ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

7 Nov 2012

ಎರಡನೇ ಬಾರಿ ಅಮೆರಿಕಾ ದ ಅದ್ಯಕ್ಷ್ಯರಾಗಿ ಬರಾಕ್ ಒಬಾಮ ಆಯ್ಕೆ ...!!!


ವಾಷಿಂಗ್ಟನ್, ನ.7: ಅಮೆರಿಕ ಅಧ್ಯಕ್ಷರಾಗಿ ಬರಾಕ್ ಒಬಾಮಾ ಪುನರಾಯ್ಕೆಗೊಂಡಿದ್ದಾರೆ. ತೀವ್ರ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಡೆಮ್ರಾಕೆಟಿಕ್ ಅಭ್ಯರ್ಥಿ ಒಬಾಮಾ ಅವರು ಸಮೀಪದ ಪ್ರತಿಸ್ಪರ್ಧಿ ರಿಪಬ್ಲಿಕ್ ಅಭ್ಯರ್ಥಿ ಮಿಟ್ ರೋಮ್ನಿ ಅವರನ್ನು ಸೋಲಿಸಿದ್ದಾರೆ.
ಬರಾಕ್ ಒಬಾಮಾ ಅವರಿಗೆ 275 ಮತಗಳು ಸಿಕ್ಕಿದ್ದರೆ, ರೋಮ್ನಿ ಅವರಿಗೆ 203 ಮತಗಳು ಸಿಕ್ಕಿದೆ.
2ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಒಬಾಮಾ ಅತೀವ ಹರ್ಷ ವ್ಯಕ್ತಪಡಿಸಿದ್ದು, 'ಇನ್ನು ನಾಲ್ಕು ವರ್ಷ ನಿಮ್ಮ ಸೇವೆಗೆ, ನಿಮ್ಮಿಂದ ಎಲ್ಲಾ ಸಾಧ್ಯವಾಯಿತು' "We're all in this together. That's how we campaigned, and that's who we are. Thank you. -ಬರಾಕ್ ಒಬಾಮಾ ." ಎಂದು ಟ್ವೀಟ್ ಮಾಡಿದ್ದಾರೆ.
270 ಮತಗಳ ಮ್ಯಾಜಿಕ್ ನಂಬರ್ ದಾಟಿದ ಒಬಾಮಾ ಮುಂದಿದ್ದರೂ ಸುಮಾರು 6 ರಾಜ್ಯಗಳಲ್ಲಿ ರೊಮ್ನೊ ತೀವ್ರ ಪೈಪೋಟಿ ನೀಡುತ್ತಿದ್ದು ಅಚ್ಚರಿ ಫಲಿತಾಂಶ ನೀಡುವ ವಿಶ್ವಾಸದಲ್ಲಿದ್ದಾರೆ.ಅಮೇರಿಕಾ ಕಪ್ಪು ಜನಾಂಗದ ಜನರ ಅಭಿಮಾನ  ಸಂತೋಷ್ ಮುಗಿಲು ಮುಟ್ಟಿದೆ. ಭಾರತದ ಪ್ರಧಾನ ಮಂತ್ರಿಗಳಾದ ಮನಮೋಹನ ಸಿಂಗ್ ಕೂಡ ಶುಭಾಶಯಗಳನ್ನು ಕೋರಿದ್ದಾರೆ.   
ಬರಾಕ್ ಒಬಾಮಾ ಅಮೆರಿಕದ ಅದ್ಭುತ ಆಡಳಿತಗಾರ, ಆತನನ್ನು ಕಳೆದುಕೊಂಡರೆ ನಮಗೆ ಆಪತ್ತು. ಮುಂಬರುವ ಚುನಾವಣೆಯಲ್ಲಿ ಅವರೇ ನಮ್ಮ ಅಭ್ಯರ್ಥಿ ಎಂದು ಡೆಮೊಕ್ರೆಟಿಕ್ ಪಕ್ಷ ಮುಖಂಡ, ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಘೋಷಿಸಿದ್ದು ಡೆಮ್ರಾಕೆಟಿಕ್ ಪಕ್ಷಕ್ಕೆ ಲಾಭ ತಂದಿದೆ.
ಚೀನಾದ ಕರೆನ್ಸಿ ಪಾಲಿಸಿ, ಆಟೋಮೊಬೈಲ್ ಕ್ಷೇತ್ರದ ಬೇಲ್ ಔಟ್, ಸ್ಥಳೀಯರಿಗೆ ಉದ್ಯೋಗ, ಹೊರಗುತ್ತಿಗೆ ಹೊರೆ, ಯುಎಸ್ ವಿದೇಶಾಂಗ ನೀತಿ, ವಲಸೆ ನೀತಿ ಈ ಬಾರಿ ಚುನಾವಣಾ ಪ್ರಚಾರದ ಪ್ರಮುಖ ಚರ್ಚಿತ ವಿಷಯಗಳಾಗಿತ್ತು.
ವಾಷಿಂಗ್ಟನ್ ಪೋಸ್ಟ್/ ಎಬಿಸಿ ನ್ಯೂಸ್ ಸಮೀಕ್ಷೆಯಲ್ಲಿ ಒಬಾಮಾ ಹಾಗೂ ರೊಮ್ನಿ ಇಬ್ಬರಿಗೂ ತಲಾ ಶೇ 48 ರಷ್ಟು ಬೆಂಬಲ ವ್ಯಕ್ತವಾಗಿತ್ತು. 538 ಸ್ಥಾನಗಳ ಪೈಕಿ 270 ಮ್ಯಾಜಿಕ್ ನಂಬರ್ ದಾಟಿದ ಬರಾಕ್ ಒಬಾಮಾ ಮತ್ತೊಮ್ಮೆ ಶ್ವೇತಭವನ ಪ್ರವೇಶಿಸಲು ಸಜ್ಜಾಗಿದ್ದಾರೆ.ಅವರಿಗೆ ಶುಭವಾಗಲಿ 

10 Oct 2012

ಕನ್ನಡದ ಕಿರುತೆರೆಯ ನಟಿ ಹೆಮಶ್ರೀ ನಿಗೂಢ ಸಾವು ......!!!!!!

ಬೆಂಗಳೂರು: ಚಲನಚಿತ್ರ ಮತ್ತು ಕಿರು ತೆರೆ ನಟಿ ಹೇಮಶ್ರೀ ಅವರುನಿನ್ನೆ  ಮಂಗಳವಾರ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ನಗರದ ಚೆನ್ನಮ್ಮನ ಅಚ್ಚು ಕಟ್ಟು ಕೆರೆ ನಿವಾಸಿಯಾದ ಅವರು, ಬೆಳಿಗ್ಗೆ ಪತಿ ಸುಧೀಂದ್ರ ಬಾಬು ಅವರ ಜತೆ ಅನಂತಪುರದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು.

ಅವರ ಪತಿ  ಮಾರ್ಗ ಮಧ್ಯೆ ಅಸ್ವಸ್ಥ ಗೊಂಡ ಕಾರಣ, ಬೆಂಗಳೂರಿಗೆ ಕರೆತಂದು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಿದರು.
ಆದರೆ, 8 ಗಂಟೆಗೆ  ಮುಂಚೆಯೇ ಹೇಮಶ್ರೀ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು` ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಕಾರ್ಯಕ್ರಮವೊಂದರ ನಿರೂಪಕಿಯಾಗಿದ್ದ ಹೇಮಶ್ರೀ ಅವರು, ಸಿರಿವಂತ, ಮರ್ಮ, ವೀರಪರಂಪರೆ, ಉಗ್ರಗಾಮಿ ಸೇರಿದಂತೆ ಹಲವು ಕನ್ನಡ ಚಲನಚಿತ್ರಗಳಲ್ಲೂ ನಟಿಸಿದ್ದರು. 2008ರ ವಿಧಾನಸಭೆ ಚುನಾವಣೆಗೆ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಭ್ಯರ್ಥಿಯಾಗಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಅವರು, ಜೆಡಿಎಸ್ ಮುಖಂಡರೂ ಆಗಿದ್ದ ಸುಧೀಂದ್ರ ಬಾಬು ಅವರನ್ನು 2011ರ ಜೂನ್ 22ರಂದು ವಿವಾಹವಾಗಿದ್ದರು.

`ಪತಿ ಈಗಾಗಲೇ ಮದುವೆಯಾಗಿದ್ದು, ನನ್ನನ್ನು ವಂಚಿಸಿದ್ದಾರೆ`ಅವರಿಗೆ ಆಗಲೇ 48 ವರ್ಷ ವಯಸ್ಸಾಗಿತ್ತು ಎಂದು ಮದುವೆಯಾದ ಮರುದಿನವೇ ಹೇಮಶ್ರೀ ಪೊಲೀಸರಿಗೆ ದೂರು ನೀಡಿದ್ದರು.ಅಲ್ಲದೆ ಸಂದರ್ಶನವೊಂದರಲ್ಲಿ "ಹೆತ್ತವರಿಗೆ ದುಡ್ಡಿನ ಆಸೆ ತೋರಿಸಿ ನನಗೆ ಇಷ್ಟವಿಲ್ಲದ ಒತ್ತಾಯದ ಮದುವೆ ಮಾಡಿದ್ದಾರೆ ನಾನು ವಿಚ್ಛೇದನ ತೆಗೆದುಕೊಳ್ಳುತೇನೆ" ಎಂದು ಬೇಸರಗೊಂಡು ಕಣ್ಣಿರು ಇಟ್ಟಿದ್ದರು. ಇದರಿಂದ ಅವರಿಬ್ಬರಲ್ಲಿ ಅನ್ಯೋನ್ಯತೆ ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ.ಆದರೆ  ನಂತರ ದೂರನ್ನು ಹಿಂಪಡೆದು ಪತಿಯೊಂದಿಗೆ ನಗರದಲ್ಲಿ ವಾಸವಾಗಿದ್ದರು.

 `ಘಟನೆ ಸಂಬಂಧ ಅವರ ಪತಿ ಸುರೇಂದ್ರ  ಬಾಬು ಅವರ ವಿಚಾರಣೆ ನಡೆಸಲಾಗುತ್ತಿದೆ. ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾಸ್ತವಾಂಶ ತಿಳಿಯಲಿದೆ` ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು ಇಂದು ಮದ್ಯಾಹ್ನ ಪರೀಕ್ಷೆಯ ವರದಿ ಬಂದಿದ್ದು ನಟಿ ಹೇಮಶ್ರೀ ತಲೆ ,ಮೈಮೇಲೆ ಮತ್ತು ಮುಖದ ಮೇಲೆ ಗಾಯದ ಗುರುತು ಕಂಡು ಬಂದಿದ್ದು,ಹೊಟ್ಟೆಯಲ್ಲಿ ಕಪ್ಪು ಬಣ್ಣದ ದ್ರಾವಣ ಕಂಡು ಬಂದಿದ್ದು  ವಿಷಪ್ರಾಶನ ವಾಗಿರಬಹುದು ಎಂದು ಶಂಕಿಸಲಾಗಿದೆ ವಿಜ್ಞಾನ ಪ್ರಯೋಗಲಕ್ಕೆ ಕಳುಹಿಸಲಾಗಿದೆ.

ಇದು ಅನುಮಾನಸ್ಪದ ಸಾವು ಎಂದು ವೈದ್ಯರು ದ್ರುಡಿಕರಿಸಿದ್ದಾರೆ ಅವರ ಪತಿ 8 ಗಂಟೆಗಳ ಕಾಲ ಕಾರಿನಲ್ಲಿಯೇ ಇಟ್ಟುಕೊಂಡು ಬೆಂಗಳೂರಿನಲ್ಲಿ ಸುತ್ತಾಡಿದ್ದಾರೆ. ವರದಿಯಿಂದ ಸಾವಿನ ಹಿಂದಿನ ರಹಸ್ಯ ಬಹಿರಂಗವಾಗುವದು.ಶವವನ್ನು ಹೆತ್ತವರಿಗೆ ಒಪ್ಪಿಸಲಾಗಿದೆ.ಈಗಾಗಲೇ ಹಲವು ಪ್ರಕರಣಗಳಲ್ಲಿ ಸಿಲುಕೊಂಡಿರುವ  ಪತಿ ಸುರೇಂದ್ರ  ಬಾಬು ಅವರನ್ನು  ಈಗ ಪೊಲೀಸರು  ವಶಕ್ಕೆ ತೆಗೆದುಕೊಂಡಿದ್ದಾರೆ.
 ಇಂತಹ ಒಬ್ಬ ಒಳ್ಳೆಯ ನಟಿಯನ್ನು ಕನ್ನಡ ಚಿತ್ರ ರಂಗ ಕಳೆದುಕೊಂಡಿದ್ದು ನೋವಿನ ಸಂಗತಿ ಒಟ್ಟಿನಲ್ಲಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ....!!!!    ಕನ್ನಡದ ಕಿರುತೆರೆಯ ನಟಿ ಹೆಮಶ್ರೀ ನಿಗೂಢ ಸಾವು 

28 Sept 2012

ಕರ್ನಾಟಕಕ್ಕೆ ನೀರು ಕುಡಿಸಿ ತ.ನಾಡಿಗೆ ಕಾವೇರಿ ಹರಿಸಲು ಸುಪ್ರಿಂಕೋರ್ಟ್ ಆದೇಶ....!!!!!

