ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

25 Jun 2012

ಕೊಳವೆ ಬಾವಿ ದುರಂತ: ಕೊನೆಗೂ ಅಸುನೀಗಿದ ಪುಟಾಣಿ ಮಾಹಿ..!!


 ಗುರಗಾಂವ್: ಹರಿಯಾಣದ ಮನೆಸರ್ ಪ್ರದೇಶದ ಕೊಳವೆ ಬಾವಿಯೊಂದರ ರಲ್ಲಿ 70 ಅಡಿ ಆಳದಲ್ಲಿ ಸಿಲುಕಿ, ಸಾವು ಬದುಕಿನ ಮದ್ಯ ಹೋರಾಟ ನಡೆಸಿದ್ದ ನಾಲ್ಕು ವರ್ಷದ ಪುಟ್ಟ ಮಗು  ಮಹಿ ಸತತ ನಾಲ್ಕು ದಿನಗಳ ಹರಸಾಹಸದಿಂದ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗೆ ಭಾನುವಾರ ಶವವಾಗಿ ಸಿಕ್ಕಿದ್ದಾಳೆ.ಮಹಿ ತನ್ನ ಮನೆಯ ಹತ್ತಿರದಲ್ಲ್ಲಿಯೇ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಅಲ್ಲಿಯೇ ಇದ್ದ ತೆರೆದ ಕೊಳವೆ ಬಾವಿಯಲ್ಲಿ ಅಕಸ್ಮಾತಾಗಿ ಆಯತಪ್ಪಿ ಬುಧವಾರ 20, ರಂದು ಬಿದ್ದಿದ್ದಳು.ಕೂಡಲೇ ವಿಷಯ ತಿಳಿದ ರಕ್ಷಣಾ ಕಾರ್ಯಕರ್ತರು ಬಂದು ನೆಲ ಅಗೆದು ಬದುಕಿಸಲು ಪ್ರಯತ್ನಪಟ್ಟರು ಯಶಸ್ವಿಯಾಗದೆ ಮಗು ಸತ್ತು ಶವವಾಗಿ ಸಿಕ್ಕಿ ದುರಂತವಾಗಿದೆ.ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.
 ಪ್ರಯತ್ನಪಟ್ಟು ಮಹಿಯನ್ನು ಕೊಳವೆಬಾವಿಯಿಂದ ಹೊರತೆಗೆಯಲಾಯಿತು. ಆದರೆ ಆಕೆ ಬದುಕಿ ಉಳಿದಿರಲಿಲ್ಲ ಎಂದು ಗುರಗಾಂವ್ ಜಿಲ್ಲಾಧಿಕಾರಿ ಪಿ.ಸಿ.ಮೀನಾ ಹೇಳಿದರು.86 ಗಂಟೆಗಳ ಸತತ ಹಗಲಿರುಳು ಎನ್ನದೆ ಕಾರ್ಯಾಚರಣೆ ಮಾಡಿದ ಸಿಬ್ಬಂದಿಗಳ ಕಾರ್ಯ ವ್ಯರ್ತವಾಗಿದೆ.   
ಕಳೆದ ನಾಲ್ಕು ದಿನಗಳಿಂದ ರಕ್ಷಣಾ ಕಾರ್ಯ ಕೈಗೊಂಡಿದ್ದ ತಂಡಕ್ಕೆ ಮಧ್ಯದಲ್ಲಿ ದೊಡ್ಡ ಕಲ್ಲು ಬಂಡೆಯೊಂದು ಎದುರಾಗಿ ಶೀಘ್ರ ರಕ್ಷಣಾ ಕಾರ್ಯಕ್ಕೆ ತೊಡಕು ಉಂಟುಮಾಡಿತ್ತು. ಆದರೆ ಆ ಬಂಡೆ ಕೊರೆಯುವ ಕಾರ್ಯ ಕಳೆದ ರಾತ್ರಿಯಷ್ಟೇ ಮುಗಿಸಿದ ತಂಡ ನಿರೀಕ್ಷಿತ ಗುರಿ ತಲುಪಿದ್ದರು. ಆದರೆ ದುರದೃಷ್ಟವಶಾತ್ ಅಷ್ಟರಲ್ಲಾಗಲೇ ಮಹಿ ಕೊನೆಉಸಿರೆಳೆದಿದ್ದಳು. ಓ ದೇವರೇ ಆ ಪುಟ್ಟ ಮಗುವಿನ ಮೇಲೆ ನಿನಗೆ ಕರುಣೆ ಬರಲಿಲ್ಲವೇ...ಹೆತ್ತ ತಾಯಿಯ ನೋವ ನಿನಗೆ ಕೇಳಿಸಲಿಲ್ಲವೇ..ಮಹಿಯ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸೋಣ ಓ ಮುದ್ದು ಕಂದಾ ಎಲ್ಲೆಗೆ ಹೋದೆ...ಮತ್ತೆ ಹುಟ್ಟಿ ನಿನ್ನ ತಾಯಿಯ ಮಡಿಲು  ಸೇರು.....!!!     

