ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

27 Feb 2012

ಇಂದು ಯೆಡಿಯುರಪ್ಪ ಗೆ 70 ನೆ ಹುಟ್ಟು ಹಬ್ಬದ ಸಂಭ್ರಮ..!!

ಬೆಂಗಳೂರು : ಇಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯೆಡಿಯುರಪ್ಪ ಗೆ  70  ನೆ ಹುಟ್ಟು ಹಬ್ಬದ ಸಂಭ್ರಮ ಕರ್ನಾಟಕದ ರಾಜಕೀಯದಲ್ಲಿ ಬಿಜೆಪಿ ಪಕ್ಷ ವನ್ನು ಕಟ್ಟಿ ಬೆಳೆಸಿ ಉನ್ನತ ಶಿಖರಕ್ಕೆರಿಸಿದ ಕೀರ್ತಿ ಶ್ರೀಮಾನ್  ಬಿ ಎಸ ಯೆಡಿಯುರಪ್ಪ ನವರಿಗೆ ಸಲ್ಲುತ್ತದೆ .ರಾಜಕೀಯದಲ್ಲಿ ಕಷ್ಟ ನೋವು ಗಳನ್ನೂ ಸಮನಾಗಿ ಅನುಭವಿಸಿದ ಧಿಮಂತ ರಾಜಕಾರಣಿಯಾಗಿ ಪಕ್ಷದ ,ರಾಜ್ಯದ ಅಭಿವೃದ್ದಿಗಾಗಿ ಶ್ರಮಿಸಿದ ಇವರು 69 ವರ್ಷವನ್ನು ಪೂರೈಸಿ 70 ನೆ ವಸಂತಕ್ಕೆ ಕಾಲಿಟ್ಟಿದ್ದಾರೆ.ಇಂದು ಹುಟ್ಟು ಹಬ್ಬವನ್ನು ಬೆಂಗಳೂರಿನ  ತೋಟದಪ್ಪ ಛತ್ರ ದಲ್ಲಿ ಬಿಜೆಪಿಯ ಸಚಿವರು,ಶಾಸಕರೂ ರಾಜಕೀಯದ ಗಣ್ಯರೊಂದಿಗೆ ಕುಟುಂಬದವರೊಂದಿಗೆ ಅದ್ದೂರಿಯಾಗಿ ಆಚರಿಸಿಕೊಂಡರು. ಆಗ ಮಾತನಾಡಿದ ಯೆಡಿಯುರಪ್ಪ ಜೆಡಿಎಸ್ ನಾಯಕರು ರಾಜಕೀಯದಲ್ಲಿ ಅವರ ವಿರುದ್ದ  ಕುತಂತ್ರ ಮಾಡುತ್ತಿದ್ದಾರೆ ಆದರೆ ನಾನೇನು ಹೆದರುವದಿಲ್ಲ ನಾನು ಮತ್ತೆ ಮುಖ್ಯ ಮಂತ್ರಿಯಗುತ್ತೇನೆ ಎಂದು ಗುಡುಗಿದರು.ಈ ಸಂದರ್ಭದಲ್ಲಿ   ಕೇಕ್ ಹಿಡಿದುಕೊಂಡು  ಬಂದಿದ್ದ ಅಂಧ ಮಕ್ಕಳೊಂದಿಗೆ  ಕೇಕ್ ಕತ್ತರಿಸಿ ಅದೇ ಚಾಕುವಿನಿಂದ ಅಂಧ ಮಗುವಿಗೆ ತಿನ್ನಿಸಿದ್ದು  ಅಭಿಮಾನಿಗಳಿಗೆ ಬೇಸರತಂದಿದೆ.ಸಮಾರಂಭದಲ್ಲಿ ಸಚಿವೆ ಶೋಭಾ ಕರಂದ್ಲಂಜೆ ಮಾತನಾಡಿ ಯೆಡಿಯುರಪ್ಪನವರಿಂದ ಸಹಾಯ ಪಡೆದವರೇ ಈಗ
ವೈರಿಗಳಗಿದ್ದಾರೆ ಎಂದು ಯೆಡಿಯುರಪ್ಪ ನವರೇ ಹೇಳಿಕೊಂಡಿದ್ದಾರೆ ಎಂದು ಭಾವುಕರಾಗಿ ಮಾತನಾಡಿ ಬರ್ತ್ ಡೇ ವಿಶ್ ಮಾಡಿದರು.ಕರ್ನಾಟಕದ ಮುಖ್ಯ ಮಂತ್ರಿ ಸದಾನಂದ ಗೌಡ ಕೂಡ ಸಮಾರಂಭದಲ್ಲಿ ಪಾಲ್ಗೊಂಡು ಶುಭ ಕೋರಿದರು. ಒಟ್ಟಿನಲ್ಲಿ ಸಂತಸದ ಸಂಭ್ರಮದಲ್ಲಿರುವ   'ಬರ್ತ್ ಡೇ ಬಾಯ್' ಗೆ ಹ್ಯಾಪಿ ಬರ್ತ್ ಡೇ ವಿಶಿಸ್...                           