ಬೆಂಗಳೂರು,ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮತ್ತೊಮ್ಮೆ ಕರ್ನಾಟಕಕ್ಕೆ ಪೆಟ್ಟುಬಿದ್ದಿದೆ.ಕರ್ನಾಟಕದಲ್ಲಿ  ತೀವ್ರ ಬರಗಾಲದ ಪರಿಸ್ಟಿತಿ ಎದುರಾಗಿದ್ದರೂ  ಮೊದಲು ತಮಿಳುನಾಡಿಗೆ ದಿನಾ ಇಂತಿಷ್ಟು ಅಂತ ಕಾವೇರಿ ನೀರು ಬಿಡಬೇಕು ಎಂದು  ಸುಪ್ರೀಂಕೋರ್ಟ್ಆದೇಶಿಸಿದೆ.
ಕಾವೇರಿ ನದಿ ಪ್ರಾಧಿಕಾರವು ಇತ್ತೀಚೆಗೆ ಸೂಚಿಸಿರುವಂತೆ ನೀರು ಬಿಡಿ ಎಂದು ಶುಕ್ರವಾರ ಕೋರ್ಟ್ ಸ್ಪಷ್ಟ ಆದೇಶ ನೀಡಿದೆ. ಇದರಿಂದ ದಿನಾ 9 ಸಾವಿರ ಕ್ಯುಸೆಕ್ಸ್ ನೀರನ್ನು ಅಕ್ಟೋಬರ್ 21ರವರೆಗೂ ತಮಿಳುನಾಡಿನತ್ತ ಹರಿಸಬೇಕಾದ ಅನಿವಾರ್ಯತೆಗೆ ಕರ್ನಾಟಕ ಸಿಲುಕಿದೆ. 
ಕರ್ನಾಟಕಕ್ಕೆ ನೀರು ಕುಡಿಸಿದ ಸು.ಕೋರ್ಟ್: ಕಾವೇರಿ ನದಿ ಪ್ರಾಧಿಕಾರದ ಆದೇಶವನ್ನು ಪರಿಪಾಲಿಸದ ಕರ್ನಾಟಕವನ್ನು ಸು.ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಈ ಬಗ್ಗೆ ವಕೀಲರು ಈ ಹಿಂದೆಯೇ ರಾಜ್ಯವನ್ನು ಎಚ್ಚರಿಸಿದ್ದರು. 
ಸೆ. 19ರಂದು ದೆಹಲಿಯಲ್ಲಿ ಪ್ರಧಾನಿ ನೇತೃತ್ವದಲ್ಲಿ ನಡೆದ ಕಾವೇರಿ ಪ್ರಾಧಿಕಾರ ಸಭೆಯ ಆದೇಶದಂತೆ ಕರ್ನಾಟಕ ದಿನಾ ನಮಗೆ 9 ಸಾವಿರ ಕ್ಯುಸೆಕ್ಸ್ ನೀರು ಬಿಡಬೇಕು. ಆದರೆ ಅದು ಪ್ರಾಧಿಕಾರದ ಆದೇಶವನ್ನು ಪಾಲಿಸುತ್ತಿಲ್ಲ. ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಿ ಎಂದು ತಮಿಳುನಾಡು ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ತಮಿಳುನಾಡಿಗೆ ಕಾವೇರಿ ನೀರು ಹರಿಸಲು  ಸುಪ್ರಿಂಕೋರ್ಟ್ ಆದೇಶ ನೀಡಿದೆ.ಕರ್ನಾಟಕ ಅನಿವಾರ್ಯವಾಗಿ ಕಾವೇರಿ ನೀರು ಬಿಡಲೇಬೆಕಾಗಿದೆ. ಸಕಾಲಕ್ಕೆ ಮಳೆ ಬೆಳೆ ಬಾರದೆ ಬೆಲೆ ಏರಿಕೆಯಿಂದಾಗಿ ತತ್ತರಿಸಿರುವ ರೋಸಿ ಹೋಗಿರುವ ಕರ್ನಾಟಕದ ಜನತೆಗೆ ನುಂಗಲಾರದ ತುತ್ತಾಗಿದೆ.ಒಟ್ಟಿನಲ್ಲಿ ಸುಪ್ರಿಂಕೋರ್ಟ್ ಕರ್ನಾಟಕಕ್ಕೆ ನೀರು ಕುಡಿಸಿದೆ...!!!!  

11 Sept 2012

ಭಾರತದ ಕ್ಷೀರ ಕ್ರಾಂತಿಯ ಹರಿಕಾರ ವರ್ಗೀಸ್ ಕುರಿಯನ್ ವಿಧಿವಶ....!!!!


 ಭಾರತದ ಕ್ಷೀರ ಕ್ರಾಂತಿಯ ಹರಿಕಾರ,ಪಿತಾಮಹ  ‘ಹಾಲಿನ ಮನುಷ್ಯ’ ಎಂದು ಖ್ಯಾತಿ ಪಡೆದಿದ್ದ ಡಾ.ವರ್ಗೀಸ್ ಕುರಿಯನ್ ರವಿವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದ ಗುಜರಾತನ ಪಟೇಲ್ ಯುರೋಲಾಜಿಕಲ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ರ ವಾರ ಕೊನೆಯುಸಿರೆಳೆದರು ಎಂದು ವೈದ್ಯರು ತಿಳಿಸಿದ್ದಾರೆ.
1921ರ ನವೆಂಬರ್ 26ರಂದು ಕೇರಳದ ಕೋಝಿಕ್ಕೋಡ್‌ನಲ್ಲಿ ಜನಿಸಿದ ಅವರು, ಗುಜರಾತ್ ಸಹಕಾರಿ ಹಾಲು ಒಕ್ಕೂಟ(ಜಿಸಿಎಂಎಂಎಫ್) ಹುಟ್ಟು ಹಾಕಿದರಲ್ಲದೆ, ಅದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.ಹೈನುಗಾರಿಕೆ ಮಾಡುವ ರೈತರಿಗೆ ಆಶಾದಾಯಕರಾದ ಕುರಿಯನ್  
 ಜೀವಮಾನದಲ್ಲೆಂದೂ ಒಂದು ತೊಟ್ಟು ಹಾಲನ್ನು ಕುಡಿಯದ ಡಾ. ವರ್ಗಿಸ್ ಕುರಿಯನ್ ಎಂಬ ಶ್ವೇತಕ್ರಾಂತಿಯ ಹರಿಕಾರನೇ ಈ ಅಮೂಲ್ ಬೇಬಿಯ ಅಪ್ಪ-ಅಮ್ಮ.  ಡಾ. ಕುರಿಯನ್ ಅವರ ಅಮೂಲ್ ಹಾಲು ಇಂದು ಭಾರತದಾದ್ಯಂತ ಅತೀ ಹೆಚ್ಚು ಬಳಕೆಯಾಗುತ್ತಿದೆ. 
ಜಸಿಎಂಎಂಎಫ್ ದೇಶದ ಅತೀ ದೊಡ್ಡ ಹಾಲು ಉತ್ಪಾದನೆ ಹಾಗೂ ಶೇಖರಣಾ ಘಟಕವೆಂಬ ಖ್ಯಾತಿ ಪಡೆದಿದೆ. ‘ಆಮುಲ್’ ಬ್ರಾಂಡ್‌ನಲ್ಲಿ ಇದರ ಉತ್ಪನ್ನಗಳು ಇಂದು ದೇಶಾದ್ಯಂತ ಖ್ಯಾತಿ ಪಡೆದಿವೆ.
ವಿಶ್ವ ಆಹಾರ ಪ್ರಶಸ್ತಿ, ಮ್ಯಾಗ್ಸೇಸೆ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದ ಇವರಿಗೆ ಪದ್ಮಶ್ರೀ (1965), ಪದ್ಮಭೂಷಣ (1966), ಪದ್ಮವಿಭೂಷಣ (1999) ಸೇರಿದಂತೆ ಹಲವು ಪ್ರಶಸ್ತಿಗಳು ಒಲಿದು ಬಂದಿವೆ ಕುರಿಯನ್ ಅವರ ಚರಿತ್ರೆಯ ಪುಟಗಳನ್ನು ಓದುತ್ತಾ ಹೋದರೆ ಗ್ರಾಮಾಂತರ ಭಾರತ ಹೈನೋದ್ಯಮದ ಮೂಲಕ ಹೇಗೆಲ್ಲ ಪ್ರಗತಿಯನ್ನು ಕಂಡಿತು ಎಂಬುದನ್ನು ತಿಳಿಯಬಹುದು.ಇಂತಹ ಮಹಾನ ಪ್ರಸಿದ್ದ ವ್ಯಕ್ತಿಯನ್ನು ಭಾರತ ಇಂದು ಕಳೆದುಕೊಂಡಿದೆ.  ಅವರ ಆತ್ಮಕ್ಕೆ   ಚಿರಶಾಂತಿ  ಸಿಗಲಿ.....!!!!!!!!   

3 Aug 2012

ಲಂಡನ್ ಒಲಿಂಪಿಕ್: ಚಿನ್ನದ ಪದಕ ಮಿಸ್ ಮಾಡಿಕೊಂಡ ಸೈನಾ ನೆಹ್ವಾಲ್ ....!!


ಲಂಡನ್ ಒಲಿಂಪಿಕ್: ಚಿನ್ನದ ಪದಕ ಮಿಸ್ ಮಾಡಿಕೊಂಡ ಸೈನಾ ನೆಹ್ವಾಲ್  ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ಚಿನ್ನದ ಪದಕ ನಿರೀಕ್ಷೆಯಲ್ಲಿದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಸೆಮಿಫೈನಲ್‌ನಲ್ಲಿ ಸೋಲುವ ಮೂಲಕ ಹಿನ್ನಡೆ ಅನುಭವಿಸಿದ್ದಾರೆ. ಭಾರತದ ದೃವತಾರೆ ಭಾರಿ ನಿರಾಸೆ ಮೂಡಿಸಿದ್ದಾರೆ 

ಶುಕ್ರವಾರ ಇಂದು  ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವ ನಂ. 1 ಆಟಗಾರ್ತಿ ಚೀನಾದ ಯಿಹಾನ್ ವಾಂಗ್ ವಿರುದ್ಧ 21-13, 21-13ರ ನೇರ ಅಂತರದಲ್ಲಿ ಶರಣಾಗಿರುವ ಸೈನಾ, ಚಿನ್ನದ ಕನಸು ಭಗ್ನಗೊಂಡಿತು. ಇಂದಿನ ಪಂದ್ಯದಲ್ಲಿ ಸೋತರೂ

 ಸೈನಾ ಪದಕ ನಿರೀಕ್ಷೆ ಇನ್ನೂ ಅಂತ್ಯಗೊಂಡಿಲ್ಲ. ಇದೀಗ ನಾಳೆ  ಶನಿವಾರ ನಡೆಯಲಿರುವ ಕಂಚಿಗಾಗಿನ ಹೋರಾಟದಲ್ಲಿ ಎರಡನೇ ಸೆಮಿಫೈನಲ್ ಪಂದ್ಯದ ಸೋತ ಆಟಗಾರ್ತಿಯೊಂದಿಗೆ ಕಂಚಿನ ಪದಕಕ್ಕಾಗಿ ಸವಾಲು ಎದುರಿಸಲಿದ್ದಾರೆ. 

