19 Nov 2011

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ .

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು ಪಿಲ್ದಿಂಗ್ ಆಯ್ಕೆ ಮಾಡಿಕೊಂಡಿದ್ದು ಅನುಮಮಾನಕ್ಕೆ ಎಡೆಮಾಡಿಕೊಟ್ಟಿದೆ.ಟಾಸ್ ಗೆದ್ದರು ಯಾಕೆ ಬ್ಯಾಟಿಂಗ್ ತೆಗೆದುಕೊಳ್ಳಲಿಲ್ಲ ಎಂದು ವಿನೋದ್ ಬೇಸರ ವ್ಯಕ್ತಪಡಿಸಿದ್ದಾರೆ.ಆಗ ಪಂದ್ಯ ನಡೆಯುತಿದ್ದಾಗ ಪಟಪಟನೆ ವಿಕೆಟಗಳು ಉರಿಳಿದವು ಅದಕ್ಕೆ ಸೆಮಿಫೈನಲ್ ಮ್ಯಾಚ್ ಸೋಲಿಗೆ ಮ್ಯಾಚ್ ಪಿಕ್ಸಿಂಗ್ ಆಗಿದ್ದು ಕಾರಣವೆಂದಿದ್ದಾರೆ ಅಂದು ಸೋತಾಗ್ ವಿನೋದ್ ಡ್ರೆಸ್ಸಿಂಗ್ ರೂಮನಲ್ಲಿ ಆಟಗಾರರನ್ನು ಅಪ್ಪಿಕೊಂಡು ಕಣ್ಣಿರಿತ್ತಿದ್ದರು ಈಗ ಇದೇ ಈಡ್ದನ್ ಗಾರ್ಡನ್ ನಲ್ಲಿ ಟೆಸ್ಟ್ ಮ್ಯಾಚನಲ್ಲಿ ವೆಸ್ಟ್ ವಿಂಡಿಸ್ ವಿರುದ್ದ ಭಾರತ ಗೆದ್ದಿತು ಆಗ ವಿನೋದ್ 1996 ಸೆಮಿಪೈನಲ್ ನೆನಪಿಸಿಕೊಂಡು ಮತ್ತೆ ಕಣ್ಣಿರಿತ್ತರು .ಅಂದಿನ ಆಟ ಮೊಸದಾಟವಾಗಿತ್ತು ಅಂದು ಪಂದ್ಯದ ವೇಳೆ ಏನೇನು ನಡೆದಿತ್ತು ಅದಕ್ಕೆ ನಾನೆ ಪ್ರತ್ಯಕ್ಷ ಸಾಕ್ಷಿ ಎಂದು ಗಂಭಿರವಾಗಿ ಆರೋಪಿಸಿದ್ದಾರೆ ಅಲ್ಲದೆ ನಂತರ ನನ್ನನ್ನು ಪಂದ್ಯದಿಂದಲೇ ಕೈಬಿಡಲಾಯಿತು ಎಂದದಕ್ಕೆ ಇವರ ಮಾತಿಗೆ ಪ್ರತಿಕ್ರಿಯಿಸಿದ ಮಾಜಿ ನಾಯಕ ಅಜರುದ್ದೀನ್ 15 ವರ್ಷದ ನಂತರ ಈಗ ಈ ಬಗ್ಗೆ ಪ್ರಸ್ತಾಪಿಸುವ ಅಗತ್ಯವೇನಿದೆ. ಆಗ ಕಳಪೆ ಪ್ರದರ್ಶನದಿಂದಾಗಿ ಫಾರ್ಮ್ ನಲ್ಲಿ ಇರಲಿಲ್ಲ ಅದಕ್ಕಾಗಿ ವಿನೋದ್ ನನ್ನು ಕೈಬಿಡಲಾಗಿತ್ತು ಮ್ಯಾಚ್ ಪಿಕ್ಸಿಂಗ್ ಆಗಿರಲಿಲ್ಲ ಎಲ್ಲವು ತಂಡದ ನಿರ್ಧಾರ ದಿಂದಲೇ ನಡೆದಿತ್ತು ಎಂದು ತಿರುಗೇಟು ನೀಡಿದ್ದಾರೆ ಆದರೆ ಕಾಂಬಳೆ ಆಗಲೇ ಬಹಿರಂಗಪದಿಸಬಹುದಿತ್ತು ಈಗ ಬಾಯಿಮುಚ್ಚಿಕೊಂಡು ಸುಮ್ಮನಿರಲಿ ಎಂದು ಪ್ರತಿಕ್ರಿಯಿಸಿದ್ದಾರೆ ಜೊತೆ ಆಟಗಾರರೂ ಯಾವದೇ ರೀತಿಯ ಮ್ಯಾಚ್ ಪಿಕ್ಷಿಂಗ್ ನಡೆದಿಲ್ಲ ವಿನೋದ್ ಕಾಂಬಳೆ ಹೀಗೆ ಹೇಳುವದು ಸರಿಯಲ್ಲವೆಂದಿದ್ದಾರೆ.

0 comments:

Post a Comment

Share

Twitter Delicious Facebook Digg Stumbleupon Favorites More