಹಾಸನದ ಅಧ್ಯಕ್ಷನಾಗುತ್ತಾನೆ. ಅಲ್ಲಮನ ವಚನಚಂದ್ರಿಕೆಯಲ್ಲಿ ೧೨೯೪ ವಚನಗಳು ಲಭ್ಯವಾಗಿವೆ. ಅಲ್ಲಮಪ್ರಭು ತನ್ನ ಕೊನೆಯ ದಿನಗಳಲ್ಲಿ ಶ್ರೀಶೈಲ‍ಕ್ಕೆ ಹೋಗಿ ಅಲ್ಲಿಯ ವನದಲ್ಲಿ ಶಿವೈಕ್ಯನಾದನೆಂದು ಪ್ರತೀತಿ ಇದೆ. ಬಸವಣ್ಣನವರ ಸಮಕಾಲೀನನಾದ ಅಲ್ಲಮಪ್ರಭುವಿನ ವಚನಗಳ ಅಂಕಿತ 'ಗುಹೇಶ್ವರ' ಅಥವಾ 'ಗೊಹೇಶ್ವರ'.ಈತನ ವಚನಗಳಲ್ಲಿ ಗಹನವಾದ ಆಧ್ಯಾತ್ಮ ಹಾಗೂ ತಾತ್ವಿಕ ವಿಚಾರಗಳಿವೆ.ಅಲ್ಲಮನ ಆಧ್ಯಾತ್ಮಿಕ ಅನುಭವಗಳ ಅಸಾಮಾನ್ಯತೆಯಿಂದ ಅವನ ವಚನಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ.ಅವನದು ಬಹುಮಟ್ಟಿಗೆ ರೂಪಕ ಭಾಷೆ.ಈ ಭಾಷೆ ಅವನ ವೈಶಿಷ್ಟ್ಯವೂ ಹೌದು.

Share

Twitter Delicious Facebook Digg Stumbleupon Favorites More