16 Feb 2012

ಚಾಲೆಂಜಿಂಗ್ ಸ್ಟಾರ್ ದರ್ಶನ ಗೆ 35 ನೇ ಹುಟ್ಟು ಹಬ್ಬದ ಸಂಭ್ರಮ..!!

ಸ್ಯಾಂಡಲ್ ವುಡನ ಚಾಲೆಂಜಿಂಗ್ ಸ್ಟಾರ್ ದರ್ಶನ ಗೆ ಇಂದು 35 ನೇ ಹುಟ್ಟು ಹಬ್ಬದ ಸಂಭ್ರಮ ಎಲ್ಲೆಲ್ಲೂ ಕನ್ನಡದ  ಅಭಿಮಾನಿಗಳ ಹರ್ಷೋದ್ಗಾರ ಸಂತಸ ತುಂಬಿತುಳುಕುತ್ತಿದೆ. ಮುಂಜಾನೆಯಿಂದಲೇ ದರ್ಶನ್ ಮನೆ ಮುಂದೆ ಹುಟ್ಟು ಹಬ್ಬದ ಶುಭಾಷಯ ಕೋರಲು ಅಭಿಮಾನಿಗಳ ಮಹಾಪುರಾವೆ ಹರಿದು ಬಂದಿದ್ದು  ದರ್ಶನ್ ಗೂ ಸಂತಸ ತಂದಿದೆ  ಅದರೊಂದಿಗೆ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು.ಕನ್ನಡ ಚಿತ್ರ ರಂಗದಲ್ಲಿ ಅವರ ಸಾರಥಿ ಚಿತ್ರ ನಿರೀಕ್ಷೆಗೂ ಮಿರಿ ಭಾರಿ ಹಣ ಗಳಿಸಿದ್ದು ಈಗ ಅವರ ಮತ್ತೊಂದು ಚಿತ್ರ 'ಚಿಂಗಾರಿ' ಬಿಡುಗಡೆಗೊಂಡಿದ್ದು ಯಶಸ್ವಿಯುತವಾಗಿ ಪ್ರದರ್ಶನಗೊಳ್ಳುತ್ತಿದೆ.ಅಲ್ಲದೆ  ಅವರು ಮಾದ್ಯಮದವರೊಂದಿಗೆ ಮಾತನಾಡಿ ಈಗ ನನ್ನ ಪತ್ನಿಯೊಂದಿಗೆ ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದೇನೆ ಎಂದು ಹೇಳಿದ್ದಾರೆ.ತಮ್ಮ ಯಶಸ್ಸಿಗೆ ತಾಯಿಯೇ ಪ್ರೇರಣೆ ಎಂದರು  ಅಷ್ಟೇ ಅಲ್ಲ ಅವರ ಪತ್ನಿ ವಿಜಯಲಕ್ಷ್ಮಿದರ್ಶನ್ ಅವರ ಬರ್ತ್ ಡೇ ಗೆ 'ಜಾಗ್ವಾರ್' ಕಾರ್ ನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ.ಅವರ ತಾಯಿ  ಕೂಡ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ ಹಾಗೆ ಇನ್ನು ಅವರಿಗೇ ಚಿತ್ರ ರಂಗದಲ್ಲಿ ಹೆಚ್ಹು ಹೆಚ್ಹು ಅವಕಾಶಗಳು ದೊರೆಯಲಿ ಎಂಬುದು ಕನ್ನಡಿಗರ ಆಶಯ.ಏನೇ ಅಗಲಿ ಯಶಸ್ಸಿನತ್ತ ಹೆಜ್ಜೆ ಹಾಕುತ್ತಿರುವ ದರ್ಶನಗೆ ಮತ್ತೊಮ್ಮೆ  ಹುಟ್ಟು ಹಬ್ಬದ ಶುಭಾಶಯಗಳು..!ಒಟ್ಟಿನಲ್ಲಿ ದೇವರು ಅವರಿಗೆ ಆಯಸ್ಸು ಆರೋಗ್ಯವನ್ನು ನೀಡಿ ಕಾಪಾಡಲಿ ಎಂಬುದು ಅಭಿಮಾನಿಗಳ ಶುಭ ಹಾರೈಕೆ..!              