ಕಳೆದ ದಿನವಷ್ಟೇ ಸೆಮಿಫೈನಲ್ ಪ್ರವೇಶ ಮಾಡಿದ್ದ ವಿಶ್ವ ನಂ. 5 ರ‌್ಯಾಂಕ್‌ನ ಸೈನಾ, ಈ ಸಾಧನೆ ಮಾಡಿದ ದೇಶದ ಮೊದಲ ಬ್ಯಾಡ್ಮಿಂಟನ್ ಪಟು ಎಂಬ ಗೌರವಕ್ಕೆ ಪಾತ್ರವಾಗಿದ್ದರು. ಆದರೆ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ್ತಿಯ ವಿರುದ್ಧವೂ ಅದೇ ಫಾರ್ಮ್ ಮುಂದುವರಿಸುವಲ್ಲಿ ವಿಫಲವಾಗಿದ್ದಾರೆ.ಆದರೆ ಇನ್ನು ಗೆಲ್ಲುವ ತವಕದಲ್ಲಿ ಸೈನಾ  ಇದ್ದಾರೆ.ಭಾರತೀಯರು ಗೆಲ್ಲಬಹುದು ಎಂದು ನಿರೀಕ್ಷೆಯಲ್ಲಿದ್ದಾರೆ.ಕನಸು ನನಸಾಗಲಿ...!!!   

2012 ವಿಶ್ವದ ಟಾಪ್ 10 ಪ್ರಭಾವಿ ಮಹಿಳೆ ಉದ್ಯಮಿಗಳು ಅದರಲ್ಲಿ ಭಾರತದ ಮಹಿಳೆಗೂ ಸ್ಥಾನ ...!!!!


ಇಂದಿನ ಆಧುನಿಕ ಯುಗದಲ್ಲಿ ಎಲ್ಲಾ ರಂಗಗಳಲ್ಲೂಮಹಿಳೆಯರು ತಮ್ಮ ಛಾಪು ಮೂಡಿಸಿದ್ದು ತಾವು ಯಾವುದೇ ರೀತಿಯಲ್ಲೂ ಪುರುಷರಿಗಿಂತ ಕಡಿಮೆ ಇಲ್ಲ ಎಂದು ಸಾಬೀತುಪಡಿಸಿದ್ದಾರೆ. ಪ್ರಮುಖ ಪತ್ರಿಕೆಗಳಾದ ದಿ ಫೈನಾನ್ಷಿಯಲ್ ಟೈಮ್ಸ್ ಹಾಗೂ ಫಾರ್ಚೂನ್ ವಿಶ್ವದ ಪ್ರಭಾವೀ ಮಹಿಳೆಯರ ಪಟ್ಟಿ ಬಿಡುಗಡೆ ಮಾಡಿದ್ದು ವಿವರ ಇಂತಿದೆ.ಅದರಲ್ಲಿ ಭಾರತದ  ಮಹಿಳೆ   ಸ್ಥಾನ  ಸಿಕ್ಕಿದ್ದು ಹೆಮ್ಮೆಯ ವಿಷಯ. 

1. ಐರೀನ್ ರೊಸೆನ್ಫೆಲ್ಡ್: ಅಮೇರಿಕಾದ ಉದ್ಯಮಿ ಐರೀನ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು ಇವರು ಕಳೆದ 30 ವರ್ಷಗಳಿಂದ ಆಹಾರ ಹಾಗೂ ಪಾನೀಯ ಉದ್ಯಮದಲ್ಲಿದ್ದಾರೆ. ಅಮೇರಿಕಾದ ಕ್ರಾಫ್ಟ್ ಫುಡ್ಸ್ ನ ಅದ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧೀಕಾರಿಯಾಗಿರುವ ಇವರು, ಮೊದಲು ಪೆಪ್ಸಿಕೋ ಕಂಪೆನಿಯಲ್ಲಿ ಕೆಲಸ ಮಾಡುತಿದ್ದು 2006ರಲ್ಲಿ ಕ್ರಾಫ್ಟ್ ಕಂಪೆನಿ ಸೇರಿದರು. ಫೋರ್ಬ್ಸ್ ಪತ್ರಿಕೆಯಲ್ಲಿ ಅನೇಕ ವರ್ಷಗಳ ಕಾಲ ಇವರು ವಿಶ್ವದ 100 ಪ್ರಭಾವೀ ಮಹಿಳೆಯರ ಪಟ್ಟಿಯಲ್ಲಿಯೂ ಇದ್ದರು.
2. ಇಂದ್ರಾ ನೂಯಿ: ವಿಶ್ವದ ಎರಡನೇ ಅತೀ ದೊಡ್ಡ ಆಹಾರ ಮತ್ತು ಪಾನೀಯ ತಯಾರಿಕಾ ಕಂಪೆನಿ ಪೆಪ್ಸಿಕೋ ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಅದ್ಯಕ್ಷೆಯಾಗಿರುವ ಭಾರತೀಯ ಇಂದ್ರಾ ನೂಯಿ ಅವರಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನ ಸಿಕ್ಕಿದ್ದು , ಇವರು 1994 ರಲ್ಲಿ ಕಂಪೆನಿ ಸೇರಿ 2001 ರಲ್ಲಿ ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿ ಆದರು. ಇವರು 2007 ರಲ್ಲಿ 44 ವರ್ಷಗಳ ಇತಿಹಾಸ ಹೊಂದಿರುವ ಪೆಪ್ಸಿ ಕಂಪೆನಿಯ 5 ನೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದರು. ಫೋಬ್ಸ್ ಪತ್ರಿಕೆ ಇವರನ್ನು 2008 ರಲ್ಲಿ ವಿಶ್ವದ ಮೂರನೇ ಪ್ರಭಾವೀ ಮಹಿಳೆ ಎಂದು ಗುರುತಿಸಿದ್ದು, ವಾಲ್ ಸ್ಟ್ರೀಟ್ ಜರ್ನಲ್ ಕೂಡ 50 ಪ್ರಭಾವಿಗಳ ಪಟ್ಟಿಯಲ್ಲಿ ಸ್ಥಾನ ನೀಡಿದೆ.
3.ಮಾರಿಸ್ಸ ಮೇಯರ್: ಅಮೇರಿಕಾ ಸಂಜಾತೆ ಯಾಹೂ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಅದ್ಯಕ್ಷೆ ಮಾರಿಸ್ಸ ಮೇಯರ್ ಅವರು ಮೂರನೇ ಸ್ಥಾನದಲ್ಲಿದ್ದು ಫಾರ್ಚೂನ್ 500 ಕಂಪೆನಿಗಳ ಅತ್ಯಂತ ಕಿರಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದಾರೆ. 1999 ರಲ್ಲಿ ಗೂಗಲ್ ಸೇರಿದ ಇವರು ಕಂಪೆನಿಯ ಮೊದಲ ಮಹಿಳಾ ಇಂಜಿನಿಯರ್ ಕೂಡ ಆಗಿದ್ದು ಗೂಗಲ್ ನ ವಿವಿಧ ಹುದ್ದೆಗಳಲ್ಲಿ ೧೫ ವರ್ಷ ಕಾರ್ಯನಿರ್ವಹಿಸಿದ್ದಾರೆ. ಕಳೆದ ಜುಲೈ 2012ರಲ್ಲಿ ಇವರು ಯಾಹೂ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡರು.
4 ಎಲ್ಲೆನ್ ಕುಲ್ಮಾನ್: ಅಮೇರಿಕಾದ ಎಲ್ಲೆನ್ ಕುಲ್ಮಾನ್ ಅವರು ಈ ಐ ಡು ಪಾಂಟ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಅದ್ಯಕ್ಷೆ ಯಾಗಿದ್ದು ಜನರಲ್ ಮೋಟಾರ್‍ಸ್ ನ ಮಾಜಿ ನಿರ್ದೇಶಕಿಯೂ ಆಗಿ ಕೆಲಸ ಮಾಡಿದ್ದಾರೆ. 2011ರಲ್ಲಿ ಫೋಬ್ಸ್ ಮ್ಯಾಗಜೀನ್ ಇವರಿಗೆ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ನೀಡಿತ್ತು. 206 ವರ್ಷಗಳ ಇತಿಹಾಸವಿರುವ ಡು ಪಾಂಟ್ ಕಂಪೆನಿಯ ಮೊದಲ ಮಾಹಿಳಾ ಮುಖ್ಯಸ್ಥೆಯೂ ಇವರಾಗಿದ್ದಾರೆ.
5. ಏಂಜೆಲಾ ಬ್ರಾಲೇ : ಅಮೇರಿಕಾದ ದೊಡ್ಡ ಆರೋಗ್ಯ ರಕ್ಷಾ ಕಂಪೆನಿ ವೆಲ್ ಪಾಯಿಂಟ್ ನ ಅದ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿರುವ ಎಂಜೆಲಾ ಕಂಪೆನಿಯ ವಿವಿದ ಹುದೆಗಳಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದಾರೆ.
6. ಆಂಡ್ರಿಯಾ ಜಂಗ್ : ಅಮೇರಿಕಾದ ಏವನ್ ಕಂಪೆನಿಯ ಅದ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ 1999 ರಲ್ಲಿ ನೇಮಕಗೊಂಡ ಜಂಗ್ ಅವರು ವಿವಿದ ಹುದೆಗಳಲ್ಲಿ ಮೂರು ದಶಕಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. 2011 ರಲ್ಲಿ ಕಂಪೆನಿಯ ನೂತನ ಮುಖ್ಯಸ್ಥರ ಆಯ್ಕೆಯ ಜವಾಬ್ದಾರಿಯನ್ನೂ ಇವರಿಗೆ ನೀಡಲಾಗಿದ್ದು ಸೇವಾವಧಿಯನ್ನು ಕೂಡ ಎರಡು ವರ್ಷ ಮುಂದುವರೆಸಲಾಗಿದೆ.
7. ವಜೀನಿಯಾ ರೊಮೆಟ್ಟಿ: ವಿಶ್ವದ ಖ್ಯಾತ ಐಬಿಎಮ್ ಕಂಪೆನಿಯ ಅದ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿರುವ ಇವರು ಐಬಿಎಮ್ ನ ಮೊದಲ ಮಹಿಳಾ ಮುಖ್ಯಸ್ಥೆ ಆಗಿದ್ದಾರೆ. ಇವರಿಗೆ ಪಟ್ಟಿಯಲ್ಲಿ 7 ನೇ ಸ್ಥಾನ ನೀಡಲಾಗಿದ್ದು ಫಾರ್ಚೂನ್ ಮ್ಯಾಗಜೀನ್ ನಲ್ಲಿ ವಿಶ್ವದ 50 ಪ್ರಭಾವೀ ಮಹಿಳೆಯರ ಪಟ್ಟಿಯಲ್ಲಿ ಸತತ 7 ನೇ ವರ್ಷ 7 ನೇ ಸ್ಥಾನದಲ್ಲಿದ್ದಾರೆ. 2011 ರ ಡಿಸೆಂಬರ್ ನಲ್ಲಿ ಇವರನ್ನು ಕಂಪೆನಿಯ ಮುಖ್ಯಸ್ಥೆಯನ್ನಾಗಿ ನೇಮಿಸಲಾಯಿತು.
8 ಉರ್ಸುಲ ಬರ್ನ್ಸ್: ಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿರುವ ಬರ್ನ್ಸ್ ಅವರು ಜೆರಾಕ್ಸ್ ಕಂಪೆನಿಯ ಅದ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೂ ಆಗಿದ್ದಾರೆ. ಆಫ್ರಿಕನ್ ಅಮೇರಿಕನ್ನರಾದ ಇವರು 1980 ರಲ್ಲಿ ಜೆರಾಕ್ಸ್ ಕಂಪೆನಿಗೆ ಸೇರ್ಪಡೆಗೊಂಡರು.
9. ಮೆಗ್ ವಿಟ್ಮಾನ್ : ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪೆನಿ ಹ್ಯೂಲೆಟ್ ಪ್ಯಾಕರ್ಡ್(ಹೆಚ್‌ಪಿ) ಯ ಅದ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿರುವ ವಿಟ್ಮಾನ್ ಅವರು ೯ ನೇ ಸ್ಥಾನದಲ್ಲಿದ್ದು ಮೊದಲು ವಾಲ್ಟ್ ಡಿಸ್ನೆ ಕಂಪೆನಿಯಲ್ಲಿ ಉಪಾದ್ಯಕ್ಷೆಯೂ ಆಗಿದ್ದರು. 2011ರ ಡಿಸೆಂಬರ್ ನಲ್ಲಿ ಕಂಪೆನಿಯ ನಿರ್ದೇಶಕ ಮಂಡಳಿಗೆ ಆಯ್ಕೆಯಾದ ಅವರು ಕಂಪೆನಿಯ ವಿವಿಧ ಸ್ಥರಗಳಲ್ಲಿ ಮೂರು ದಶಕಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ.
10. ಶೆರಿಲ್ ಸಾಂಡ್‌ಬರ್ಗ್ : ವಿಶ್ವದ ಜನಪ್ರಿಯ ಹಾಗೂ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್ ಬುಕ್ ನ ನಿರ್ದೇಶಕ ಮಂಡಳಿಯಲ್ಲಿದ್ದು ಮುಖ್ಯ ಆಪರೇಟಿಂಗ್ ಆಫೀಸರ್ ಅಗಿ ಕಾರ್ಯ ನಿರ್ವಹಿಸುತ್ತಿರುವ ಶೆರಿಲ್ ಅವರು ಮೊದಲು ಗೂಗಲ್ ನಲ್ಲಿ ಸೇವೆ ಸಲ್ಲಿಸುತಿದ್ದರು. ಟೈಮ್ ಮ್ಯಾಗಜೀನ್ ನ ವಿಶ್ವದ 100 ಪ್ರಭಾವಿಗಳ ಪಟ್ಟಿಯಲ್ಲೂ ಇವರಿಗೆ ಸ್ಥಾನ ನೀಡಲಾಗಿದೆ.

