12 Sept 2011

ನಿರ್ಮಾಪಕರ ಸಂಘದ ಕ್ರಮ : ಎತ್ತಿಗೆ ಜ್ವರ ಎಮ್ಮೆಗೇ ಬರೆ

ಬೆಂಗಳೂರು ಸೆ 11: ನಟಿ ನಿಖಿತಾರವರನ್ನು ಕನ್ನಡ ಚಲನಚಿತ್ರ ರಂಗದಿಂದ ಮೂರು ವರ್ಷಗಳ ಕಾಲ ನಿಷೇಧಿಸಿರುವ ಕ್ರಮ ಕ್ರಮ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೈತಿಕ ದಿವಾಳಿತನವನ್ನು ಎತ್ತಿ ತೋರಿಸಿದೆ.ತಮ್ಮ ಪತ್ನಿಯೊಂದಿಗೆ ಅತ್ಯಂತ ಹೀನಾಯವಾಗಿ ವರ್ತಿಸಿರುವ ನಟನನ್ನು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ನಿಷೇಧಿಸುವ ದಿಟ್ಟತನವನ್ನು ತೋರಿಸಬೇಕಾಗಿತ್ತು. ಅದು ಬಿಟ್ಟು ಎತ್ತಿಗೆ ಜ್ವರ ಎಮ್ಮೆಗೇ ಬರೆ ಹಾಕಿದಂತಾಗಿದೆ ನಿರ್ಮಾಪಕರ ಸಂಘದ ಈ ಕ್ರಮ.
ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ಸಂಬಂಧ ಕೆಲ ತಿಂಗಳಿಂದ ಹಳಸಿತ್ತು ಎನ್ನಲಾಗಿದೆ. ಇದಕ್ಕೆ ಕಾರಣಗಳು ಬಹಿರಂಗವಾಗಿಲ್ಲ. ನಿಖಿತಾ ಜತೆಗೆ ದರ್ಶನ್ ಸ್ನೇಹ ಮುಂದುವರಿಸಿದ್ದೇ ದಂಪತಿ ನಡುವಣ ವೈಮನಸ್ಯಕ್ಕೆ ಕಾರಣವಾಯಿತು ಎನ್ನುತ್ತವೆ ಚಿತ್ರರಂಗದ ಮೂಲಗಳು. ನಿಖಿತಾ ಪ್ರೇಮಪಾಶದಲ್ಲಿ ಸಿಲುಕಿದ ದರ್ಶನ್, ಧರ್ಮಪತ್ನಿ ವಿಜಯಲಕ್ಷ್ಮಿ ಜತೆಗಿನ ಸಂಬಂಧವನ್ನು ಕಡೆಗಣಿಸುತ್ತಾ ಬಂದಿದ್ದರು. ಇಬ್ಬರ ನಡುವೆ ಕಲಹವೂ ನಡೆಯುತ್ತಿತ್ತು.

0 comments:

Post a Comment

Share

Twitter Delicious Facebook Digg Stumbleupon Favorites More