27.12.11
Daxayani Ayatawad
ಭಾರತದ ರಾಷ್ಟ್ರಗೀತೆಯಾದ 'ಜನಗಣ ಮನ ಅಧಿನಾಯಕ ಜಯಹೇ' ಗೀತೆಯನ್ನು "ಗೀತಾಂಜಲಿ" ಕೃತಿಗೆಗಾಗಿ ಪ್ರಥಮ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯ ಕವಿ ರವಿಂದ್ರನಾಥ್ ಟ್ಯಾಗೋರರವರು ಬಂಗಾಳಿ ಭಾಷೆಯಲ್ಲಿ ರಚಿಸಿದ್ದಾರೆ.ಈ ರಾಷ್ಟ್ರಗೀತೆಯನ್ನು 24 ಜನೆವರಿ 1950 ರಂದು ಭಾರತದ ಸಂವಿಧಾನದಲ್ಲಿ ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಯಿತು ಈ ಗೀತೆಯನ್ನು 27 ಡಿಸೆಂಬರ್ 1911 ರಂದು ಪ್ರಥಮ ಬಾರಿಗೆ ಕಲ್ಕತ್ತಾ ದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು.ಅದ್ದರಿಂದ ಅಂದಿನಿಂದ ಈ ರಾಷ್ಟ್ರ ಗೀತೆಯನ್ನು ಈಗ ಶಾಲೆ,ಕಾಲೇಜು,ಸರಕಾರಿ ಆಫೀಸ್ಗಳಲ್ಲಿ ಹಾಡಲಾಗುತ್ತಿದೆ.ಈ ಗೀತೆ ನಮ್ಮ ದೇಶದ ರಾಷ್ಟ್ರಭಿಮಾನವನ್ನು ಎತ್ತಿತೊರಿಸುವಲ್ಲಿ ಪ್ರೇರಣೆಯಾಗಿದೆ.ಇದರಲ್ಲಿ 5 ಪ್ಯಾರಗಳಿದ್ದು 52 ಸೆಕೆಂಡ್ ಗಳಲ್ಲಿ ಹಾಡಿ ಮುಗಿಸಲೇಬೇಕು.ಈ ಗೀತೆಯಲ್ಲಿ ಇಡೀ ಭಾರತದ ಸಂಸ್ಕೃತಿಯ ಪ್ರತಿಬಿಂಬವನ್ನು ಬಿಂಬಿಸಲಾಗಿದೆ. ಇಂದಿಗೆ ಈ ಗೀತೆಯು 100 ವರ್ಷ ಪೂರೈಸಿ ಶತಮಾನೋತ್ಸವದ ಹೊಸ್ತಿಲಿಗೆ ಕಾಲಿಟ್ಟಿದೆ.ಇನ್ನು ಹೆಚ್ಹು ಹೆಚ್ಚು ನಮ್ಮ ರಾಷ್ಟ್ರದ ಸ್ವಾಭಿಮಾನದ ಕೀರ್ತಿ ಪತಾಕೆ ಎಲ್ಲೆಡೆ ಹಾರಿ ಭಾರತೀಯ ದೆಶಾಭಿಮಾನಿಗಳಲ್ಲಿ ರಾಷ್ಟ್ರೀಯ ಭಾವನೆಯನ್ನು ತುಂಬಲು ರಾಷ್ಟ್ರಗೀತೆಯು ಉತ್ತಮವಾದ ಸಾಧನೆಗಳಲ್ಲೊಂದಾಗಿದೆ. ಹಾಗೆಯೇ ರಾಷ್ಟ್ರಾಭಿಮಾನದ ಸಂಭ್ರಮವನ್ನು ಹೆಚ್ಚಿಸಿ ಭಾರತವು ಶೈಕ್ಷಣಿಕವಾಗಿ,ಆರ್ಥಿಕವಾಗಿ ಸುಧಾರಣೆಯಾಗಿ ಅಭಿವೃದ್ದಿಯತ್ತ ಸಾಗಲಿ ಜೈ ಹಿಂದ ಭಾರತ ಮಾತಾಕಿ ಜೈ ...!! ಭಾರತದ ರಾಷ್ಟ್ರಗೀತೆ
ಜನಗಣಮನ ಅಧಿನಾಯಕ ಜಯಹೇ !!
ಭಾರತ ಭಾಗ್ಯವಿದಾತ!!
ಪಂಜಾಬ ಸಿಂಧು ಗುಜರಾತ ಮರಾಠ !!
ದ್ರಾವಿಡ ಉತ್ಕಲ ವಂಗಾ !!
ವಿಂದ್ಯ ಹಿಮಾಚಲ ಯಮುನಾ ಗಂಗಾ !!
ಉಚ್ಛಲ ಜಲಧಿತ ರಂಗಾ !!
ತವಶುಭ ನಾಮೇ ಜಾಗೇ !!
ತವಶುಭ ಅಶಿಸ ಮಾಗೇ !!
ಗಾಹೇ ತವ ಜಯ ಗಾಥಾ !!
ಜನಗಣ ಮಂಗಳ ದಾಯಕ ಜಯಹೇ !!
ಭಾರತ ಭಾಗ್ಯವಿಧಾತಾ !!
ಜಯ ಹೇ, ಜಯ ಹೇ, ಜಯ ಹೇ !!
ಜಯ ಜಯ ಜಯ ಜಯಹೇ !!