    ತೊಟ್ಟಿಲನ್ನು ತೂಗುವ ಕೈ ಇಡೀ ಜಗತ್ತನ್ನೇ ಆಳಬಹುದು ಎನ್ನುವಂತೆ  ಭಾರತದ  ಮಹಿಳೆ  ಮಹಿಳಾಮಣಿಗಳ ಸಾಧನೆ ಅಪ್ರತಿಮವಾದುದು ಹಾಗೇ ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯು ತನ್ನನ್ನು ತಾನು ತೊಡಗಿಸಿಕೊಂಡು ಸ್ವಾವಲಂಬಿಯಾಗುತ್ತಿದ್ದಾಳೆ. ಇನ್ನು ಹೆಚ್ಚು  ಹೆಚ್ಚು ಮಹಿಳೆಯರು  ಬೆಳಕಿಗೆ ಬರುವಂತಾಗಲಿ....!!!!!! 

25 Jun 2012

ಕೊಳವೆ ಬಾವಿ ದುರಂತ: ಕೊನೆಗೂ ಅಸುನೀಗಿದ ಪುಟಾಣಿ ಮಾಹಿ..!!


 ಗುರಗಾಂವ್: ಹರಿಯಾಣದ ಮನೆಸರ್ ಪ್ರದೇಶದ ಕೊಳವೆ ಬಾವಿಯೊಂದರ ರಲ್ಲಿ 70 ಅಡಿ ಆಳದಲ್ಲಿ ಸಿಲುಕಿ, ಸಾವು ಬದುಕಿನ ಮದ್ಯ ಹೋರಾಟ ನಡೆಸಿದ್ದ ನಾಲ್ಕು ವರ್ಷದ ಪುಟ್ಟ ಮಗು  ಮಹಿ ಸತತ ನಾಲ್ಕು ದಿನಗಳ ಹರಸಾಹಸದಿಂದ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗೆ ಭಾನುವಾರ ಶವವಾಗಿ ಸಿಕ್ಕಿದ್ದಾಳೆ.ಮಹಿ ತನ್ನ ಮನೆಯ ಹತ್ತಿರದಲ್ಲ್ಲಿಯೇ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಅಲ್ಲಿಯೇ ಇದ್ದ ತೆರೆದ ಕೊಳವೆ ಬಾವಿಯಲ್ಲಿ ಅಕಸ್ಮಾತಾಗಿ ಆಯತಪ್ಪಿ ಬುಧವಾರ 20, ರಂದು ಬಿದ್ದಿದ್ದಳು.ಕೂಡಲೇ ವಿಷಯ ತಿಳಿದ ರಕ್ಷಣಾ ಕಾರ್ಯಕರ್ತರು ಬಂದು ನೆಲ ಅಗೆದು ಬದುಕಿಸಲು ಪ್ರಯತ್ನಪಟ್ಟರು ಯಶಸ್ವಿಯಾಗದೆ ಮಗು ಸತ್ತು ಶವವಾಗಿ ಸಿಕ್ಕಿ ದುರಂತವಾಗಿದೆ.ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.
 ಪ್ರಯತ್ನಪಟ್ಟು ಮಹಿಯನ್ನು ಕೊಳವೆಬಾವಿಯಿಂದ ಹೊರತೆಗೆಯಲಾಯಿತು. ಆದರೆ ಆಕೆ ಬದುಕಿ ಉಳಿದಿರಲಿಲ್ಲ ಎಂದು ಗುರಗಾಂವ್ ಜಿಲ್ಲಾಧಿಕಾರಿ ಪಿ.ಸಿ.ಮೀನಾ ಹೇಳಿದರು.86 ಗಂಟೆಗಳ ಸತತ ಹಗಲಿರುಳು ಎನ್ನದೆ ಕಾರ್ಯಾಚರಣೆ ಮಾಡಿದ ಸಿಬ್ಬಂದಿಗಳ ಕಾರ್ಯ ವ್ಯರ್ತವಾಗಿದೆ.   
ಕಳೆದ ನಾಲ್ಕು ದಿನಗಳಿಂದ ರಕ್ಷಣಾ ಕಾರ್ಯ ಕೈಗೊಂಡಿದ್ದ ತಂಡಕ್ಕೆ ಮಧ್ಯದಲ್ಲಿ ದೊಡ್ಡ ಕಲ್ಲು ಬಂಡೆಯೊಂದು ಎದುರಾಗಿ ಶೀಘ್ರ ರಕ್ಷಣಾ ಕಾರ್ಯಕ್ಕೆ ತೊಡಕು ಉಂಟುಮಾಡಿತ್ತು. ಆದರೆ ಆ ಬಂಡೆ ಕೊರೆಯುವ ಕಾರ್ಯ ಕಳೆದ ರಾತ್ರಿಯಷ್ಟೇ ಮುಗಿಸಿದ ತಂಡ ನಿರೀಕ್ಷಿತ ಗುರಿ ತಲುಪಿದ್ದರು. ಆದರೆ ದುರದೃಷ್ಟವಶಾತ್ ಅಷ್ಟರಲ್ಲಾಗಲೇ ಮಹಿ ಕೊನೆಉಸಿರೆಳೆದಿದ್ದಳು. ಓ ದೇವರೇ ಆ ಪುಟ್ಟ ಮಗುವಿನ ಮೇಲೆ ನಿನಗೆ ಕರುಣೆ ಬರಲಿಲ್ಲವೇ...ಹೆತ್ತ ತಾಯಿಯ ನೋವ ನಿನಗೆ ಕೇಳಿಸಲಿಲ್ಲವೇ..ಮಹಿಯ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸೋಣ ಓ ಮುದ್ದು ಕಂದಾ ಎಲ್ಲೆಗೆ ಹೋದೆ...ಮತ್ತೆ ಹುಟ್ಟಿ ನಿನ್ನ ತಾಯಿಯ ಮಡಿಲು  ಸೇರು.....!!!     

19 Jun 2012

ಪಾಪಿ..!! ತಾನೆ ಹೆತ್ತ 3ವರ್ಷದ ಹಸುಗೂಸಿನ ಮೇಲೆ ಅತ್ಯಾಚಾರವೆಸಗಿದ ನೀಚ ಪ್ರೆಂಚನ ಪಾಸ್ಕಲ್ ಬಂಧನ

ಬೆಂಗಳೂರು, ಜೂ.19:ಪಾಪಿ!! ತಾನೆ ಹೆತ್ತ 3  ವರ್ಷದ  ಹಸುಗೂಸಿನ ಮೇಲೆ ಅತ್ಯಾಚಾರವೆಸಗಿದ ನೀಚ ತಂದೆ ಪ್ರೆಂಚನ ಪಾಸ್ಕಲ್ ನನ್ನು ಹೈಗ್ರೌಂಡ್ ಪೊಲೀಸರು ಮಂಗಳವಾರ ಬೆಳಗ್ಗೆ ಬಂಧಿಸಿದ್ದಾರೆ.ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಅತ್ಯಾಚಾರವೆಸಗಿದ ಆರೋಪ ಫ್ರೆಂಚ್ ರಾಯಭಾರಿ ಕಚೇರಿ ಸಿಬ್ಬಂದಿ ಪಾಸ್ಕಲ್ ಮಜೂರಿಯರ್ ಎದುರಿಸುತ್ತಿದ್ದಾರೆ.ಆರೋಪಿಯನ್ನು ಬಂಧಿಸುವಂತೆ ಬೆಂಗಳೂರಿನ ಜನರಪ್ರತಿಬಟನೆ ಮಾಡಿದ್ದಾರೆ. ವೈದ್ಯಕೀಯ ತಪಾಸಣೆಗಾಗಿ ಪಾಸ್ಕಲ್ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ಪ್ರಮಾಣಪತ್ರ ಪಡೆಯಲಾಗಿದ್ದು .ತನ್ನ ಪುಟ್ಟ ಮಗಳ ಮೇಲೆ ಅತ್ಯಾಚಾರವೆಸಗಿದ್ದು ವೀರ್ಯಾಣ  ಕಲೆಗಳ ಗುರುತಿನಿಂದ ಆರೋಪ ಸಾಬಿತಾಗಿದೆ .ನಂತರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವವದು ಎಂದು ಡಿಸಿಪಿ(ಕೇಂದ್ರ) ರವಿಕಾಂತೇಗೌಡ ಹೇಳಿದ್ದಾರೆ
ಈಗ ವಿಚಾರಣೆಗೆ  ಒಳಪಡಿಸಲಾಗಿದೆ.ಫ್ರೆಂಚ್ ರಾಯಭಾರಿ ಕಚೇರಿಯ ಸಿಬ್ಬಂದಿ ಎನ್ನುವುದಕ್ಕೆ ಯಾವುದೇ ದಾಖಲೆ ಹೊಂದಿರದ ಫಾಸ್ಕಲ್ ಸಾಧಾರಣ ವೀಸಾದಲ್ಲಿದ್ದಾನೆ. ಪೊಲೀಸರ ಕ್ರಮ ಕೈಗೊಳ್ಳಲು ಯಾವುದೇ ಅಭ್ಯಂತರವಿಲ್ಲ ಎಂದು Ministry of External Affairs (MEA)ವಿದೇಶಾಂಗ ಸಚಿವಾಲಯ ಕೂಡಾ ಒಪ್ಪಿಗೆ ಸೂಚಿಸಿತ್ತು.
ಮಗಳು ಎರಡು ವರ್ಷ ಹಸುಗೂಸು ಆಗಿದ್ದಾಗಿಂದಲೇ ಈತ ಇಂತಹ ಹೇಯ ಕೃತ್ಯ ನಡೆಸುತ್ತಿದ್ದನು.ಮಗಳ ಮೇಲೆ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯ ತಪ್ಪಿಸಲು ಪ್ರಯತ್ನಿಸಿ ವಿಫಲಳಾದ ತಾಯಿ ಕೊನೆಗೆ ಹೈಗ್ರೌಂಡ್ ಪೋಲೀಸರ ಮೊರೆ ಹೋಗಿದ್ದಾರೆ.ನಗರದ ಅರಮನೆ ಮೈದಾನದ ಸಮೀಪವಿರುವ ಫ್ರೆಂಚ್ ರಾಯಭಾರ ಕಚೇರಿಯಲ್ಲಿ ಮುಖ್ಯ ಜಂಟಿ ಛಾನ್ಸಿಲರ್ ಅಧಿಕಾರಿಯಾಗಿದ್ದ ಪಾಸ್ಕಲ್ ಪತ್ನಿ ನೀಡಿದ ದೂರಿನ ಅನ್ವಯ ಹೈಗ್ರೌಂಡ್ ಪೊಲೀಸರು ಈತನನ್ನು ತನ್ನ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದರು.
ಆರೋಪಿ ಪಾಸ್ಕಲ್ 2001ರಲ್ಲಿ ಮದುವೆಯಾಗಿದ್ದನು. ಕೇರಳದ ಎರ್ನಾಕುಲಂನಲ್ಲಿ ವಾಸವಾಗಿದ್ದ ವೇಳೆ 2005ರಲ್ಲಿ ದಂಪತಿಗಳಿಗೆ ಗಂಡು ಮಗು ಜನಿಸಿತ್ತು. 2008ರಲ್ಲಿ ಅಲ್ಲಿದ ಬೆಂಗಳೂರಿಗೆ ವರ್ಗಾವಣೆಯಾದ ನಂತರ ಆಗಸ್ಟ್ ನಲ್ಲಿ ಹೆಣ್ಣು ಮಗು ಜನ್ಮತಾಳಿತು. ಅದಾದ ನಂತರ ಮತ್ತೊಂದು ಮಗು ಹುಟ್ಟಿದ್ದು ಮೂರು ಮಕ್ಕಳೊಂದಿಗೆ ವಸಂತನಗರದ ಪೈನ್ ವ್ಯೂ ಅಪಾರ್ಟ್ಮೆಂಟ್ ನಲ್ಲಿ ಕುಟುಂಬ ವಾಸವಾಗಿದ್ದರು.
ಕೆಟ್ಟದಾಗಿ  ವರ್ತಿಸುತ್ತಿದ್ದ ಈತ 2010ರಿಂದ ತನ್ನ ಮಗಳ ಮೇಲೆ ಅತ್ಯಾಚಾರವೆಸಗುತ್ತಿದ್ದ. ಮಗಳ ಮೇಲೆ ಹಲ್ಲೆ, ದೈಹಿಕ ಹಿಂಸೆ ನೀಡುತ್ತಿದ್ದ. ದಿನಗಳು ಕಳೆದಂತೆ ಮಗಳು ಮೂರು ವರ್ಷ 10 ತಿಂಗಳು ತುಂಬಿದ ಮಗಳಿಗೆ ಬುದ್ದಿ ಬಂದು ತಾಯಿಯೊಂದಿಗೆ ತನ್ನ ನೋವು ಹೇಳಿಕೊಳ್ಳುವುದಕ್ಕೆ ಮುಂದಾಗುತ್ತದೆ. 2012ರಲ್ಲಿ ಹಿಂಸೆಗೆ ಒಳಗಾಗಿದ್ದ ಹಸುಗೂಸು ನಿತ್ಯಕರ್ಮಕ್ಕೆ ಹೋಗಬೇಕಾದರೆ ನೋವು ಆಗುತ್ತದೆ ಎಂದು ತಾಯಿ ಬಳಿ ನೋವು ತೋರಿಕೊಂಡಿತ್ತು. ಏನೂ ಅರಿಯದ ಈ ಕಂದಮ್ಮ ತಂದೆ ಮಾಡುತ್ತಿದ್ದ ಕ್ರೌರ್ಯವನ್ನು ತಾಯಿಯ ಬಳಿ ಬಿಚ್ಚಿಟ್ಟಿತು.
ಕಳೆದ ಬುಧವಾರದಂದು (ಜೂನ್ 13) ವೈದ್ಯಕೀಯ ತಪಾಸಣೆಯ ವರದಿ ಪಡೆಯುವುದಕ್ಕಾಗಿ ಪತ್ನಿ ಮನೆಕೆಲಸದಾಕೆಯನ್ನು ಮಗಳ ಬಳಿ ಬಿಟ್ಟು ಹೋಗಿದ್ದಾಗ ಮನೆಗೆ ಬಂದ ಪಾಸ್ಕಲ್ ಮಗಳನ್ನು ರೂಮಿಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿಕೊಂಡಿದ್ದನು.ಆಗ  ಅದೇ ತಪ್ಪು ಮಾಡಿ  ಪಾಸ್ಕಲ್ ಕಚೇರಿಗೆ ತೆರಳಿದ್ದಾನೆ. ಮನೆಗೆ ಬಂದ ಹೆಂಡತಿಗೆ  ವಿಷಯ  ತಿಳಿದು ಇದರಿಂದ ಮನ ನೊಂದ ತಾಯಿ ಮಗಳನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಆ ವೇಳೆ ವೈದ್ಯರು ಕಂದಮ್ಮನ ಮೇಲೆ ಅತ್ಯಾಚಾರ ನಡೆದಿರುವುದನ್ನು ದೃಢಪಡಿಸಿದ್ದಾರೆ.ಮಿತಿಮೀರಿದ ಪಾಪಿ ನೀಚ ತಂದೆ ಕಾಮದಾಟಕ್ಕೆ ಬಲಿಯಾಗಿ ಮಗು ಈಗ  ನೋವನ್ನು ಅನುಭವಿಸುತ್ತಿದೆ.ಹೆತ್ತವರೇ ರಕ್ಷಕರಾಗದೆ   ಭಕ್ಷಕರಾದರೆ ಹೆಣ್ಣಿನ ಪಾಡು ಕೇಳುವವರು ಯಾರು?ಹೆಣ್ಣಿಗೆ ಈ ಹಾಳು ಕೆಟ್ಟ  ಲೋಕದಲ್ಲಿ ರಕ್ಷಣೆಯೇ ಇಲ್ಲವೇ?ಹೆಣ್ಣೇ ಏನು ನಿನ್ನ ಪಾಡು?      