19 Jun 2012

ಪಾಪಿ..!! ತಾನೆ ಹೆತ್ತ 3ವರ್ಷದ ಹಸುಗೂಸಿನ ಮೇಲೆ ಅತ್ಯಾಚಾರವೆಸಗಿದ ನೀಚ ಪ್ರೆಂಚನ ಪಾಸ್ಕಲ್ ಬಂಧನ

ಬೆಂಗಳೂರು, ಜೂ.19:ಪಾಪಿ!! ತಾನೆ ಹೆತ್ತ 3  ವರ್ಷದ  ಹಸುಗೂಸಿನ ಮೇಲೆ ಅತ್ಯಾಚಾರವೆಸಗಿದ ನೀಚ ತಂದೆ ಪ್ರೆಂಚನ ಪಾಸ್ಕಲ್ ನನ್ನು ಹೈಗ್ರೌಂಡ್ ಪೊಲೀಸರು ಮಂಗಳವಾರ ಬೆಳಗ್ಗೆ ಬಂಧಿಸಿದ್ದಾರೆ.ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಅತ್ಯಾಚಾರವೆಸಗಿದ ಆರೋಪ ಫ್ರೆಂಚ್ ರಾಯಭಾರಿ ಕಚೇರಿ ಸಿಬ್ಬಂದಿ ಪಾಸ್ಕಲ್ ಮಜೂರಿಯರ್ ಎದುರಿಸುತ್ತಿದ್ದಾರೆ.ಆರೋಪಿಯನ್ನು ಬಂಧಿಸುವಂತೆ ಬೆಂಗಳೂರಿನ ಜನರಪ್ರತಿಬಟನೆ ಮಾಡಿದ್ದಾರೆ. ವೈದ್ಯಕೀಯ ತಪಾಸಣೆಗಾಗಿ ಪಾಸ್ಕಲ್ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ಪ್ರಮಾಣಪತ್ರ ಪಡೆಯಲಾಗಿದ್ದು .ತನ್ನ ಪುಟ್ಟ ಮಗಳ ಮೇಲೆ ಅತ್ಯಾಚಾರವೆಸಗಿದ್ದು ವೀರ್ಯಾಣ  ಕಲೆಗಳ ಗುರುತಿನಿಂದ ಆರೋಪ ಸಾಬಿತಾಗಿದೆ .ನಂತರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವವದು ಎಂದು ಡಿಸಿಪಿ(ಕೇಂದ್ರ) ರವಿಕಾಂತೇಗೌಡ ಹೇಳಿದ್ದಾರೆ
ಈಗ ವಿಚಾರಣೆಗೆ  ಒಳಪಡಿಸಲಾಗಿದೆ.ಫ್ರೆಂಚ್ ರಾಯಭಾರಿ ಕಚೇರಿಯ ಸಿಬ್ಬಂದಿ ಎನ್ನುವುದಕ್ಕೆ ಯಾವುದೇ ದಾಖಲೆ ಹೊಂದಿರದ ಫಾಸ್ಕಲ್ ಸಾಧಾರಣ ವೀಸಾದಲ್ಲಿದ್ದಾನೆ. ಪೊಲೀಸರ ಕ್ರಮ ಕೈಗೊಳ್ಳಲು ಯಾವುದೇ ಅಭ್ಯಂತರವಿಲ್ಲ ಎಂದು Ministry of External Affairs (MEA)ವಿದೇಶಾಂಗ ಸಚಿವಾಲಯ ಕೂಡಾ ಒಪ್ಪಿಗೆ ಸೂಚಿಸಿತ್ತು.
