27 Feb 2012

ಇಂದು ಯೆಡಿಯುರಪ್ಪ ಗೆ 70 ನೆ ಹುಟ್ಟು ಹಬ್ಬದ ಸಂಭ್ರಮ..!!

ಬೆಂಗಳೂರು : ಇಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯೆಡಿಯುರಪ್ಪ ಗೆ  70  ನೆ ಹುಟ್ಟು ಹಬ್ಬದ ಸಂಭ್ರಮ ಕರ್ನಾಟಕದ ರಾಜಕೀಯದಲ್ಲಿ ಬಿಜೆಪಿ ಪಕ್ಷ ವನ್ನು ಕಟ್ಟಿ ಬೆಳೆಸಿ ಉನ್ನತ ಶಿಖರಕ್ಕೆರಿಸಿದ ಕೀರ್ತಿ ಶ್ರೀಮಾನ್  ಬಿ ಎಸ ಯೆಡಿಯುರಪ್ಪ ನವರಿಗೆ ಸಲ್ಲುತ್ತದೆ .ರಾಜಕೀಯದಲ್ಲಿ ಕಷ್ಟ ನೋವು ಗಳನ್ನೂ ಸಮನಾಗಿ ಅನುಭವಿಸಿದ ಧಿಮಂತ ರಾಜಕಾರಣಿಯಾಗಿ ಪಕ್ಷದ ,ರಾಜ್ಯದ ಅಭಿವೃದ್ದಿಗಾಗಿ ಶ್ರಮಿಸಿದ ಇವರು 69 ವರ್ಷವನ್ನು ಪೂರೈಸಿ 70 ನೆ ವಸಂತಕ್ಕೆ ಕಾಲಿಟ್ಟಿದ್ದಾರೆ.ಇಂದು ಹುಟ್ಟು ಹಬ್ಬವನ್ನು ಬೆಂಗಳೂರಿನ  ತೋಟದಪ್ಪ ಛತ್ರ ದಲ್ಲಿ ಬಿಜೆಪಿಯ ಸಚಿವರು,ಶಾಸಕರೂ ರಾಜಕೀಯದ ಗಣ್ಯರೊಂದಿಗೆ ಕುಟುಂಬದವರೊಂದಿಗೆ ಅದ್ದೂರಿಯಾಗಿ ಆಚರಿಸಿಕೊಂಡರು. ಆಗ ಮಾತನಾಡಿದ ಯೆಡಿಯುರಪ್ಪ ಜೆಡಿಎಸ್ ನಾಯಕರು ರಾಜಕೀಯದಲ್ಲಿ ಅವರ ವಿರುದ್ದ  ಕುತಂತ್ರ ಮಾಡುತ್ತಿದ್ದಾರೆ ಆದರೆ ನಾನೇನು ಹೆದರುವದಿಲ್ಲ ನಾನು ಮತ್ತೆ ಮುಖ್ಯ ಮಂತ್ರಿಯಗುತ್ತೇನೆ ಎಂದು ಗುಡುಗಿದರು.ಈ ಸಂದರ್ಭದಲ್ಲಿ   ಕೇಕ್ ಹಿಡಿದುಕೊಂಡು  ಬಂದಿದ್ದ ಅಂಧ ಮಕ್ಕಳೊಂದಿಗೆ  ಕೇಕ್ ಕತ್ತರಿಸಿ ಅದೇ ಚಾಕುವಿನಿಂದ ಅಂಧ ಮಗುವಿಗೆ ತಿನ್ನಿಸಿದ್ದು  ಅಭಿಮಾನಿಗಳಿಗೆ ಬೇಸರತಂದಿದೆ.ಸಮಾರಂಭದಲ್ಲಿ ಸಚಿವೆ ಶೋಭಾ ಕರಂದ್ಲಂಜೆ ಮಾತನಾಡಿ ಯೆಡಿಯುರಪ್ಪನವರಿಂದ ಸಹಾಯ ಪಡೆದವರೇ ಈಗ
ವೈರಿಗಳಗಿದ್ದಾರೆ ಎಂದು ಯೆಡಿಯುರಪ್ಪ ನವರೇ ಹೇಳಿಕೊಂಡಿದ್ದಾರೆ ಎಂದು ಭಾವುಕರಾಗಿ ಮಾತನಾಡಿ ಬರ್ತ್ ಡೇ ವಿಶ್ ಮಾಡಿದರು.ಕರ್ನಾಟಕದ ಮುಖ್ಯ ಮಂತ್ರಿ ಸದಾನಂದ ಗೌಡ ಕೂಡ ಸಮಾರಂಭದಲ್ಲಿ ಪಾಲ್ಗೊಂಡು ಶುಭ ಕೋರಿದರು. ಒಟ್ಟಿನಲ್ಲಿ ಸಂತಸದ ಸಂಭ್ರಮದಲ್ಲಿರುವ   'ಬರ್ತ್ ಡೇ ಬಾಯ್' ಗೆ ಹ್ಯಾಪಿ ಬರ್ತ್ ಡೇ ವಿಶಿಸ್...                           

0 comments:

Post a Comment

Share

Twitter Delicious Facebook Digg Stumbleupon Favorites More