ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

5 Apr 2012

ಅಬ್ಬಾ!!ಬೆಂಗಳೂರಿಗಿಗ ಭಾರತದಲ್ಲಿಯೇ ಅತ್ಯಂತ ದುಬಾರಿ ನಗರವೆಂಬ ಹಣೆಪಟ್ಟಿ !!

ಏರುತಿದೆ ಏರುತಿದೆ ಉದ್ಯಾನ ನಗರಿ!! 
ಬೆಂಗಳೂರಿನ ಬೆಲೆ ಗರಿಗೆದರುತಿದೆ !
ಯಾರು ಬಲ್ಲರು? ಈ ಬೆಂಗಳೂರಿನ 
ಬೆಲೆಯ ಮಹಿಮೆಯ ಗಗನಕೆರುತಿದೆ!
ದುಬಾರಿ ಸಿಟಯ ಜನಸಾಮಾನ್ಯರ 
ಪಾಡೇನು ಆ ಪರಮಾತ್ಮನೇ ಬಲ್ಲನು!! 

ಭಾರತದಲ್ಲಿಯೇ ಸಿಲಿಕಾನ ಸಿಟಿ ಬೆಂಗಳೂರು ಅತೀ ಮುಂದುವರೆದ ನಗರವೆಂದು ಹೆಸರುವಾಸಿಯಾಗಿದೆ ಹಾಗೆಯೇ ಈಗ ಭಾರತದ ನಗರಗಳಲ್ಲಿಯೇ ಅತೀ ದುಬಾರಿ ನಗರ ಎಂಬ ಹಣೆಪಟ್ಟಿಯನ್ನು ಪಡೆದುಕೊಂಡು  ಅಗ್ರಸ್ಥಾನದಲ್ಲಿದೆ.
   