ಮಗಳು ಎರಡು ವರ್ಷ ಹಸುಗೂಸು ಆಗಿದ್ದಾಗಿಂದಲೇ ಈತ ಇಂತಹ ಹೇಯ ಕೃತ್ಯ ನಡೆಸುತ್ತಿದ್ದನು.ಮಗಳ ಮೇಲೆ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯ ತಪ್ಪಿಸಲು ಪ್ರಯತ್ನಿಸಿ ವಿಫಲಳಾದ ತಾಯಿ ಕೊನೆಗೆ ಹೈಗ್ರೌಂಡ್ ಪೋಲೀಸರ ಮೊರೆ ಹೋಗಿದ್ದಾರೆ.ನಗರದ ಅರಮನೆ ಮೈದಾನದ ಸಮೀಪವಿರುವ ಫ್ರೆಂಚ್ ರಾಯಭಾರ ಕಚೇರಿಯಲ್ಲಿ ಮುಖ್ಯ ಜಂಟಿ ಛಾನ್ಸಿಲರ್ ಅಧಿಕಾರಿಯಾಗಿದ್ದ ಪಾಸ್ಕಲ್ ಪತ್ನಿ ನೀಡಿದ ದೂರಿನ ಅನ್ವಯ ಹೈಗ್ರೌಂಡ್ ಪೊಲೀಸರು ಈತನನ್ನು ತನ್ನ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದರು.
ಆರೋಪಿ ಪಾಸ್ಕಲ್ 2001ರಲ್ಲಿ ಮದುವೆಯಾಗಿದ್ದನು. ಕೇರಳದ ಎರ್ನಾಕುಲಂನಲ್ಲಿ ವಾಸವಾಗಿದ್ದ ವೇಳೆ 2005ರಲ್ಲಿ ದಂಪತಿಗಳಿಗೆ ಗಂಡು ಮಗು ಜನಿಸಿತ್ತು. 2008ರಲ್ಲಿ ಅಲ್ಲಿದ ಬೆಂಗಳೂರಿಗೆ ವರ್ಗಾವಣೆಯಾದ ನಂತರ ಆಗಸ್ಟ್ ನಲ್ಲಿ ಹೆಣ್ಣು ಮಗು ಜನ್ಮತಾಳಿತು. ಅದಾದ ನಂತರ ಮತ್ತೊಂದು ಮಗು ಹುಟ್ಟಿದ್ದು ಮೂರು ಮಕ್ಕಳೊಂದಿಗೆ ವಸಂತನಗರದ ಪೈನ್ ವ್ಯೂ ಅಪಾರ್ಟ್ಮೆಂಟ್ ನಲ್ಲಿ ಕುಟುಂಬ ವಾಸವಾಗಿದ್ದರು.
ಕೆಟ್ಟದಾಗಿ  ವರ್ತಿಸುತ್ತಿದ್ದ ಈತ 2010ರಿಂದ ತನ್ನ ಮಗಳ ಮೇಲೆ ಅತ್ಯಾಚಾರವೆಸಗುತ್ತಿದ್ದ. ಮಗಳ ಮೇಲೆ ಹಲ್ಲೆ, ದೈಹಿಕ ಹಿಂಸೆ ನೀಡುತ್ತಿದ್ದ. ದಿನಗಳು ಕಳೆದಂತೆ ಮಗಳು ಮೂರು ವರ್ಷ 10 ತಿಂಗಳು ತುಂಬಿದ ಮಗಳಿಗೆ ಬುದ್ದಿ ಬಂದು ತಾಯಿಯೊಂದಿಗೆ ತನ್ನ ನೋವು ಹೇಳಿಕೊಳ್ಳುವುದಕ್ಕೆ ಮುಂದಾಗುತ್ತದೆ. 