14 Feb 2012

ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಡಾ. ವಿ.ಎಸ್ ಆಚಾರ್ಯ ವಿಧಿವಶ..!!

ಬೆಂಗಳೂರ:ಕರ್ನಾಟಕದ ಉನ್ನತ ಶಿಕ್ಷಣ ಸಚಿವ ವಿ.ಎಸ್ ಆಚಾರ್ಯರವರು ಇಂದು ಮುಂಜಾನೆ ಬೆಂಗಳೂರಿನ ಸರ್ಕಾರಿ  ನೃಪತುಂಗಾ ಕಾಲೇಜಿನ ವಿಚಾರ ಸಂಕೀರ್ಣ ಕಾರ್ಯಕ್ರಮವೊಂದರಲ್ಲಿ ವೇದಿಕೆ ಏರುವ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಪ್ರಜ್ಞಾಹಿನರಾಗಿ ಆಸ್ಪತ್ರೆಗೆ ದಾಖಲಾಗಿದ್ದರು.ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇವರು ಪತ್ನಿ ಹಾಗು 4 ಪುತ್ರರು 1 ಪುತ್ರಿಯನ್ನು ಅಗಲಿದ್ದಾರೆ.ಇವರು 1940 ರಲ್ಲಿ ಉಡುಪಿಯಲ್ಲಿ ಜನಿಸಿ 1968 ರಲ್ಲಿ ಮೊದಲು ರಾಜಕೀಯ ಪ್ರವೇಶಿಸಿದ್ದರು.ನಂತರ 1983 ರಲ್ಲಿ ಉಡುಪಿಯ ಶಾಸಕರಾಗಿದ್ದರು 1996 ರಲ್ಲಿ ವಿಧಾನ ಪರಿಷತ ಅದ್ಯಕ್ಷರಾಗಿ,2006 ರಲ್ಲಿ ಗ್ರಹಸಚಿವರಾಗಿ,2010 ರಿಂದ  ಉನ್ನತಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.ಇವರು ಸಚಿವರಾಗಿ 6 ವರ್ಷ ಕಾರ್ಯ ನಿರ್ವಹಿಸಿದ್ದಾರೆ.ಎಂ ಬಿ ಬಿ ಎಸ್ ಪದವಿ ಪಡೆದು ರಾಜಕೀಯದಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.ಪ್ರಾಮಾಣಿಕ,ನಿಷ್ಟಾವಂತ ಧಿಮಂತ ರಾಜಕಾರಣಿಯಾಗಿ ಕಾರ್ಯನಿರ್ವಹಿಸಿದ್ದರು.ಕರ್ನಾಟಕದ ಮುಖ್ಯ ಮಂತ್ರಿ ಸದಾನಂದಗೌಡ ಮಾತನಾಡಿ ಸದಾ ರಾಜ್ಯದ ಅಭಿವೃದ್ದಿಯ ಬಗ್ಗೆ ಚಿಂತಿಸುತ್ತಿದ್ದ ಅಪರೂಪದ ನಿಷ್ಟಾವಂತ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ ಎಂದು ಕಂಬನಿ ಮಿಡಿದರು ಹಾಗು ಬಿ ಜೆ ಪಿ ಯ ಎಲ್ಲ ಶಾಸಕರು ,ರಾಜಕೀಯ ಗಣ್ಯರು ಅಂತಿಮ ನಮನ  ಸಲ್ಲಿಸಿ ಸಂತಾಪ ಸೂಚಿಸಿದರು.ಇಂದು ಅವರ ಅಂತ್ಯ ಸಂಸ್ಕಾರ ಉಡುಪಿಯಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ   ನೆರವೇರಲಿದೆ.ನಮ್ಮನೆಲ್ಲ  ಅಗಲಿದ ಡಾ.ವಿ .ಎಸ್ .ಆಚರ್ಯರವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ..!!             