ಇತ್ತೀಚಿಗೆ ರಿಸೆರ್ವೆ ಬ್ಯಾಂಕ್ ಆಫ್ ಇಂಡಿಯಾ ನಡೆಸಿದ ಸಮೀಕ್ಷೆ ಪ್ರಕಾರ  ಯಾವ ಯಾವ ನಗರಗಳಲ್ಲಿ ದಿನನಿತ್ಯದ ಪದಾರ್ಥಗಳು ದುಬಾರಿಯಾಗಿವೆ ಯಾವ ಯಾವ ನಗರಗಳು ಅಗ್ಗ ಎಂದು ಪರಿಶೀಲಿಸಿದಾಗ  ಈ ವರದಿ ಬೆಳಕಿಗೆ
 ಬಂದಿದೆ.ಈ ವರದಿಯಿಂದ ಬೆಂಗಳೂರು ಭಾರತದಲ್ಲಿಯೇ ಅತ್ಯಂತ ದುಬಾರಿ ನಗರವೆಂಬ ಬಿರುದಿಗೆ ವಿರಾಜಮಾನವಾಗಿದೆ.ಹಾಗೆಯೇ ಕೆಂಪುಕೋಟೆ ದೆಹಲಿ ಕಡೆಯ ಸ್ಥಾನದಲ್ಲಿದೆ.ಇದಕ್ಕೆಮುಖ್ಯ ಕಾರಣ ಬೆಂಗಳೂರಿನಲ್ಲಿ  ಐ ಟಿ ಕಂಪನಿಗಳ ಉದ್ಯೋಗಿಗಳ ಹಚ್ಚಿನ ವೇತನ ಐಶಾರಾಮಿ ಜೀವನ.ಹಾಗೂ ಜನರು ವಿನೂತನ ಶೈಲಿಯ ಉಡುಗೆ ತೊಡುಗೆಗಳಿಗೆ ಮಾರುಹೊಗುತ್ತಿರುವದು ಅದರಲ್ಲೂ ಕಾಯಿಪಲ್ಯ,ಉಡುಪಗಳು,ದಿನನಿತ್ಯದ ಸಾಮಾನುಗಳು ಬೆಲೆ ಗಗನಕ್ಕೆರಿದರೆ ಮನೆ ಬಾಡಿಗೆಗಳು ಬೆಂಗಳೂರಿನಲ್ಲಿ ಮುಗಿಲುಮುಟ್ಟಿವೆ ಇಲ್ಲಿಯ ರಿಯಲ್ ಎಸ್ಟೇಟ್ ವ್ಯಾಪಾರಿಗಳು ಭರ್ಜರಿ ಹಣ ಗಳಿಸಿ ಲಕ್ಷದಿಪತಿಗಳಾಗುತ್ತಿದ್ದಾರೆ ಎಂದರೆ ತಪ್ಪಾಗಲಾರದು .ಅಷ್ಟೇ ಅಲ್ಲ ಇಲ್ಲಿಯ ಶಿಕ್ಷಣ,ಹೈಟೆಕ್ ಹೋಟೆಲ್ , ಆಸ್ಪತ್ರೆ ಖರ್ಚುಗಳು ಕರೆಂಟಬಿಲ್ ಎಲ್ ಪಿ ಜಿ ಗ್ಯಾಸ್ ಎಲ್ಲವು ಕೈಗೆಟುಕದಂತೆ ತುಟ್ಟಿಯಾಗುತ್ತುತ್ತಿದೆ ಇಷ್ಟೆಲ್ಲಾ ದುಬಾರಿಯಾಗಿರುವಾಗ ಬೆಂಗಳೂರು ದುಬಾರಿ ನಗರ ವೆಂಬ ಹಣೆಪಟ್ಟಿ ಅಂಟಿಸಿ  ಕೊಳ್ಳದಿದ್ದರೆ ಹೇಗೆ ? ಹೀಗೆ ಮುಂದುವರಿದಲ್ಲಿ ಬಡಜನರ,ಸಾಮಾನ್ಯರ ಪರಿಸ್ತಿತಿ ಕಷ್ಟವಾಗುವದು. ದುಡ್ಡಿದ್ದವರಿಗೆ ಮಾತ್ರ ಬೆಂಗಳೂರು ಎಂಬಂತಾಗಿದೆ ಒಟ್ಟಿನಲ್ಲಿ ಜನಸಾಮಾನ್ಯರ ಪರಿಸ್ಥಿತಿ ಅಧೋಗತಿಯಗುವದು ಬಡವರ ಉದ್ಧಾರ ಹೇಗೆ ತಾನೆ ಆದೀತು? ಕೊಳೆಗೇರಿ ನಿವಾಸಿಗಳು ,ಹಿಂದುಳಿದ ಅನಕ್ಷರಸ್ತರ ಪಾಡೇನು?ಹೊಟ್ಟೆಗಿಲ್ಲದೆ ಸಾಯಬೇಕೆ?ಇಂತಹ ವಾತಾವರಣದಲ್ಲಿ ಬದುಕು ಕಷ್ಟಕರ...ದುಬಾರಿ ಲೋಕದಲ್ಲಿ ಬಾಳು ಬದುಕೆಂಬ ದೋಣಿಯಲ್ಲಿ  ಸಾಗುವದು ಬಲು ಕಷ್ಟ....!!  
  
 :  ಭಾರತದ ಪ್ರತಿ ನಗರಗಳಲ್ಲಿ ಎಲ್ ಪಿ ಜಿ 14.5 ಕೆ.ಜಿ ಸಿಲಿಂಡರ್ ನ ಬೆಲೆ ಈ ಕೆಳಗಿನಂತಿವೆ:
  • ಬೆಂಗಳೂರು -415
  • ಕೋಲ್ಕತ್ತಾ  -405
  • ಮುಂಬೈ   -402 
  • ದೆಹಲಿ    - 399 
  • ಚೆನೈ    - 393             

Share

Twitter Delicious Facebook Digg Stumbleupon Favorites More