4 Jun 2012

ಲಾಗೊಸ್ ನಲ್ಲಿ ವಿಮಾನ ದುರಂತ ಪ್ರಯಾಣಿಕರ ಸಜೀವ ದಹನ..!!


ಲಾಗೋಸ್: ನೈಜೀರಿಯಾದ ರಾಜಧಾನಿ ಲಾಗೋಸ್ ನಗರದಿಂದ ಅಬುಜಾಗೆ ಹೊರಟಿದ್ದ ಪ್ರಯಾಣಿಕರ ವಿಮಾನವು ಭಾನುವಾರ ಮದ್ಯಾಹ್ನ 2 ಅಂತಸ್ತಿನ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದು, ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ 153 ಪ್ರಯಾಣಿಕರು,ಕಟ್ಟಡದಲ್ಲಿರುವ ಜನರು  ಸಾವನ್ನಪ್ಪಿರಬಹುದು    ಎಂದು ಶಂಕಿಸಲಾಗಿದೆ.
`ಡಾನಾ` ಸಂಸ್ಥೆಗೆ ಸೇರಿದ ವಿಮಾನವು ಲಾಗೋಸ್ ನಗರದ ಜನವಸತಿ ಪ್ರದೇಶದ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದು ಸ್ಫೋಟಗೊಂಡಿತು. ಇದರಿಂದ ತಕ್ಷಣ ಬೆಂಕಿ ಹೊತ್ತಿಕೊಂಡು ದಟ್ಟವಾದ ಹೊಗೆ ಆವರಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ಆಗ ಅಲ್ಲಿ ಜನಸಂದಣಿ ದಟ್ಟವಾಗಿತ್ತು ಎಂದು ತಿಳಿದುಬಂದಿದೆ.   
ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ನೈಜೀರಿಯಾದ ನಾಗರಿಕ ವಿಮಾನಯಾನ ಇಲಾಖೆ ಹೇಳಿದೆ. ಇದರ ಹೊರತಾಗಿ ವಿಮಾನ ಡಿಕ್ಕಿ ಹೊಡೆದ ಕಟ್ಟಡದಲ್ಲಿದ್ದ ಜನರೂ ಘಟನೆಯಲ್ಲಿ ಮೃತಪಟ್ಟಿರುವ ಶಂಕೆ ಇದೆ.ದುರಂತದಲ್ಲಿ ವಿಮಾನದಲ್ಲಿಯಾ ಪ್ರಯಾಣಿಕರ ದೇಹಗಳು ಸುಟ್ಟು ಕರಕಲಾಗಿದ್ದು ಗುರುತು ಪತ್ತೆಯಾಗುತ್ತಿಲ್ಲ ಆದ್ದರಿಂದ ಶವಗಳನ್ನು ಗುರುತಿಸಲು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಹೀಗಾಗಿ ಮೃತರ ಸಂಖ್ಯೆ 153ನ್ನು ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದುವರೆಗೂ ಘಟನೆಯಲ್ಲಿ ಮೃತಪಟ್ಟವರ ನಿಖರವಾದ ಸಂಖ್ಯೆ ಲಭ್ಯವಾಗಿಲ್ಲ. ಬದುಕುಳಿದ ಪ್ರಯಾಣಿಕರಿಗಾಗಿ ಶೋಧ ಕಾರ್ಯ ನಡೆದಿದೆ. ಘಟನೆ ನಡೆದ ತಕ್ಷಣ ಅಗ್ನಿಶಾಮಕ ಮತ್ತು ತುರ್ತುಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ನೈಜೀರಿಯಾ ನಾಗರಿಕ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.
ಲಾಗೋಸ್‌ನಿಂದ ವಿಮಾನ ಹೊರಟಿದ್ದ ವೇಳೆ ಆಗಸ ಸ್ವಚ್ಛಂದವಾಗಿತ್ತು. ಹೀಗಾಗಿ ಅಪಘಾತಕ್ಕೆ ಹವಾಮಾನ ವೈಪರೀತ್ಯ ಕಾರಣವಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.
ಆದರೆ ವಿಮಾನ ಹಠಾತ್ತನೆ ಪತನಕ್ಕೀಡಾದುದಕ್ಕೆ ತಾಂತ್ರಿಕ ದೋಷ ಕಾರಣವಿರಬಹುದೇ ಎಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ನೂರಾರು ಜನ ತಂಡೋಪ ತಂಡವಾಗಿ ತಂಡವಾಗಿ ಜನರು ಬರುತ್ತಿದ್ದು ಯಮರಾಯನ ಅಟ್ಟಹಾಸಕ್ಕೆ ಮರುಕಪಡುತ್ತಿದ್ದಾರೆ.ಇದು ನಿಜಕ್ಕೂ ಹೃದಯವಿದ್ರಾವಕ ಘಟನೆಯಾಗಿದೆ.ಘಟನೆ ನಡೆದಾಗ ಅಲ್ಲಿಯೇ ಇದ್ದ ಪ್ರತ್ಯಕ್ಹ್ಸದರ್ಸಿ ಗಿಫ್ಟ್ ಒನಿಬೋ :ನಾನು ಅಲ್ಲಿ ವಿಮಾನ ಹಾರಡುತ್ತಿದುದನ್ನ ನೋಡುತ್ತಿದ್ದೆ ಆಗೆ ಒಮ್ಮಿಂದೊಮ್ಮೆಲೆ ವಿಮಾನ ಕೆಳಗೆ ಬಂದು ಕಟ್ಟಡಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿತ್ತು"ಎಂದಿದ್ದಾರೆ.ಲಾಗೊಸ್   ನಗರದಲ್ಲಿ  ಸುಮಾರು 15 ಮಿಲಿಯನ್  ಜನಸಂಖ್ಯೆ ವಾಸಿಸುತ್ತಿದ್ದಾರೆ. 

30 May 2012

ಮಾವಿನ ಹಣ್ಣು ಆಹಾ!!