10 Feb 2012

ಪಾಲಾಕ ಪಕೋಡ..!!

ಪಾಲಾಕ ಪಕೋಡ ಮಾಡಲು ಬೇಕಾಗುವ ಪದಾರ್ಥಗಳು :

  • ಕಡಲೆಹಿಟ್ಟು
  • ಮೈದಾಹಿಟ್ಟು
  • ಚಿರೋಟಿ ರವೆ
  • ಕತ್ತರಿಸಿದ ಈರುಳ್ಳಿ
  • ಹಿಡಿ ಪಾಲಾಕ ಸೊಪ್ಪು
  • ಪುದಿನಾ ಸೊಪ್ಪು
  • ಸ್ವಲ್ಪ ತುಪ್ಪ
  • ಅಚ್ಚಖಾರದಪುಡಿ
  • ಗರಂ ಮಸಾಲೆ
  • ರುಚಿಗೆ ಉಪ್ಪು
  • ಕರಿಯಲು ಎಣ್ಣೆ
  • ಸೋಡಾ
  • ಕೊತಂಬರಿ ಸೊಪ್ಪು
  • ಪಕೋಡಮಾಡುವವಿಧಾನ :ಮೊದಲು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ನಂತರ ಅದರಲ್ಲಿ ಕಡಲೆ ಹಿಟ್ಟು ,ಮೈದಾ ಹಿಟ್ಟು ,ರವೆ ,ಕತ್ತರಿಸಿದ ಈರುಳ್ಳಿ ,ಖಾರದ ಪುಡಿ,ಗರಂ ಮಸಾಲೆ ,ಉಪ್ಪು ,ಪಾಲಾಕ ,ಪುದಿನಾ ಸೊಪ್ಪು,ಕೊತಂಬರಿ ,ಸೋಡಾ ಹಾಕಿ ಪಕೋಡ ಹದಕ್ಕೆ ಕಲಸಿ ೧೦ ನಿಮಿಷ ನೆನೆಯಲು ಬಿಟ್ಟು ನಂತರ ಬಜ್ಜಿ ಹಾಗೆ ಎಣ್ಣೆಯಲ್ಲಿ ಕರಿಯುವದು ಬಿಸಿ ಬಿಸಿಯಾದ ಪಕೋಡ ಚಳಿಗಾಲದಲ್ಲಿ ಪುದಿನ ಚಟ್ನಿ,ಮೊಟೋ ಸಾಸನೊಂದಿಗೆ ತಿಂದರೆ ರುಚಿಕರವಾಗಿರುತ್ತೆ ಹಾಗಿದ್ದರೆ ತಡ ಏಕೆ ಮಾಡಿ ನೋಡಿ ...!

Share

Twitter Delicious Facebook Digg Stumbleupon Favorites More