2012ರಲ್ಲಿ ಹಿಂಸೆಗೆ ಒಳಗಾಗಿದ್ದ ಹಸುಗೂಸು ನಿತ್ಯಕರ್ಮಕ್ಕೆ ಹೋಗಬೇಕಾದರೆ ನೋವು ಆಗುತ್ತದೆ ಎಂದು ತಾಯಿ ಬಳಿ ನೋವು ತೋರಿಕೊಂಡಿತ್ತು. ಏನೂ ಅರಿಯದ ಈ ಕಂದಮ್ಮ ತಂದೆ ಮಾಡುತ್ತಿದ್ದ ಕ್ರೌರ್ಯವನ್ನು ತಾಯಿಯ ಬಳಿ ಬಿಚ್ಚಿಟ್ಟಿತು.
ಕಳೆದ ಬುಧವಾರದಂದು (ಜೂನ್ 13) ವೈದ್ಯಕೀಯ ತಪಾಸಣೆಯ ವರದಿ ಪಡೆಯುವುದಕ್ಕಾಗಿ ಪತ್ನಿ ಮನೆಕೆಲಸದಾಕೆಯನ್ನು ಮಗಳ ಬಳಿ ಬಿಟ್ಟು ಹೋಗಿದ್ದಾಗ ಮನೆಗೆ ಬಂದ ಪಾಸ್ಕಲ್ ಮಗಳನ್ನು ರೂಮಿಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿಕೊಂಡಿದ್ದನು.ಆಗ  ಅದೇ ತಪ್ಪು ಮಾಡಿ  ಪಾಸ್ಕಲ್ ಕಚೇರಿಗೆ ತೆರಳಿದ್ದಾನೆ. ಮನೆಗೆ ಬಂದ ಹೆಂಡತಿಗೆ  ವಿಷಯ  ತಿಳಿದು ಇದರಿಂದ ಮನ ನೊಂದ ತಾಯಿ ಮಗಳನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಆ ವೇಳೆ ವೈದ್ಯರು ಕಂದಮ್ಮನ ಮೇಲೆ ಅತ್ಯಾಚಾರ ನಡೆದಿರುವುದನ್ನು ದೃಢಪಡಿಸಿದ್ದಾರೆ.ಮಿತಿಮೀರಿದ ಪಾಪಿ ನೀಚ ತಂದೆ ಕಾಮದಾಟಕ್ಕೆ ಬಲಿಯಾಗಿ ಮಗು ಈಗ  ನೋವನ್ನು ಅನುಭವಿಸುತ್ತಿದೆ.ಹೆತ್ತವರೇ ರಕ್ಷಕರಾಗದೆ   ಭಕ್ಷಕರಾದರೆ ಹೆಣ್ಣಿನ ಪಾಡು ಕೇಳುವವರು ಯಾರು?ಹೆಣ್ಣಿಗೆ ಈ ಹಾಳು ಕೆಟ್ಟ  ಲೋಕದಲ್ಲಿ ರಕ್ಷಣೆಯೇ ಇಲ್ಲವೇ?ಹೆಣ್ಣೇ ಏನು ನಿನ್ನ ಪಾಡು?      