ಮಾವು "ಹಣ್ಣುಗಳ ರಾಜ" ನೆಂದೇ ಹೆಸರುವಾಸಿಯಾದ  ಮಾವು ಅಂದ್ರೆ ಯಾರಿಗೆ ಇಷ್ಟವಾಗೋಲ್ಲ ?ನಿಮಗೂ ಬಾಯಿಯಲ್ಲಿ ನೀರು ಬರತ್ತೆ ಅಲ್ವ! ಹಾಗಿದ್ರೆ ಮೊದ್ಲು ಮಾರ್ಕೆಟಿಗೆ ಹೋಗಿ ಮಾವಿನಹಣ್ಣ ಖರೀದಿ ಮಾಡಿ ತಡವಾದರೆ ಸಿಗೋಲ್ಲ ಸಿಸನ ಮುಗದು ಹೋಗತ್ತೆ ಬೇಗ ಬೇಗ !! ಬರಿ ಹಣ್ಣ ತಂದು ತಿಂದರೆ ಹೇಗೆ ಅದ್ರ ಬಗ್ಗೆ ತಿಳ್ದಕೋಳೋದ ಬೇಡವಾ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಹೇಗೆಲ್ಲ ಎಷ್ತೆಷ್ಟ ಪ್ರಮಾಣದಲ್ಲಿ ತಿನ್ನಬೇಕು ಅನ್ನೋದನ್ನ ತಿಳ್ಕೊಳ್ಳಬೇಕಾ?ಹಾಗಿದ್ರೆ ಮುಂದೆ ನೋಡಿ  ಮಾವಿನಹಣ್ಣು ಮಕ್ಕಳು ,ವಯ್ಯಸ್ಸಾದವರು,ಗರ್ಭಿಣಿಯರು ,ಬಾಣಂತಿಯರು ಎಲ್ಲರೂ ಮಿತ ಪ್ರಮಾಣದಲ್ಲಿ ತಿಂದರೆ ಆರೋಗ್ಯಕ್ಕೆ ಉತ್ತಮ ಸಿಹಿಯಾಗಿ ರುಚಿಕರವಾಗಿದೆ ಎಂದು ಅತಿಯಾಗಿ ತಿಂದರೆ  ವಾಂತಿ ಬೇಧಿ ಅತಿಸಾರ ಆಗುವ ಸಂಭವ ಹೆಚ್ಚು ಏಕೆಂದರೆ ಈ ಮಾವಿನ ಹಣ್ಣಲ್ಲಿ ಪೈಬರ ಅಂಶ ಹೆಚ್ಚಿರುತ್ತೆ,ಅಲ್ಲದೇ ಇದರಲ್ಲಿ ಕಾರ್ಬೋಹೈಡರೆಟ,ಕ್ಯಾಲ್ಸಿಯಂ ,ವಿಟಮಿನ ಹೇರಳ ಪ್ರಮಾಣದಲ್ಲಿರುವದರಿಂದ ಆರೋಗ್ಯಕ್ಕೆ ಅತೀ ಉತ್ತಮವಾದದ್ದು  ದಿನ ನಿತ್ಯದ ಒತ್ತಡ ಕೆಲಸದಿಂದ ಅತಿಯಾಯದ ಆಯಾಸ  ನಿವಾರಿಸಲು ದಿನನಿತ್ಯ 1 ಮಾವಿನ ಹಣ್ಣನ್ನು ತಿನ್ನಬೇಕು ಇದರಿಂದ ಯಾವಾಗಲು ದೇಹ ಹಾಗೂ ಮನಸು ಉಲ್ಲಾಸದಿಂದ ಇರುವದು ಹಣ್ಣು ಇರದಿದ್ದರೆ ಮಾವಿನ ರಸವನ್ನಾದರೂ ಕುಡಿದರೆ ದೇಹ ಚೈತನ್ಯದಾಯಕವಾಗುವದು .ಇದರಲ್ಲಿ ಕೊಲೆಸ್ಟ್ರಾಲ್ ಕಡಿಮೆ ಇದ್ದು ಹೆಚ್ಚು ಉಷ್ಣಾಂಶವಿರುತ್ತದೆ. ಈ ಹಸಿ ಮಾವಿನಕಾ ಯಿಂದ ಗುಳಂ ತಯಾರಿಸಿ ಚಪಾತಿಯೊಂದಿಗೆ ತಿಂದರೆ ರುಚಿಕರವಾಗಿರುತ್ತದೆ  ಅಲ್ಲದೇ ವಿವಿಧ ರೀತಿಯ ಉಪ್ಪಿನ ಕಾಯಿಯನ್ನು ಮಾಡಬಹುದು ಗರ್ಬಿಣಿಯಾರಿಗೆ ಬಯಕೆಗೆ  ಹುಳಿಮಾವು ಹೆಚ್ಚು ರಾಮಬಾಣವಿದ್ದಂತೆ.ಹೀಗೆ ತಿನ್ನಲು ಬೇಕಾಗುವ ಮಾವು ಉಪಯುಕ್ತವಾಗಿದೆ.
ಮಾವಿನ ಹಣ್ಣಿನ ವಿಧಗಳು :ರಸಪುರಿ,ಮಲಗೋಬ,ತೋತಾಪುರಿ,ನೀಲಂ ,ಅಲ್ಫನ್ಸೋ 
                      ಮಾವಿನ ಹಣ್ಣನ್ನು ತಿನ್ನುವದರಿಂದಾಗುವ ಉಪಯೋಗಗಳು :
ಒಣಗಿದ ಮಾವಿನಕಾಯಿಯೊಂದಿಗೆ ಜೇನು ತುಪ್ಪ ಬೆರೆಸಿ ತಿನ್ನುವದರಿಂದ ಮಧುಮೇಹ,ಪಿತ್ತಕೋಶದ ತೊಂದರೆ ನಿವಾರಣೆಯಾಗುವದು 
ಮಕ್ಕಳ  ತೂಕಹೆಚ್ಹಿ ಲವಲವಿಕೆಯಿಂದರಬಹುದು.
ದಿನನಿತ್ಯ  ತಿನ್ನುವದರಿಂದ ದೇಹ ಶಕ್ತಿಯುತವಾಗಿ ಉಲ್ಲಾಸದಿಂದ ಇರಬಹುದು.
ವಿಟಮಿನ  ಸಿ,ಕೆ,ಇ,ಬಿ6 ಹೇರಳ ಪ್ರಮಾಣದಲ್ಲಿ ದೊರೆಯುತ್ತದೆ.
ಕಾರ್ಬೋಹೈಡರೆಟ ಅಂಶ ಹೆಚ್ಚಿರುವದರಿಂದ ಸ್ತನ ಕ್ಯಾನ್ಸೆರ,ಹೃದಯದ ತೊಂದೆರೆ ನಿವಾರಣೆಯಾಗುವದು.
           ಮಾವಿನ  ಹಣ್ಣನ್ನು ಅತೀ ಹೆಚ್ಚು ತಿನ್ನುವದರಿದಾಗುವ ತೊಂದರೆಗಳು :
ಅತಿಯಾದರೆ  ಬೇಧಿ ಹೊಟ್ಟೆ ನೋವು ಬರುವ ಸಾದ್ಯತೆ ಹೆಚ್ಚು.
ಚಿಕ್ಕ ಮಕ್ಕಳಿಗೆ ಅತಿಯಾಗಿ ತಿನ್ನಿಸುವದು ಸೂಕ್ತವಲ್ಲ.
ಗರ್ಭಿಣಿಯರು ಹೆಚ್ಚಾಗಿ ತಿಂದರೆ ತೊಂದರೆಯಗುವದು 
ಅಜಿರ್ಣವಾದಾಗ ತಿನ್ನಕೂಡದು ಅಪಾಯ.ಮಿತವಿದ್ದರೆ ಸೂಕ್ತ.
ಕಿಡ್ನಿ   ತೊಂದರೆ ಇದ್ದವರು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.
ಸಕ್ಕರೆ ಕಾಯಿಲೆಗೆ ಕಡಿಮೆ ಉಪಯೋಗಿಸಬೇಕು. 
 ಅಷ್ಟೇ ಅಲ್ಲ  ಮಾವು  ಆಯುರ್ವೇದ ಔಷಧಿಯಲ್ಲಿಯೂ ಉಪಯುಕ್ತವಾಗಿದೆ ಇದು ಸರ್ವರೋಗಕ್ಕು ಸಂಜೀವಿನಿ ವಿಟಮಿನ್,ಹಾಗೂ ಕಣ್ಣಿನ ತೊಂದರೆ ಇರುವವರಿಗೆ ರೋಗನಿರೋಧಕವಾಗಿ ಕೆಲಸ ಮಾಡುತ್ತದೆ ,ಅಂಧತ್ವ ನಿವಾರಣೆಗೆ ಉಪಯುಕ್ತ ಓದುವ ಮಕ್ಕಳಿಗೆ ದಿವ್ಯೊಷಧ.ಆದರೆ ಮಿತವಾಗಿ ತಿಂದರೆ ಉತ್ತಮ.ಹಾಗೆ ತಿಂದು ಆರೋಗ್ಯವಂತರಾಗಿರಿ. 

5 Apr 2012

ಅಬ್ಬಾ!!ಬೆಂಗಳೂರಿಗಿಗ ಭಾರತದಲ್ಲಿಯೇ ಅತ್ಯಂತ ದುಬಾರಿ ನಗರವೆಂಬ ಹಣೆಪಟ್ಟಿ !!

ಏರುತಿದೆ ಏರುತಿದೆ ಉದ್ಯಾನ ನಗರಿ!! 
ಬೆಂಗಳೂರಿನ ಬೆಲೆ ಗರಿಗೆದರುತಿದೆ !
ಯಾರು ಬಲ್ಲರು? ಈ ಬೆಂಗಳೂರಿನ 
ಬೆಲೆಯ ಮಹಿಮೆಯ ಗಗನಕೆರುತಿದೆ!
ದುಬಾರಿ ಸಿಟಯ ಜನಸಾಮಾನ್ಯರ 
ಪಾಡೇನು ಆ ಪರಮಾತ್ಮನೇ ಬಲ್ಲನು!! 

ಭಾರತದಲ್ಲಿಯೇ ಸಿಲಿಕಾನ ಸಿಟಿ ಬೆಂಗಳೂರು ಅತೀ ಮುಂದುವರೆದ ನಗರವೆಂದು ಹೆಸರುವಾಸಿಯಾಗಿದೆ ಹಾಗೆಯೇ ಈಗ ಭಾರತದ ನಗರಗಳಲ್ಲಿಯೇ ಅತೀ ದುಬಾರಿ ನಗರ ಎಂಬ ಹಣೆಪಟ್ಟಿಯನ್ನು ಪಡೆದುಕೊಂಡು  ಅಗ್ರಸ್ಥಾನದಲ್ಲಿದೆ.
   
ಇತ್ತೀಚಿಗೆ ರಿಸೆರ್ವೆ ಬ್ಯಾಂಕ್ ಆಫ್ ಇಂಡಿಯಾ ನಡೆಸಿದ ಸಮೀಕ್ಷೆ ಪ್ರಕಾರ  ಯಾವ ಯಾವ ನಗರಗಳಲ್ಲಿ ದಿನನಿತ್ಯದ ಪದಾರ್ಥಗಳು ದುಬಾರಿಯಾಗಿವೆ ಯಾವ ಯಾವ ನಗರಗಳು ಅಗ್ಗ ಎಂದು ಪರಿಶೀಲಿಸಿದಾಗ  ಈ ವರದಿ ಬೆಳಕಿಗೆ
 ಬಂದಿದೆ.ಈ ವರದಿಯಿಂದ ಬೆಂಗಳೂರು ಭಾರತದಲ್ಲಿಯೇ ಅತ್ಯಂತ ದುಬಾರಿ ನಗರವೆಂಬ ಬಿರುದಿಗೆ ವಿರಾಜಮಾನವಾಗಿದೆ.ಹಾಗೆಯೇ ಕೆಂಪುಕೋಟೆ ದೆಹಲಿ ಕಡೆಯ ಸ್ಥಾನದಲ್ಲಿದೆ.ಇದಕ್ಕೆಮುಖ್ಯ ಕಾರಣ ಬೆಂಗಳೂರಿನಲ್ಲಿ  ಐ ಟಿ ಕಂಪನಿಗಳ ಉದ್ಯೋಗಿಗಳ ಹಚ್ಚಿನ ವೇತನ ಐಶಾರಾಮಿ ಜೀವನ.ಹಾಗೂ ಜನರು ವಿನೂತನ ಶೈಲಿಯ ಉಡುಗೆ ತೊಡುಗೆಗಳಿಗೆ ಮಾರುಹೊಗುತ್ತಿರುವದು ಅದರಲ್ಲೂ ಕಾಯಿಪಲ್ಯ,ಉಡುಪಗಳು,ದಿನನಿತ್ಯದ ಸಾಮಾನುಗಳು ಬೆಲೆ ಗಗನಕ್ಕೆರಿದರೆ ಮನೆ ಬಾಡಿಗೆಗಳು ಬೆಂಗಳೂರಿನಲ್ಲಿ ಮುಗಿಲುಮುಟ್ಟಿವೆ ಇಲ್ಲಿಯ ರಿಯಲ್ ಎಸ್ಟೇಟ್ ವ್ಯಾಪಾರಿಗಳು ಭರ್ಜರಿ ಹಣ ಗಳಿಸಿ ಲಕ್ಷದಿಪತಿಗಳಾಗುತ್ತಿದ್ದಾರೆ ಎಂದರೆ ತಪ್ಪಾಗಲಾರದು .ಅಷ್ಟೇ ಅಲ್ಲ ಇಲ್ಲಿಯ ಶಿಕ್ಷಣ,ಹೈಟೆಕ್ ಹೋಟೆಲ್ , ಆಸ್ಪತ್ರೆ ಖರ್ಚುಗಳು ಕರೆಂಟಬಿಲ್ ಎಲ್ ಪಿ ಜಿ ಗ್ಯಾಸ್ ಎಲ್ಲವು ಕೈಗೆಟುಕದಂತೆ ತುಟ್ಟಿಯಾಗುತ್ತುತ್ತಿದೆ ಇಷ್ಟೆಲ್ಲಾ ದುಬಾರಿಯಾಗಿರುವಾಗ ಬೆಂಗಳೂರು ದುಬಾರಿ ನಗರ ವೆಂಬ ಹಣೆಪಟ್ಟಿ ಅಂಟಿಸಿ  ಕೊಳ್ಳದಿದ್ದರೆ ಹೇಗೆ ? ಹೀಗೆ ಮುಂದುವರಿದಲ್ಲಿ ಬಡಜನರ,ಸಾಮಾನ್ಯರ ಪರಿಸ್ತಿತಿ ಕಷ್ಟವಾಗುವದು. ದುಡ್ಡಿದ್ದವರಿಗೆ ಮಾತ್ರ ಬೆಂಗಳೂರು ಎಂಬಂತಾಗಿದೆ ಒಟ್ಟಿನಲ್ಲಿ ಜನಸಾಮಾನ್ಯರ ಪರಿಸ್ಥಿತಿ ಅಧೋಗತಿಯಗುವದು ಬಡವರ ಉದ್ಧಾರ ಹೇಗೆ ತಾನೆ ಆದೀತು? ಕೊಳೆಗೇರಿ ನಿವಾಸಿಗಳು ,ಹಿಂದುಳಿದ ಅನಕ್ಷರಸ್ತರ ಪಾಡೇನು?ಹೊಟ್ಟೆಗಿಲ್ಲದೆ ಸಾಯಬೇಕೆ?ಇಂತಹ ವಾತಾವರಣದಲ್ಲಿ ಬದುಕು ಕಷ್ಟಕರ...ದುಬಾರಿ ಲೋಕದಲ್ಲಿ ಬಾಳು ಬದುಕೆಂಬ ದೋಣಿಯಲ್ಲಿ  ಸಾಗುವದು ಬಲು ಕಷ್ಟ....!!  
  
