ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

10 Oct 2012

ಕನ್ನಡದ ಕಿರುತೆರೆಯ ನಟಿ ಹೆಮಶ್ರೀ ನಿಗೂಢ ಸಾವು ......!!!!!!

ಬೆಂಗಳೂರು: ಚಲನಚಿತ್ರ ಮತ್ತು ಕಿರು ತೆರೆ ನಟಿ ಹೇಮಶ್ರೀ ಅವರುನಿನ್ನೆ  ಮಂಗಳವಾರ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ನಗರದ ಚೆನ್ನಮ್ಮನ ಅಚ್ಚು ಕಟ್ಟು ಕೆರೆ ನಿವಾಸಿಯಾದ ಅವರು, ಬೆಳಿಗ್ಗೆ ಪತಿ ಸುಧೀಂದ್ರ ಬಾಬು ಅವರ ಜತೆ ಅನಂತಪುರದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು.

ಅವರ ಪತಿ  ಮಾರ್ಗ ಮಧ್ಯೆ ಅಸ್ವಸ್ಥ ಗೊಂಡ ಕಾರಣ, ಬೆಂಗಳೂರಿಗೆ ಕರೆತಂದು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಿದರು.
ಆದರೆ, 8 ಗಂಟೆಗೆ  ಮುಂಚೆಯೇ ಹೇಮಶ್ರೀ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು` ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಕಾರ್ಯಕ್ರಮವೊಂದರ ನಿರೂಪಕಿಯಾಗಿದ್ದ ಹೇಮಶ್ರೀ ಅವರು, ಸಿರಿವಂತ, ಮರ್ಮ, ವೀರಪರಂಪರೆ, ಉಗ್ರಗಾಮಿ ಸೇರಿದಂತೆ ಹಲವು ಕನ್ನಡ ಚಲನಚಿತ್ರಗಳಲ್ಲೂ ನಟಿಸಿದ್ದರು. 2008ರ ವಿಧಾನಸಭೆ ಚುನಾವಣೆಗೆ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಭ್ಯರ್ಥಿಯಾಗಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಅವರು, ಜೆಡಿಎಸ್ ಮುಖಂಡರೂ ಆಗಿದ್ದ ಸುಧೀಂದ್ರ ಬಾಬು ಅವರನ್ನು 2011ರ ಜೂನ್ 22ರಂದು ವಿವಾಹವಾಗಿದ್ದರು.

`ಪತಿ ಈಗಾಗಲೇ ಮದುವೆಯಾಗಿದ್ದು, ನನ್ನನ್ನು ವಂಚಿಸಿದ್ದಾರೆ`ಅವರಿಗೆ ಆಗಲೇ 48 ವರ್ಷ ವಯಸ್ಸಾಗಿತ್ತು ಎಂದು ಮದುವೆಯಾದ ಮರುದಿನವೇ ಹೇಮಶ್ರೀ ಪೊಲೀಸರಿಗೆ ದೂರು ನೀಡಿದ್ದರು.ಅಲ್ಲದೆ ಸಂದರ್ಶನವೊಂದರಲ್ಲಿ "ಹೆತ್ತವರಿಗೆ ದುಡ್ಡಿನ ಆಸೆ ತೋರಿಸಿ ನನಗೆ ಇಷ್ಟವಿಲ್ಲದ ಒತ್ತಾಯದ ಮದುವೆ ಮಾಡಿದ್ದಾರೆ ನಾನು ವಿಚ್ಛೇದನ ತೆಗೆದುಕೊಳ್ಳುತೇನೆ" ಎಂದು ಬೇಸರಗೊಂಡು ಕಣ್ಣಿರು ಇಟ್ಟಿದ್ದರು. ಇದರಿಂದ ಅವರಿಬ್ಬರಲ್ಲಿ ಅನ್ಯೋನ್ಯತೆ ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ.ಆದರೆ  ನಂತರ ದೂರನ್ನು ಹಿಂಪಡೆದು ಪತಿಯೊಂದಿಗೆ ನಗರದಲ್ಲಿ ವಾಸವಾಗಿದ್ದರು.

 `ಘಟನೆ ಸಂಬಂಧ ಅವರ ಪತಿ ಸುರೇಂದ್ರ  ಬಾಬು ಅವರ ವಿಚಾರಣೆ ನಡೆಸಲಾಗುತ್ತಿದೆ. ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾಸ್ತವಾಂಶ ತಿಳಿಯಲಿದೆ` ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು ಇಂದು ಮದ್ಯಾಹ್ನ ಪರೀಕ್ಷೆಯ ವರದಿ ಬಂದಿದ್ದು ನಟಿ ಹೇಮಶ್ರೀ ತಲೆ ,ಮೈಮೇಲೆ ಮತ್ತು ಮುಖದ ಮೇಲೆ ಗಾಯದ ಗುರುತು ಕಂಡು ಬಂದಿದ್ದು,ಹೊಟ್ಟೆಯಲ್ಲಿ ಕಪ್ಪು ಬಣ್ಣದ ದ್ರಾವಣ ಕಂಡು ಬಂದಿದ್ದು  ವಿಷಪ್ರಾಶನ ವಾಗಿರಬಹುದು ಎಂದು ಶಂಕಿಸಲಾಗಿದೆ ವಿಜ್ಞಾನ ಪ್ರಯೋಗಲಕ್ಕೆ ಕಳುಹಿಸಲಾಗಿದೆ.

ಇದು ಅನುಮಾನಸ್ಪದ ಸಾವು ಎಂದು ವೈದ್ಯರು ದ್ರುಡಿಕರಿಸಿದ್ದಾರೆ ಅವರ ಪತಿ 8 ಗಂಟೆಗಳ ಕಾಲ ಕಾರಿನಲ್ಲಿಯೇ ಇಟ್ಟುಕೊಂಡು ಬೆಂಗಳೂರಿನಲ್ಲಿ ಸುತ್ತಾಡಿದ್ದಾರೆ. ವರದಿಯಿಂದ ಸಾವಿನ ಹಿಂದಿನ ರಹಸ್ಯ ಬಹಿರಂಗವಾಗುವದು.ಶವವನ್ನು ಹೆತ್ತವರಿಗೆ ಒಪ್ಪಿಸಲಾಗಿದೆ.ಈಗಾಗಲೇ ಹಲವು ಪ್ರಕರಣಗಳಲ್ಲಿ ಸಿಲುಕೊಂಡಿರುವ  ಪತಿ ಸುರೇಂದ್ರ  ಬಾಬು ಅವರನ್ನು  ಈಗ ಪೊಲೀಸರು  ವಶಕ್ಕೆ ತೆಗೆದುಕೊಂಡಿದ್ದಾರೆ.
 ಇಂತಹ ಒಬ್ಬ ಒಳ್ಳೆಯ ನಟಿಯನ್ನು ಕನ್ನಡ ಚಿತ್ರ ರಂಗ ಕಳೆದುಕೊಂಡಿದ್ದು ನೋವಿನ ಸಂಗತಿ ಒಟ್ಟಿನಲ್ಲಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ....!!!!    ಕನ್ನಡದ ಕಿರುತೆರೆಯ ನಟಿ ಹೆಮಶ್ರೀ ನಿಗೂಢ ಸಾವು 

Share

Twitter Delicious Facebook Digg Stumbleupon Favorites More