4 Jun 2012

ಲಾಗೊಸ್ ನಲ್ಲಿ ವಿಮಾನ ದುರಂತ ಪ್ರಯಾಣಿಕರ ಸಜೀವ ದಹನ..!!


ಲಾಗೋಸ್: ನೈಜೀರಿಯಾದ ರಾಜಧಾನಿ ಲಾಗೋಸ್ ನಗರದಿಂದ ಅಬುಜಾಗೆ ಹೊರಟಿದ್ದ ಪ್ರಯಾಣಿಕರ ವಿಮಾನವು ಭಾನುವಾರ ಮದ್ಯಾಹ್ನ 2 ಅಂತಸ್ತಿನ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದು, ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ 153 ಪ್ರಯಾಣಿಕರು,ಕಟ್ಟಡದಲ್ಲಿರುವ ಜನರು  ಸಾವನ್ನಪ್ಪಿರಬಹುದು    ಎಂದು ಶಂಕಿಸಲಾಗಿದೆ.
`ಡಾನಾ` ಸಂಸ್ಥೆಗೆ ಸೇರಿದ ವಿಮಾನವು ಲಾಗೋಸ್ ನಗರದ ಜನವಸತಿ ಪ್ರದೇಶದ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದು ಸ್ಫೋಟಗೊಂಡಿತು. ಇದರಿಂದ ತಕ್ಷಣ ಬೆಂಕಿ ಹೊತ್ತಿಕೊಂಡು ದಟ್ಟವಾದ ಹೊಗೆ ಆವರಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ಆಗ ಅಲ್ಲಿ ಜನಸಂದಣಿ ದಟ್ಟವಾಗಿತ್ತು ಎಂದು ತಿಳಿದುಬಂದಿದೆ.   
ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ನೈಜೀರಿಯಾದ ನಾಗರಿಕ ವಿಮಾನಯಾನ ಇಲಾಖೆ ಹೇಳಿದೆ. ಇದರ ಹೊರತಾಗಿ ವಿಮಾನ ಡಿಕ್ಕಿ ಹೊಡೆದ ಕಟ್ಟಡದಲ್ಲಿದ್ದ ಜನರೂ ಘಟನೆಯಲ್ಲಿ ಮೃತಪಟ್ಟಿರುವ ಶಂಕೆ ಇದೆ.ದುರಂತದಲ್ಲಿ ವಿಮಾನದಲ್ಲಿಯಾ ಪ್ರಯಾಣಿಕರ ದೇಹಗಳು ಸುಟ್ಟು ಕರಕಲಾಗಿದ್ದು ಗುರುತು ಪತ್ತೆಯಾಗುತ್ತಿಲ್ಲ ಆದ್ದರಿಂದ ಶವಗಳನ್ನು ಗುರುತಿಸಲು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಹೀಗಾಗಿ ಮೃತರ ಸಂಖ್ಯೆ 153ನ್ನು ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದುವರೆಗೂ ಘಟನೆಯಲ್ಲಿ ಮೃತಪಟ್ಟವರ ನಿಖರವಾದ ಸಂಖ್ಯೆ ಲಭ್ಯವಾಗಿಲ್ಲ. ಬದುಕುಳಿದ ಪ್ರಯಾಣಿಕರಿಗಾಗಿ ಶೋಧ ಕಾರ್ಯ ನಡೆದಿದೆ. ಘಟನೆ ನಡೆದ ತಕ್ಷಣ ಅಗ್ನಿಶಾಮಕ ಮತ್ತು ತುರ್ತುಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ನೈಜೀರಿಯಾ ನಾಗರಿಕ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.
ಲಾಗೋಸ್‌ನಿಂದ ವಿಮಾನ ಹೊರಟಿದ್ದ ವೇಳೆ ಆಗಸ ಸ್ವಚ್ಛಂದವಾಗಿತ್ತು. ಹೀಗಾಗಿ ಅಪಘಾತಕ್ಕೆ ಹವಾಮಾನ ವೈಪರೀತ್ಯ ಕಾರಣವಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.
ಆದರೆ ವಿಮಾನ ಹಠಾತ್ತನೆ ಪತನಕ್ಕೀಡಾದುದಕ್ಕೆ ತಾಂತ್ರಿಕ ದೋಷ ಕಾರಣವಿರಬಹುದೇ ಎಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ನೂರಾರು ಜನ ತಂಡೋಪ ತಂಡವಾಗಿ ತಂಡವಾಗಿ ಜನರು ಬರುತ್ತಿದ್ದು ಯಮರಾಯನ ಅಟ್ಟಹಾಸಕ್ಕೆ ಮರುಕಪಡುತ್ತಿದ್ದಾರೆ.ಇದು ನಿಜಕ್ಕೂ ಹೃದಯವಿದ್ರಾವಕ ಘಟನೆಯಾಗಿದೆ.ಘಟನೆ ನಡೆದಾಗ ಅಲ್ಲಿಯೇ ಇದ್ದ ಪ್ರತ್ಯಕ್ಹ್ಸದರ್ಸಿ ಗಿಫ್ಟ್ ಒನಿಬೋ :ನಾನು ಅಲ್ಲಿ ವಿಮಾನ ಹಾರಡುತ್ತಿದುದನ್ನ ನೋಡುತ್ತಿದ್ದೆ ಆಗೆ ಒಮ್ಮಿಂದೊಮ್ಮೆಲೆ ವಿಮಾನ ಕೆಳಗೆ ಬಂದು ಕಟ್ಟಡಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿತ್ತು"ಎಂದಿದ್ದಾರೆ.ಲಾಗೊಸ್   ನಗರದಲ್ಲಿ  ಸುಮಾರು 15 ಮಿಲಿಯನ್  ಜನಸಂಖ್ಯೆ ವಾಸಿಸುತ್ತಿದ್ದಾರೆ. 

Share

Twitter Delicious Facebook Digg Stumbleupon Favorites More