 :  ಭಾರತದ ಪ್ರತಿ ನಗರಗಳಲ್ಲಿ ಎಲ್ ಪಿ ಜಿ 14.5 ಕೆ.ಜಿ ಸಿಲಿಂಡರ್ ನ ಬೆಲೆ ಈ ಕೆಳಗಿನಂತಿವೆ:
  • ಬೆಂಗಳೂರು -415
  • ಕೋಲ್ಕತ್ತಾ  -405
  • ಮುಂಬೈ   -402 
  • ದೆಹಲಿ    - 399 
  • ಚೆನೈ    - 393             

21 Mar 2012

ಅಳುವಿನಂಚಿ ನಲ್ಲಿರುವ ಗುಬ್ಬಚ್ಚಿಗಳನ್ನೂ ಕಾಪಾಡಿ !!

ತಂಪಾದ ಗಾಳಿಯಲ್ಲಿ ಹಸಿರು ಸಿರಿಯಲಿ!!
ಇಂಪಾದ ಹಕ್ಕಿಗಳ ಕಲರವ ಸಿರಿ ಕಂಠದಲಿ!          
ಕೇಳಲು  ನೋಡಲು ಮನಸ್ಸಿಗೆ ಆನಂದ!
ಬಲು ಚಂದವೋ ಚಂದ ಗುಬ್ಬಚ್ಚಿ ಗಳ ಚಿಲಿಪಿಲಿ !!

ಇಂದಿನ ಅಧುನಿಕ ಅಭಿವೃದ್ದಿಯ ಭರಾಟೆಯಲ್ಲಿ ಚಿಲಿಪಿಲಿ ಹಕ್ಕಿಗಳ ಮಧುರ ದ್ವನಿ ಮಾಯವಾಗುತ್ತಿದೆ ಮಾನವ ಸಾಧನೆಯಾ ಮುಗಿಲು ಮುಟ್ಟಲು ಗುಬ್ಬಿಗಳ ವಿನಾಶಕ್ಕೆ ಕಾರಣನಾಗುತ್ತಿದ್ದು ವಿಶಾದನಿಯ ಸಂಗತಿ.ಅಳಿವಿನಂಚಿನಲ್ಲಿ ರುವ ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ ನೋಡುವ ಪುಟ್ಟ ಗುಬ್ಬಿಗಳ ನೋವಿನ ಕಥೆ ಕೇಳುವವರಿಲ್ಲ.ಗುಬ್ಬಿಗಳ ಪಾಡು ಹೇಳತೀರದು.ಹೆಚ್ಚುತ್ತಿರುವ ಮಾನವರ ವಿಚಾರಧಾರೆ ತಾಂತ್ರಿಕ ತರಂಗಾಂತರ ಅಲೆಗಳ ಹೊಡೆತಕ್ಕೆ ಸಿಲುಕಿ ಗುಬ್ಬಿಗಳು ಅಸುನೀಗಿ ಅವುಗಳ ಸಂತತಿ ಅಳುವಿನಂಚಿಗೆ ತಲುಪಿದೆ.ಹಿಂದೆಲ್ಲ ತಾಯಂದಿರು  ಅಳುವ ಪುಟ್ಟ ಮಕ್ಕಳಿಗೆ ಚಿಲಿಪಿಲಿ ಸದ್ದು ಮಾಡುವ ಗುಬ್ಬಚಿಗಳನ್ನು ತೋರಿಸಿ ಸಮಾಧಾನಪಡಿಸುತ್ತಿದ್ದರು.ಆದರೆ ಮುಂದಿನ ಯುವ ಪೀಳಿಗೆಗೆ ಗುಬ್ಬಿಗಳು ನೋಡಲು ಸಿಗುವದು ಸಂಶಯಾಸ್ಪದ. ಚಿತ್ರ ಬಿಡಿಸಿ ತೋರಿಸುವ ಪರಿಸ್ಥಿತಿ ಬರಬಹುದು.ಮರ ಗಿಡ ಬಳ್ಳಿ ಗಳಲ್ಲಿ ವಾಸವಾಗಿ ಅಡಗಿ ಕುಳಿತು ಇಂಪಾದ ಸ್ವರದಿಂದ ಹೊರಡಿಸುವ ಚಿಲಿಪಿಲಿ ನಿನಾದ ಎಂತವರಿಗೂ ಮನಸ್ಸಿಗೋ ಮುದನೀಡುವದು ಈಗ ಈ ಹಕ್ಕಿಗಳಿಗೆ ನೆಲೆಯಿಲ್ಲದಂತಾಗಿದೆ ಇದಕ್ಕೆಲ್ಲ ಮನುಷ್ಯನ ಅಟ್ಟಹಾಸವೇ ಕಾರಣವಾಗಿದೆ.ಅಂದರೆ ಮುಗಿಲೆತ್ತರಕ್ಕೆ ಬೆಳೆದುನಿಂತಿರುವ ಗಿಡ ಮರ ಬಳ್ಳಿ ಗಳನ್ನೂ ಕಡಿದುರಿಳಿಸಿ ಆ ಜಾಗಗಳಲ್ಲಿ ಐಶಾರಾಮಿ ಜೀವನಕ್ಕಾಗಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿ ಗುಬ್ಬಚಿಗಳಿಗೆ ಸೂರು ಇಲ್ಲದಂತೆ ಮಾಡುತ್ತಿದ್ದಾರೆ.ಆದರೆ ಅವುಗಳ ಸಂತತಿಯಾ ನೆನಪಿಗಾಗಿ ಉಳಿವಿಗಾಗಿ ಇಡೀ ಜಗತ್ತಿನಾದ್ಯಂತ ಪಕ್ಷಿ ಪ್ರೇಮಿಗಳು ಮೇ 21 2004 ರಿಂದ ಪ್ರತಿ ವರ್ಷ ಗುಬ್ಬಿಗಳ ದಿನವನ್ನಾಗಿ ಆಚರಿಸುತ್ತಿದ್ದಾರೆ ನೀವುಗಳು ಪಕ್ಷಿ ಪ್ರೆಮಿಗಳಿದ್ದರೆ ದಯತೋರಿ ಗುಬ್ಬಿಗಳ ಉಳಿವಿಗೆ ಸಹಕರಿಸಿ ಅವುಗಳಿಗಾಗಿ ಗಿಡಗಳನ್ನು ಬೆಳೆಸಿ ಮನೆಯ ಮುಂದೆ ಅವುಗಳ ಆಹಾರಕ್ಕಾಗಿ ಕಾಳು ಹಾಕಿ ನೀರು ತುಂಬಿಡಿ ನಿಮ್ಮ ಕೈಲಾದಷ್ಟು ಪ್ರಯತ್ನಿಸಿ. ಪಕ್ಷಿಪ್ರೇಮಿ ಸಲಿಂ ಅಲಿಯಂತೆ ಕರುಣೆ ತೋರಿಸಿ.ಅವರಂತೆ ನೀವು ಸಹೃದಯಿಗಾಳಾಗಿ ...ಆಗ ಗುಬ್ಬಿಗಳ ಉಳುವಿಗೆ ಬೆಳಕು ನೀಡಿದಂತಾಗುತ್ತದೆ ಹಾಗೆ ಮಾಡಿದಲ್ಲಿ ನಮ್ಮ ಜೀವನವು ಸಾರ್ಥಕವಾದಂತೆ ಪುಟ್ಟ ಗುಬ್ಬಚ್ಚಿಗಳಿಗೆ ಜೀವ ಕೊಟ್ಟ ಕೈ ನಮ್ಮದಾಗುವದು.ನೀವು ಮಾಡುತ್ತಿರಲ್ಲವೇ...!!

        ನೋವುಪಡುತ್ತಿರುವ ಗುಬ್ಬಿಗಳೇ ನಿವಾಗದಿರಿ ಗಲಿಬಿಲಿ 
        ನಿಮಗೂ ಒಂದು ಯುಗವಿದೆ ನಿಮಗೂ ಖಂಡಿತಾ!
        ಬರುವದು ಒಂದು ಶುಭದಿನ ಅಳುಕದಿರಿ,ಕುಗ್ಗದಿರಿ !!
        ಗುಬ್ಬಚ್ಚಿಗಳಿರಾ ಗುಬ್ಬಚ್ಚಿ ಗೂಡಿನಲ್ಲಿ ನೋಡುತಿರಿ 
        ಸದಾ ಕದ್ದು ಮುಚ್ಚಿ ಹರುಷದಿ ಸದಾ ಆನಂದದಿ!!
        ಸ್ವಚ್ಚಂದದಾ ಹಕ್ಕಿಗಳೇ ಅಳುಕದಿರಿ ಸದಾಸಂತಸದ 
        ಕ್ಷಣ ನಿಮ್ಮದಾಗಿರಲಿ ನಿಮ್ಮಗಳ  ಉಳಿವಿಗೆ
        ಇದೋ ನನ್ನ ಪುಟ್ಟ ಅರ್ಪಣೆ ..!!         

27 Feb 2012

ಇಂದು ಯೆಡಿಯುರಪ್ಪ ಗೆ 70 ನೆ ಹುಟ್ಟು ಹಬ್ಬದ ಸಂಭ್ರಮ..!!

ಬೆಂಗಳೂರು : ಇಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯೆಡಿಯುರಪ್ಪ ಗೆ  70  ನೆ ಹುಟ್ಟು ಹಬ್ಬದ ಸಂಭ್ರಮ ಕರ್ನಾಟಕದ ರಾಜಕೀಯದಲ್ಲಿ ಬಿಜೆಪಿ ಪಕ್ಷ ವನ್ನು ಕಟ್ಟಿ ಬೆಳೆಸಿ ಉನ್ನತ ಶಿಖರಕ್ಕೆರಿಸಿದ ಕೀರ್ತಿ ಶ್ರೀಮಾನ್  ಬಿ ಎಸ ಯೆಡಿಯುರಪ್ಪ ನವರಿಗೆ ಸಲ್ಲುತ್ತದೆ .ರಾಜಕೀಯದಲ್ಲಿ ಕಷ್ಟ ನೋವು ಗಳನ್ನೂ ಸಮನಾಗಿ ಅನುಭವಿಸಿದ ಧಿಮಂತ ರಾಜಕಾರಣಿಯಾಗಿ ಪಕ್ಷದ ,ರಾಜ್ಯದ ಅಭಿವೃದ್ದಿಗಾಗಿ ಶ್ರಮಿಸಿದ ಇವರು 69 ವರ್ಷವನ್ನು ಪೂರೈಸಿ 70 ನೆ ವಸಂತಕ್ಕೆ ಕಾಲಿಟ್ಟಿದ್ದಾರೆ.ಇಂದು ಹುಟ್ಟು ಹಬ್ಬವನ್ನು ಬೆಂಗಳೂರಿನ  ತೋಟದಪ್ಪ ಛತ್ರ ದಲ್ಲಿ ಬಿಜೆಪಿಯ ಸಚಿವರು,ಶಾಸಕರೂ ರಾಜಕೀಯದ ಗಣ್ಯರೊಂದಿಗೆ ಕುಟುಂಬದವರೊಂದಿಗೆ ಅದ್ದೂರಿಯಾಗಿ ಆಚರಿಸಿಕೊಂಡರು. ಆಗ ಮಾತನಾಡಿದ ಯೆಡಿಯುರಪ್ಪ ಜೆಡಿಎಸ್ ನಾಯಕರು ರಾಜಕೀಯದಲ್ಲಿ ಅವರ ವಿರುದ್ದ  ಕುತಂತ್ರ ಮಾಡುತ್ತಿದ್ದಾರೆ ಆದರೆ ನಾನೇನು ಹೆದರುವದಿಲ್ಲ ನಾನು ಮತ್ತೆ ಮುಖ್ಯ ಮಂತ್ರಿಯಗುತ್ತೇನೆ ಎಂದು ಗುಡುಗಿದರು.ಈ ಸಂದರ್ಭದಲ್ಲಿ   ಕೇಕ್ ಹಿಡಿದುಕೊಂಡು  ಬಂದಿದ್ದ ಅಂಧ ಮಕ್ಕಳೊಂದಿಗೆ  ಕೇಕ್ ಕತ್ತರಿಸಿ ಅದೇ ಚಾಕುವಿನಿಂದ ಅಂಧ ಮಗುವಿಗೆ ತಿನ್ನಿಸಿದ್ದು  ಅಭಿಮಾನಿಗಳಿಗೆ ಬೇಸರತಂದಿದೆ.ಸಮಾರಂಭದಲ್ಲಿ ಸಚಿವೆ ಶೋಭಾ ಕರಂದ್ಲಂಜೆ ಮಾತನಾಡಿ ಯೆಡಿಯುರಪ್ಪನವರಿಂದ ಸಹಾಯ ಪಡೆದವರೇ ಈಗ
ವೈರಿಗಳಗಿದ್ದಾರೆ ಎಂದು ಯೆಡಿಯುರಪ್ಪ ನವರೇ ಹೇಳಿಕೊಂಡಿದ್ದಾರೆ ಎಂದು ಭಾವುಕರಾಗಿ ಮಾತನಾಡಿ ಬರ್ತ್ ಡೇ ವಿಶ್ ಮಾಡಿದರು.ಕರ್ನಾಟಕದ ಮುಖ್ಯ ಮಂತ್ರಿ ಸದಾನಂದ ಗೌಡ ಕೂಡ ಸಮಾರಂಭದಲ್ಲಿ ಪಾಲ್ಗೊಂಡು ಶುಭ ಕೋರಿದರು. ಒಟ್ಟಿನಲ್ಲಿ ಸಂತಸದ ಸಂಭ್ರಮದಲ್ಲಿರುವ   'ಬರ್ತ್ ಡೇ ಬಾಯ್' ಗೆ ಹ್ಯಾಪಿ ಬರ್ತ್ ಡೇ ವಿಶಿಸ್...                           

16 Feb 2012

ಚಾಲೆಂಜಿಂಗ್ ಸ್ಟಾರ್ ದರ್ಶನ ಗೆ 35 ನೇ ಹುಟ್ಟು ಹಬ್ಬದ ಸಂಭ್ರಮ..!!

ಸ್ಯಾಂಡಲ್ ವುಡನ ಚಾಲೆಂಜಿಂಗ್ ಸ್ಟಾರ್ ದರ್ಶನ ಗೆ ಇಂದು 35 ನೇ ಹುಟ್ಟು ಹಬ್ಬದ ಸಂಭ್ರಮ ಎಲ್ಲೆಲ್ಲೂ ಕನ್ನಡದ  ಅಭಿಮಾನಿಗಳ ಹರ್ಷೋದ್ಗಾರ ಸಂತಸ ತುಂಬಿತುಳುಕುತ್ತಿದೆ. ಮುಂಜಾನೆಯಿಂದಲೇ ದರ್ಶನ್ ಮನೆ ಮುಂದೆ ಹುಟ್ಟು ಹಬ್ಬದ ಶುಭಾಷಯ ಕೋರಲು ಅಭಿಮಾನಿಗಳ ಮಹಾಪುರಾವೆ ಹರಿದು ಬಂದಿದ್ದು  ದರ್ಶನ್ ಗೂ ಸಂತಸ ತಂದಿದೆ  ಅದರೊಂದಿಗೆ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು.ಕನ್ನಡ ಚಿತ್ರ ರಂಗದಲ್ಲಿ ಅವರ ಸಾರಥಿ ಚಿತ್ರ ನಿರೀಕ್ಷೆಗೂ ಮಿರಿ ಭಾರಿ ಹಣ ಗಳಿಸಿದ್ದು ಈಗ ಅವರ ಮತ್ತೊಂದು ಚಿತ್ರ 'ಚಿಂಗಾರಿ' ಬಿಡುಗಡೆಗೊಂಡಿದ್ದು ಯಶಸ್ವಿಯುತವಾಗಿ ಪ್ರದರ್ಶನಗೊಳ್ಳುತ್ತಿದೆ.ಅಲ್ಲದೆ  ಅವರು ಮಾದ್ಯಮದವರೊಂದಿಗೆ ಮಾತನಾಡಿ ಈಗ ನನ್ನ ಪತ್ನಿಯೊಂದಿಗೆ ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದೇನೆ ಎಂದು ಹೇಳಿದ್ದಾರೆ.ತಮ್ಮ ಯಶಸ್ಸಿಗೆ ತಾಯಿಯೇ ಪ್ರೇರಣೆ ಎಂದರು  ಅಷ್ಟೇ ಅಲ್ಲ ಅವರ ಪತ್ನಿ ವಿಜಯಲಕ್ಷ್ಮಿದರ್ಶನ್ ಅವರ ಬರ್ತ್ ಡೇ ಗೆ 'ಜಾಗ್ವಾರ್' ಕಾರ್ ನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ.ಅವರ ತಾಯಿ  ಕೂಡ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ ಹಾಗೆ ಇನ್ನು ಅವರಿಗೇ ಚಿತ್ರ ರಂಗದಲ್ಲಿ ಹೆಚ್ಹು ಹೆಚ್ಹು ಅವಕಾಶಗಳು ದೊರೆಯಲಿ ಎಂಬುದು ಕನ್ನಡಿಗರ ಆಶಯ.ಏನೇ ಅಗಲಿ ಯಶಸ್ಸಿನತ್ತ ಹೆಜ್ಜೆ ಹಾಕುತ್ತಿರುವ ದರ್ಶನಗೆ ಮತ್ತೊಮ್ಮೆ  ಹುಟ್ಟು ಹಬ್ಬದ ಶುಭಾಶಯಗಳು..!ಒಟ್ಟಿನಲ್ಲಿ ದೇವರು ಅವರಿಗೆ ಆಯಸ್ಸು ಆರೋಗ್ಯವನ್ನು ನೀಡಿ ಕಾಪಾಡಲಿ ಎಂಬುದು ಅಭಿಮಾನಿಗಳ ಶುಭ ಹಾರೈಕೆ..!              

14 Feb 2012

ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಡಾ. ವಿ.ಎಸ್ ಆಚಾರ್ಯ ವಿಧಿವಶ..!!

ಬೆಂಗಳೂರ:ಕರ್ನಾಟಕದ ಉನ್ನತ ಶಿಕ್ಷಣ ಸಚಿವ ವಿ.ಎಸ್ ಆಚಾರ್ಯರವರು ಇಂದು ಮುಂಜಾನೆ ಬೆಂಗಳೂರಿನ ಸರ್ಕಾರಿ  ನೃಪತುಂಗಾ ಕಾಲೇಜಿನ ವಿಚಾರ ಸಂಕೀರ್ಣ ಕಾರ್ಯಕ್ರಮವೊಂದರಲ್ಲಿ ವೇದಿಕೆ ಏರುವ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಪ್ರಜ್ಞಾಹಿನರಾಗಿ ಆಸ್ಪತ್ರೆಗೆ ದಾಖಲಾಗಿದ್ದರು.ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇವರು ಪತ್ನಿ ಹಾಗು 4 ಪುತ್ರರು 1 ಪುತ್ರಿಯನ್ನು ಅಗಲಿದ್ದಾರೆ.ಇವರು 1940 ರಲ್ಲಿ ಉಡುಪಿಯಲ್ಲಿ ಜನಿಸಿ 1968 ರಲ್ಲಿ ಮೊದಲು ರಾಜಕೀಯ ಪ್ರವೇಶಿಸಿದ್ದರು.ನಂತರ 1983 ರಲ್ಲಿ ಉಡುಪಿಯ ಶಾಸಕರಾಗಿದ್ದರು 1996 ರಲ್ಲಿ ವಿಧಾನ ಪರಿಷತ ಅದ್ಯಕ್ಷರಾಗಿ,2006 ರಲ್ಲಿ ಗ್ರಹಸಚಿವರಾಗಿ,2010 ರಿಂದ  ಉನ್ನತಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.ಇವರು ಸಚಿವರಾಗಿ 6 ವರ್ಷ ಕಾರ್ಯ ನಿರ್ವಹಿಸಿದ್ದಾರೆ.ಎಂ ಬಿ ಬಿ ಎಸ್ ಪದವಿ ಪಡೆದು ರಾಜಕೀಯದಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.ಪ್ರಾಮಾಣಿಕ,ನಿಷ್ಟಾವಂತ ಧಿಮಂತ ರಾಜಕಾರಣಿಯಾಗಿ ಕಾರ್ಯನಿರ್ವಹಿಸಿದ್ದರು.ಕರ್ನಾಟಕದ ಮುಖ್ಯ ಮಂತ್ರಿ ಸದಾನಂದಗೌಡ ಮಾತನಾಡಿ ಸದಾ ರಾಜ್ಯದ ಅಭಿವೃದ್ದಿಯ ಬಗ್ಗೆ ಚಿಂತಿಸುತ್ತಿದ್ದ ಅಪರೂಪದ ನಿಷ್ಟಾವಂತ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ ಎಂದು ಕಂಬನಿ ಮಿಡಿದರು ಹಾಗು ಬಿ ಜೆ ಪಿ ಯ ಎಲ್ಲ ಶಾಸಕರು ,ರಾಜಕೀಯ ಗಣ್ಯರು ಅಂತಿಮ ನಮನ  ಸಲ್ಲಿಸಿ ಸಂತಾಪ ಸೂಚಿಸಿದರು.ಇಂದು ಅವರ ಅಂತ್ಯ ಸಂಸ್ಕಾರ ಉಡುಪಿಯಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ   ನೆರವೇರಲಿದೆ.ನಮ್ಮನೆಲ್ಲ  ಅಗಲಿದ ಡಾ.ವಿ .ಎಸ್ .ಆಚರ್ಯರವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ..!!             

10 Feb 2012

ಪಾಲಾಕ ಪಕೋಡ..!!

ಪಾಲಾಕ ಪಕೋಡ ಮಾಡಲು ಬೇಕಾಗುವ ಪದಾರ್ಥಗಳು :

  • ಕಡಲೆಹಿಟ್ಟು
  • ಮೈದಾಹಿಟ್ಟು
  • ಚಿರೋಟಿ ರವೆ
  • ಕತ್ತರಿಸಿದ ಈರುಳ್ಳಿ
  • ಹಿಡಿ ಪಾಲಾಕ ಸೊಪ್ಪು
  • ಪುದಿನಾ ಸೊಪ್ಪು
  • ಸ್ವಲ್ಪ ತುಪ್ಪ
  • ಅಚ್ಚಖಾರದಪುಡಿ
  • ಗರಂ ಮಸಾಲೆ
  • ರುಚಿಗೆ ಉಪ್ಪು
  • ಕರಿಯಲು ಎಣ್ಣೆ
  • ಸೋಡಾ
  • ಕೊತಂಬರಿ ಸೊಪ್ಪು
  • ಪಕೋಡಮಾಡುವವಿಧಾನ :ಮೊದಲು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ನಂತರ ಅದರಲ್ಲಿ ಕಡಲೆ ಹಿಟ್ಟು ,ಮೈದಾ ಹಿಟ್ಟು ,ರವೆ ,ಕತ್ತರಿಸಿದ ಈರುಳ್ಳಿ ,ಖಾರದ ಪುಡಿ,ಗರಂ ಮಸಾಲೆ ,ಉಪ್ಪು ,ಪಾಲಾಕ ,ಪುದಿನಾ ಸೊಪ್ಪು,ಕೊತಂಬರಿ ,ಸೋಡಾ ಹಾಕಿ ಪಕೋಡ ಹದಕ್ಕೆ ಕಲಸಿ ೧೦ ನಿಮಿಷ ನೆನೆಯಲು ಬಿಟ್ಟು ನಂತರ ಬಜ್ಜಿ ಹಾಗೆ ಎಣ್ಣೆಯಲ್ಲಿ ಕರಿಯುವದು ಬಿಸಿ ಬಿಸಿಯಾದ ಪಕೋಡ ಚಳಿಗಾಲದಲ್ಲಿ ಪುದಿನ ಚಟ್ನಿ,ಮೊಟೋ ಸಾಸನೊಂದಿಗೆ ತಿಂದರೆ ರುಚಿಕರವಾಗಿರುತ್ತೆ ಹಾಗಿದ್ದರೆ ತಡ ಏಕೆ ಮಾಡಿ ನೋಡಿ ...!

Share

Twitter Delicious Facebook Digg Stumbleupon Favorites More